ಪ್ರಾಬ್ಲಂ ಪ್ರಾಬ್ಲಂ: ಹೋಂಡಾ ಸಿವಿಕ್ಗೆ ಬೆಂಕಿ; ಮಾಲಿಕ ಸಾವು
ಅತಿ ವಿರಳ ಘಟನೆಗಳಲ್ಲಿ ಒಂದಾಗಿರುವ ದೆಹಲಿ ಹೋಂಡಾ ಸಿವಿಕ್ ಬೆಂಕಿ ಆಕಸ್ಮಿಕ ಪ್ರಕರಣದಲ್ಲಿ ಮಾಲಿಕ ಸಾವಿಗೀಡಾಗಿರುವ ದಾರುಣ ಘಟನೆ ವರದಿಯಾಗಿದೆ.
ರಾಷ್ಟ್ರ ರಾಜಧಾನಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಅಂಡರ್ಪಾಸ್ನಲ್ಲಿ 32ರ ಹರೆಯದ ರಾಜೇಶ್ ತಮ್ಮ ಹೋಂಡಾ ಸಿವಿಕ್ ಕಾರಿನಲ್ಲಿ ಸಂಚರಿಸುವ ವೇಳೆಯಲ್ಲಿ ಘಟನೆ ನಡೆದಿದೆ.
ಕಾರು ಎಂಜಿನ್ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ಕಾರಿನ ಸೆಂಟ್ರಲ್ ಲಾಕ್ ಸಿಸ್ಟಂ ಲಾಕ್ ಆಗಿದ್ದರಿಂದ ರಾಜೇಶ್ಗೆ ಕಾರಿನಿಂದ ಪಾರಾಗಲು ಸಾಧ್ಯವಾಗಿಲ್ಲ. ಇದು ಆತನನ್ನು ರಕ್ಷಿಸಲು ಪ್ರಯತ್ನಿಸಿದ ಆಗ್ನಿ ಶಾಮಕದಳದ ಪ್ರಯತ್ನವನ್ನು ವ್ಯರ್ಥಗೊಳಿಸಿತ್ತು.
ಪ್ರತ್ಯಕ್ಷದರ್ಶಿ ಹಾಗೂ ಅಲ್ಲಿ ಕರ್ತವ್ಯ ನಿರತರಾಗಿದ್ದ ಕಾವಲುಗಾರನ ಪ್ರಕಾರ, ಸಂಚರಿಸುತ್ತಿರುವ ಕಾರಿಗೆ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಕಾರಿನ ಸೆಂಟ್ರಲ್ ಲಾಕಿಂಗ್ ಸಿಸ್ಟಂ ಲಾಕ್ ಜಾಮ್ ಆಗಿದ್ದರಿಂದ ರಾಜೇಶ್ಗೆ ಪಾರಾಗಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಅಂದ ಹಾಗೆ ಘಟನೆ ಬಗ್ಗೆ ಯಾರೂ ಪ್ರತಿಕ್ರಿಯಿಸಿಲ್ಲ. ಹೋಂಡಾ ಇಂಡಿಯಾ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ.


Click it and Unblock the Notifications









