ಮುಂಗಾರು ಪ್ರವೇಶ; ಮಾರಾಟ ವೃದ್ಧಿ ನಿರೀಕ್ಷೆಯಲ್ಲಿ ಮಾರುತಿ
ಮುಂಗಾರು ಪ್ರವೇಶ ಪಡೆದಿರುವಂತೆಯೇ ದೇಶದ ಮುಂಚೂಣಿಯ ಕಾರು ಸಂಸ್ಥೆಗಳು ಸಹ ಮಾರುಕಟ್ಟೆಯಲ್ಲೂ ಧನಾತ್ಮಕ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ. ದೇಶದ ಅಗ್ರಪಂಕ್ತಿಯ ಕಾರು ಸಂಸ್ಥೆಗಳಾದ ಮಾರುತಿ ಸುಜುಕಿ ಇಂಡಿಯಾ, ಹ್ಯುಂಡೈ ಮೋಟಾರ್ ಇಂಡಿಯಾ ಹಾಗೂ ಟಾಟಾ ಮೋಟಾರ್ಸ್ ಸೇರಿದಂತೆ ಇತರ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ಧನಾತ್ಮಕ ಚಿಂತನೆಯಲ್ಲಿದೆ.
ಉತ್ತಮ ಮುಂಗಾರು ಮಳೆ ಯಾವತ್ತೂ ಮಾರುಕಟ್ಟೆಯಲ್ಲಿ ಧನಾತ್ಮಕ ಪರಿಣಾಮ ಬೀಳುತ್ತದೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಉಪಾಧ್ಯಕ್ಷರಾದ ರಾಕೇಶ್ ಶ್ರೀವಾಸ್ತವಾ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಇಯಾನ್, ಸ್ಯಾಂಟ್ರೊ, ಐ10 ಹಾಗೂ ಐ20 ಆವೃತ್ತಿಗಳು ಉತ್ತಮ ಮಾರಾಟ ದಾಖಲಿಸುವ ನಿರೀಕ್ಷೆಯಲ್ಲಿದ್ದಾರೆ.
ಅದೇ ರೀತಿ ಮಾರುತಿ ಕೂಡಾ ದೊಡ್ಡ ಪ್ರಮಾಣದಲ್ಲಿ ಆಲ್ಟೊ, ವ್ಯಾಗನಾರ್, ಸ್ವಿಫ್ಟ್ ಮಾಡೆಲ್ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುವ ನಿರೀಕ್ಷೆಯಲ್ಲಿದೆ. ಮುಂಗಾರು ಬೆನ್ನಲ್ಲೇ ಹಬ್ಬದ ಆವೃತ್ತಿ ಆರಂಭವಾಗಲಿದೆ. ಇವೆಲ್ಲವೂ ಧನಾತ್ಮಕ ಬೆಳವಣಿಗೆಯಾಗಿದೆ ಎಂದು ಕಾರು ಸಂಸ್ಥೆಗಳು ತಿಳಿಸಿವೆ.
ಇನ್ನು ಹೀರೊ ಮೊಟೊಕಾರ್ಪ್, ಬಜಾಜ್ ಹಾಗೂ ಟಿವಿಎಸ್ಗಳಂತಹ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ಸಹ ಉತ್ತಮ ಮಾನ್ಸೂನ್ ಪ್ರಭಾವಿ ಮಾರಾಟಕ್ಕೆ ನೆರವಾಗುವ ಭರವಸೆಯನ್ನಿಟ್ಟುಕೊಂಡಿದೆ.


Click it and Unblock the Notifications









