ನಮ್ಮ ದೇಶ ಸಿರಿವಂತರ ನಾಡಾಗಿ ಪರಿವರ್ತನೆ?
ಒಂದು ಕಾಲದಲ್ಲಿ ಅಲ್ಲಲ್ಲ ಈಗಲೂ ಬಡತನ ಬೀಡು ಬಿಟ್ಟಿರುವ ಅಖಂಡ ಭಾರತ ದೇಶ ಸಿರಿವಂತರ ನಾಡಾಗಿ ಪರಿವರ್ತೆಯಾಗುತ್ತಿದೆಯೇ? ಹೌದು, ಎನ್ನುತ್ತಿದೆ ವಾಹನೋದ್ಯಮದಲ್ಲಿ ಹೊರ ಬಂದಿರುವ ಹೊಸ ಅಧ್ಯಯನ ವರದಿ.
ಶ್ರೀಮಂತರು ಸದಾ ಶ್ರೀಮಂತರಾಗಿಯೇ ಉಳಿಯುತ್ತಾರೆ. ಹಾಗೆಯೇ ಬಡವರು ಸದಾ ಬಡವರಾಗಿಯೇ ಇರುತ್ತಾರೆ ಎಂಬ ಮಾತಿದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಗೊತ್ತಿಲ್ಲ. ಆದರೆ ವಾಹನ ಅಧ್ಯಯನ ಸಂಸ್ಥೆ ಜೆಡಿ ಪವರ್ ಬಿಡುಗಡೆ ಮಾಡಿರುವ 2014 ಭಾರತ ಗ್ರಾಹಕ ಸೇವಾ ಸೂಚ್ಯಂಕದಲ್ಲಿ (ಸಿಎಸ್ಐ) ದೇಶದಲ್ಲಿ ಐಷಾರಾಮಿ ಕಾರುಗಳ ಬೇಡಿಕೆ ಹಚ್ಚಾಗಿರುವುದು ಕಂಡುಬಂದಿದೆ.

2013ನೇ ಸಾಲಿನಲ್ಲಿ 16,804 ಯುನಿಟ್ಗಳಿಷ್ಟಿದ್ದ ಐಷಾರಾಮಿ ಕಾರುಗಳ ಮಾರಾಟವು 2014ನೇ ಸಾಲಿನಲ್ಲಿ ದ್ವಿಗುಣವಾಗಿದ್ದು, 35,541 ಯುನಿಟ್ಗಳ ಮಾರಾಟ ಕಂಡುಕೊಂಡಿದೆ. ಈ ಮೂಲಕ ಬರೋಬ್ಬರಿ ಶೇಕಡಾ 112ರಷ್ಟು ಏರಿಕೆ ಕಂಡಿದೆ.
ಅದೇ ರೀತಿ ಮೊದಲ 12ರಿಂದ 24 ತಿಂಗಳ ವರೆಗಿನ ಸೇವಾ ವರದಿಯನ್ನು (ನಿರ್ವಹಣೆ ಹಾಗೂ ರಿಪೇರಿ ಕೆಲಸ) ವರದಿಯು ಉಲ್ಲೇಖಿಸಿದೆ. ಇದನ್ನು 1000 ಅಂಕಗಳಲ್ಲಿ ವಿಭಜಿಸಲಾಗಿದೆ.
ಸರ್ವಿಸ್ ಗುಣಮಟ್ಟ - ಶೇ. 43
ವಾಹನ ಪಿಕಲ್ - ಶೇ. 17
ಸರ್ವೀಸ್ ಸಲಹೆ - ಶೇ. 14
ಸರ್ವೀಸ್ ಘಟಕ - ಶೇ. 14
ಸರ್ವೀಸ್ ಪ್ರಾರಂಭ - ಶೇ. 11
ಒಟ್ಟಾರೆಯಾಗಿ 2014ರಲ್ಲಿ ಐಷಾರಾಮಿ ಗ್ರಾಹಕ ತೃಪ್ತಿಯು ಸರಾಸರಿ 843 ಆಗಿದೆ. ಇದು ಕಳೆದ ವರ್ಷಕ್ಕಿಂತ 33 ಅಂಕಗಳಷ್ಟು ಕುಸಿದಿರುವುದು ಗಮನಾರ್ಹವೆನಿಸಿದೆ.


Click it and Unblock the Notifications








