ಭಾರತೀಯರಿಗೆ ಭಾರತದಲ್ಲಿ ನಿರ್ಮಿತ ಶೂನ್ಯ ಮಾಲಿನ್ಯದ ಎಲೆಕ್ಟ್ರಿಕ್ ಬಸ್
ದೇಶದ ಪ್ರಖ್ಯಾತ ವಾಣಿಜ್ಯ ವಾಹನ ಸಂಸ್ಥೆ ಅಶೋಕ್ ಲೇಲ್ಯಾಂಡ್, ಭಾರತೀಯರಿಗಾಗಿ ಭಾರತದಲ್ಲಿ ನಿರ್ಮಿತ ಶೂನ್ಯ ಮಾಲಿನ್ಯದ ಪ್ರಪ್ರಥಮ ವಿದ್ಯುತ್ ಚಾಲಿತ ಬಸ್ಸನ್ನು ಬಿಡುಗಡೆಗೊಳಿಸಿದೆ. ಅಶೋಕ್ ಲೇಲ್ಯಾಂಡ್ ಎಲೆಕ್ಟ್ರಿಕ್ ಬಸ್ಸುಗಳು ಸರ್ಕ್ಯೂಟ್ ಸಿರೀಸ್ ಎಂಬ ಹೆಸರಿನಿಂದ ಅರಿಯಲ್ಪಡಲಿದೆ.

ನೂತನ ಎಲೆಕ್ಟ್ರಿಕ್ ಬಸ್ಸನ್ನು ಭಾರತದಲ್ಲೇ ಅಭಿವೃದ್ಧಿ ಹಾಗೂ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ದೇಶದ ವಾಹನ ಪ್ರೇಮಿಗಳು ಹೆಮ್ಮೆಪಟ್ಟುಕೊಳ್ಳಬಹುದಾಗಿದೆ.

ಮಾಲಿನ್ಯ ರಹಿತ ಅಥವಾ ಶೂನ್ಯ ಮಾಲಿನ್ಯದ ಅಶೋಕ್ ಲೇಲ್ಯಾಂಡ್ ಎಲೆಕ್ಟ್ರಿಕ್ ಬಸ್ಸುಗಳನ್ನು ಭಾರತೀಯ ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ರಚಿಸಲಾಗಿದೆ.

ಹಿಂದೂಜಾ ಸಂಸ್ಥೆಯ ಭಾಗವಾಗಿರುವ ಅಶೋಕ್ ಲೇಲ್ಯಾಂಡ್, ಭವಿಷ್ಯದ ಪರ್ಯಾಯ ಸಂಚಾರ ವ್ಯವಸ್ಥೆ ರೂಪಿಸುವಲ್ಲಿ ಬದ್ಧವಾಗಿತ್ತು. ಇದರಂತೆ ಶೇಕಡಾ 100ರಷ್ಟು ಭಾರತದಲ್ಲೇ ನಿರ್ಮಿತ ಎಲೆಕ್ಟ್ರಿಕ್ ಬಸ್ಸನ್ನು ಕೊಡುಗೆಯಾಗಿ ನೀಡಿದೆ.

ನಿಗದಿತ ಅವಧಿಗಿಂತಲೂ ಮುಂಚಿತವಾಗಿಯೇ ಎಲೆಕ್ಟ್ರಿಕ್ ಬಸ್ಸುಗಳನ್ನು ಬಿಡುಗಡೆ ಮಾಡುವಲ್ಲಿ ಮಹೀಂದ್ರ ಯಶ ಕಂಡಿದೆ.

ಸರ್ಕ್ಯೂಟ್ ಸಿರೀಸ್ ಬಸ್ಸುಗಳು, ಬೆಂಕಿ ಪತ್ತೆ ಹಚ್ಚುವಿಕೆ ಮತ್ತು ನಂದಿಸುವ ವ್ಯವಸ್ಥೆಯನ್ನು (ಎಫ್ಡಿಎಸ್ ಎಸ್) ಪಡೆದಿದೆ.

ಅಶೋಕ್ ಲೇಲ್ಯಾಂಡ್ ಎಲೆಕ್ಟ್ರಿಕ್ ಬಸ್ಸುಗಳು ಏಕ ಮಾತ್ರ ಚಾರ್ಜ್ ನಲ್ಲಿ 120 ಕೀ.ಮೀ. ವ್ಯಾಪ್ತಿಯ ವರೆಗೆ ಚಲಿಸಬಹುದಾಗಿದೆ.

ಕಡಿಮೆ ಕಾರ್ಯಾಚರಣೆ ಹಾಗೂ ನಿರ್ವಹಣಾ ವೆಚ್ಚದಲ್ಲಿ ಕಡಿಮೆಯಾಗಿರುವುದರಿಂದ ಅಶೋಕ್ ಲೇಲ್ಯಾಂಡ್ ಎಲೆಕ್ಟ್ರಿಕ್ ಬಸ್ಸುಗಳು ಭಾರತೀಯ ಮಾರುಕಟ್ಟೆಗೆ ಯೋಗ್ಯವೆನಿಸಲಿದೆ.

ಅಶೋಖ್ ಲೇಲ್ಯಾಂಡ್ ಸರ್ಕ್ಯೂಟ್ ಸಿರೀಸ್ ಬಸ್ಸುಗಳ ಆಗಮನದೊಂದಿಗೆ ಭಾರತ ಸಹ ವಿಶ್ವ ದರ್ಜೆಯ ವಾಹನಗಳ ಸಾಲಿಗೆ ಸೇರಿದೆ.

'ಅಪ್ಕಿ ಜೀತ್, ಹಮಾರಿ ಜೀತ್' ಅಥವಾ ನಿಮ್ಮ ಗೆಲುವೇ, ನಮ್ಮ ಗೆಲುವು ಎಂಬ ಧ್ಯೇಯ ವಾಕ್ಯದೊಂದಿಗೆ ಎಂಟ್ರಿ ಕೊಟ್ಟಿರುವ ಅಶೋಕ್ ಲೇಲ್ಯಾಂಡ್ ಎಲೆಕ್ಟ್ರಿಕ್ ಬಸ್ಸುಗಳು ನಗರ ಪ್ರದೇಶದ ಮಾಲಿನ್ಯ ಕಡಿಮೆ ಮಾಡಲು ನೆರವಾಗಲಿದೆ.


Click it and Unblock the Notifications








