ಹಾಗಾದ್ರೆ ಅಪಘಾತಕ್ಕೆ ವೇಗ ಮಾತ್ರ ಕಾರಣ ಅಂತೀರಾ... ರಸ್ತೆ ಕೂಡ ಸರಿ ಇರ್ಬೇಕು ಅಲ್ವಾ ?
ಭಾರತದ ರಸ್ತೆಗಳಲ್ಲಿ ಗಂಟೆಗೆ ನೂರು ಕಿ.ಮೀಗೂ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳಿಗೆ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದೆ.
ಬಹುತೇಕ ಭಾರತದ ಎಲ್ಲಾ ರಸ್ತೆಗಳು ಗರಿಷ್ಠ 100 ಗಂಟೆಗೆ ನೂರು ಕಿ.ಮೀ ವೇಗದಲ್ಲಿ ಮಾತ್ರ ಸಂಚರಿಸುವಂತೆ ವಿನ್ಯಾಸಗೊಳಿಸಲಾಗಿದ್ದು, ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವಷ್ಟು ಬಲಿಷ್ಠವಾಗಿರುವ ಅಮಾದು ವಾಹನಗಳಿಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ.

ಸಾರ್ವಜನಿಕರು ಅತ್ಯಂತ ಹೆಚ್ಚು ದಕ್ಷತೆ ತಂತ್ರಜ್ಞಾನ ಹೊಂದಿರುವ ಅತಿವೇಗದ ವಾಹನಗಳನ್ನು ಇತ್ತೀಚಿಗೆ ಅನ್ಯರಾಷ್ಟ್ರಗಳಿಂದ ತರಿಸಿಕೊಳ್ಳುತ್ತಿದ್ದು, ಇದರಿಂದಾಗಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ರೀತಿಯ ನಿರ್ಧಾರಕ್ಕೆ ಸಾರಿಗೆ ಇಲಾಖೆ ಬಂದಿದೆ ಎನ್ನಲಾಗಿದೆ.

ಇತ್ತೀಚಿಗೆ ಭಾರತೀಯ ರಸ್ತೆಗಳಲ್ಲಿ ಆಮದು ಮಾಡಿದ ಬಸ್ಸುಗಳು, ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬಳಕೆ ಹೆಚ್ಚಳವಾಗಿದ್ದು, ಆಮದು ಮಾಡಿಕೊಂಡ ವಾಹನಗಳ ವೇಗ ಮಟ್ಟ ಇಲ್ಲಿನ ರಸ್ತೆಗಳಿಗೆ ಹೋಲಿಸಿದರೆ ಹೆಚ್ಚಿಗೆ ಇದೆ.

ವರದಿ ಪ್ರಕಾರ ಭಾರತದಲ್ಲಿ ಮಾರಾಟವಾಗುವ ಸ್ಕ್ಯಾನಿಯಾ, ವೊಲ್ವೊ ಮತ್ತು ಬೆಂಜ್ ವಾಹನಗಳ ವೇಗ ಮಟ್ಟ ಕಡಿಮೆಗೊಳಿಸಲು ಸಾರಿಗೆ ಇಲಾಖೆ ಯೋಜಿಸಿದೆ.

ಈ ಸಂಸ್ಥೆಗಳ ವಾಹನಗಳಲ್ಲಿ ವೇಗ ನಿಯಂತ್ರಣ ಯಂತ್ರ ವ್ಯವಸ್ಥೆಯನ್ನು ಈಗಾಗಲೇ ಅಳವಡಿಸಲಾಗಿದ್ದು, ಉತ್ಪಾದಕರ ಮಟ್ಟದಲ್ಲಿ ಸುಲಭವಾಗಿ ತಮಗಿಷ್ಟ ಬಂದಂತೆ ಬದಲಾಯಿಸಬಹುದಾಗಿದೆ.

ತಯಾರಕರು ಗರಿಷ್ಠ ಮಿತಿಯನ್ನು ಕಡಿಮೆ ಮಾಡಬೇಕು ಮತ್ತು ಖರೀದಿದಾರರಿಗೆ ಈ ಬಗ್ಗೆ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಸರ್ಕಾರ ತಿಳಿಸಿದೆ.

ನಗರದ ಹೊರವಲಯದಲ್ಲಿ ಸಂಚರಿಸುವ ವಾಹನಗಳ ವೇಗವನ್ನು ಪತ್ತೆ ಹಚ್ಚಲು ಈಗಾಗಲೇ 'ಸ್ಪೀಡ್ ಗನ್ಸ್' ಅಳವಡಿಸಲಾಗಿದ್ದು, ಈ ಮೂಲಕ ವಾಹನಗಳ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ.

'ಸ್ಪೀಡ್ ಗನ್ಸ್'ಗಳನ್ನು ಪೋಲಿಸ್ ಇಲಾಖೆ ಈಗಾಗಲೇ ಅಳವಡಿಸಲು ಮುಂದಾಗಿದ್ದು, ಈ ಸಾಧನವು ಪರಿಣಾಮಕಾರಿಯಾಗಿ ವಾಹನ ಸಂಖ್ಯೆ, ವೇಗ ಮತ್ತು ವಾಹನ ಸ್ಥಾನವನ್ನು ಪತ್ತೆ ಹಚ್ಚಲಿದೆ.

ಇತ್ತೀಚಿನ ಆಧುನಿಕ ವಾಹನಗಳು ಎಂಜಿನ್ ಕಂಟ್ರೋಲ್ ಯುನಿಟ್ (ECU) ಹೊಂದಿದ್ದು, ಈ ಸಾಧನ ವಾಹನದ ಇಂಧನ ಪೂರೈಕೆಯನ್ನು ಬದಲಾಯಿಸಿ ಗರಿಷ್ಠ ವೇಗವನ್ನು ತಲುಪುವದನ್ನು ತಡೆಹಿಡಿಯುತ್ತದೆ.

ದೇಶದ ನಿಯಮಗಳು ಮತ್ತು ನಿರ್ಬಂಧಗಳಿಗೆ ಅನುಗುಣವಾಗಿ ಕಾರು ತಯಾರಕರು ಕಾರ್ಖಾನೆಯಲ್ಲಿಯೇ ಕಾರು ವೇಗವನ್ನು ನಿಗದಿಪಡಿಸಬಹುದಾಗಿದೆ.

ಆದರೆ ರಸ್ತೆಗಳನ್ನು ಸರಿಪಡಿಸದೆ, ಅಗಲೀಕರಣ ಮಾಡದೆ ಕಾರಿನ ವೇಗವನ್ನೇ ಕಡಿಮೆಗೊಳಿಸಲು ಮುಂದಾಗಿರುವ ಈ ರೀತಿಯ ನಿಯಮ ಎಷ್ಟರ ಮಟ್ಟಿಗೆ ಜಾರಿಗೆ ಬರಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








