Just In
- 9 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 10 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 11 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 11 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
25 ಕೋಟಿ ವೆಚ್ಚದಲ್ಲಿ 112 ಕಾರು ಖರೀದಿಸಲಿದೆ ಯುಪಿ ಸರ್ಕಾರ- ಕಾರಣ ಏನು ಗೊತ್ತಾ.?
ಕೆಂದ್ರ ಸರ್ಕಾರವು ದೇಶದಲ್ಲಿರುವ 10 ವರ್ಷ ಮೇಲ್ಪಟ್ಟ ಡೀಸೆಲ್ ಮತ್ತು 15 ವರ್ಷದ ಮೇಲ್ಪಟ್ಟ ಪೆಟ್ರೋಲ್ ವಾಹನಗಳ ಬಳಕೆಯನ್ನು ಬ್ಯಾನ್ ಮಾಡುತ್ತಿದೆ. ಈ ನಿಟ್ಟಿನಲ್ಲಿ ಈ ಆದೇಶವನ್ನು ಪರಿಗಣಿಸಿ ಹಲವರು ಇಂಥಹ ವಾಹನಗಳನ್ನು ಬಳಸುವ ಪ್ರಯತ್ನ ಮಾಡುತ್ತಿಲ್ಲ.
ಆದರೆ ಮುಂದಿನ ವರ್ಷ ಜನವರಿ ತಿಂಗಳಿನಲ್ಲಿ ನಡೆಯಲಿರುವ 2019ರ ಮಹಾ ಕುಂಭಮೇಳದ ಸಲುವಾಗಿ, ಮಹಾ ಕುಂಭಮೇಳಕ್ಕೆ ಬರುವ ವಿಐಪಿಗಳ ಸುರಕ್ಷತೆಗಾಗಿ ಸುಮಾರು ರೂ. 25 ಕೋಟಿ ವೆಚ್ಚದಲ್ಲಿ ಹೊಸ ಕಾರುಗಳನ್ನು ಖರೀದಿಸಲು ಯುಪಿ ಸರ್ಕಾರವು ತೀರ್ಮಾನಿಸಿದೆ.
2019ರ ಜನವರಿ 15 ರಿಂದ ಮಾರ್ಚ್ 4ನೇ ತಾರೀಕಿನ ವರೆಗು ಪ್ರಯಾಗ್ರಾಜ್ (ಅಲಹಾಬಾದ್)ನಲ್ಲಿ ನಡೆಯಲಿರುವ ಮಹಾ ಕುಂಭಮೇಳದ ಸಲುವಾಗಿ ಲಕ್ಷಾಂತರ ಮಂದಿ ಜನ ಸಾಮಾನ್ಯರು ಮತ್ತು ವಿಐಪಿ ಹಾಗು ವಿವಿಐಪಿ ಸದಸ್ಯರು ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಯುಪಿ ಸರ್ಕಾರವು ಅವರಿಗೆ ಸುರಕ್ಷತೆಯನ್ನು ನೀಡಲು ಬೇಕಾದ ಕ್ರಮಗಳ ಬಗ್ಗೆ ಆಲೋಚಿಸಲು ಶುರುಮಾಡಿದೆ.
ನವೆಂಬರ್ 20, 2018ರಂದು ನಡೆದ ಯುಪಿ ಕ್ಯಾಬಿನೇಟ್ ಸಮಿಕ್ಷೆಯಲ್ಲಿ ಅಲ್ಲಿನ ಮುಖ್ಯ ಮಂತ್ರಿಗಳಾದ ಯೋಗಿ ಆದಿತ್ಯನಾಥರವರು ಮಹಾ ಕುಂಭಮೇಳದ ಬಗ್ಗೆ ಚರ್ಚೆಯನ್ನು ಮಾಡಲಾಗಿದ್ದು, ಆ ಸಮಯದಲ್ಲಿ ಸುಮಾರು ರೂ. 25 ಕೋಟಿ ವೆಚ್ಚದಲ್ಲಿ 112 ಹೊಸ ಐಷಾರಾಮಿ ಕಾರುಗಳನ್ನು ಖರೀದಿಸಲು ತೀರ್ಮಾನಿಸಿದ್ದಾರೆ.
ಹೌದು, 2019ರ ಕುಂಬಮೇಳಕ್ಕೆ ಬರುವ ವಿಐಪಿ ಮತ್ತು ವಿವಿಐಪಿ ಸದಸ್ಯರಿಗೆ ಸೆಕ್ಯುರಿಟಿಯನ್ನು ಒದಗಿಸಲು, ಸುಮಾರು ರೂ.25 ಕೋಟಿ ವೆಚ್ಚದಲ್ಲಿ 112 ಐಷಾರಾಮಿ ಕಾರುಗಳನ್ನು ಖರೀದಿಸಲಿದೆ ಎನ್ನಲಾಗಿದೆ.
ರೂ. 25 ಕೋಟಿ ವೆಚ್ಚದಲ್ಲಿ ಖರೀದಿಸಲಿರುವ 112 ಕಾರುಗಳಲ್ಲಿ ಒಂದೊಂದು ಕಾರು ಸುಮಾರು 22.23ಲಕ್ಷ (ಅಂದಾಜು) ವೆಚ್ಚದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದ್ದು, ಇದೀಗ ಉತ್ತರ ಪ್ರದೇಶದ ಹೆಲ್ತ್ ಮಿನಿಸ್ಟರ್ ಸಿದ್ಧಾರ್ಥ್ ನಾತ್ ಸಿಂಗ್ರವರು ಯಾವ ಯಾವ ಕಾರುಗಳನ್ನು ಖರೀದಿಸಲಿದ್ದಾರೆ ಎಂಬ ಮಾಹಿತಿಯನ್ನು ಹೊರಹಾಕಿದ್ದಾರೆ.
ಹೆಲ್ತ್ ಮಿನಿಸ್ಟರ್ ಸಿದ್ಧಾರ್ಥ್ ನಾತ್ ಸಿಂಗ್ರವರು ಬಹಿರಂಗಗೊಳಿಸಿದ ಮಾಹಿತಿ ಪ್ರಕಾರ, ಸುಮಾರು ರೂ. 2.46 ಕೋಟಿಯ ವೆಚ್ಚದಲ್ಲಿ 5 ಟೊಯೊಟಾ ಇನೋವಾ ಕ್ರಿಸ್ಟಾ, 5 ಮಹೀಂದ್ರಾ ಸ್ಕಾರ್ಪಿಯೊ ಮತ್ತು 7 ಹೋಂಡಾ ಸಿಟಿ ಕಾರುಗಳನ್ನು ಖರೀದಿಸಲಿದ್ದು, ಈ ಕಾರುಗಳನ್ನು ಕೇವಲ ರಾಜ್ಯ ವಸತಿ ಇಲಾಖೆಗೆ ನೀಡಲಾಗುತ್ತದೆ.
MOST READ: ಬೆಂಗಳೂರಿನಲ್ಲಿ 2 ವರ್ಷಗಳ ಕಾಲ ಹೊಸ ವಾಹನಗಳ ನೋಂದಣಿ ನಿಷೇಧಕ್ಕೆ ಸಿದ್ದತೆ?
ಇವುಗಳೊಂದಿಗೆ 4 ಸ್ಕಾರ್ಪಿಯೊ ಎಎಸ್, 2 ಜಾಮರ್ ಫ್ರೀ ವಾಹನಗಳು, 7 ಟಾಟಾ ಸಫಾರಿ ಸ್ಟ್ರೋಮ್ ಇಎಕ್ಸ್ ಮತ್ತು 3 ಬುಲೆಟ್ ಪ್ರೂಫ್ ಟಾಟಾ ಸಫಾರಿ ಕಾರು ಒಟ್ಟಾರೆಯಾಗಿ 16 ಕಾರುಗಳನ್ನು ಸುಮಾರು ರೂ.6.30 ಕೋಟಿ ನೀಡಿ ಖರೀದಿಸಲಿದೆ.
ಇನ್ನುಳಿದ ರೂ. 16.52 ಕೋಟಿ ಮೊತ್ತಕ್ಕೆ ಸುಮಾರು 79 ಕಾರುಗಳನ್ನು ಖರೀದಿಸಿ ಅವುಗಳನ್ನು ರಾಜ್ಯದಾದ್ಯಂತ ಬಳಸಲಾಗುತ್ತದೆ. ಆದ್ರೆ ಇಷ್ಟೆಲ್ಲ ಖರ್ಚು ಮಾಡಿ ಐಷಾರಾಮಿ ಕಾರುಗಳನ್ನು ಖರೀದಿಸಿ ಅವರಿಗೆ ಸುರಕ್ಷತೆಯನ್ನು ನೀಡಬೇಕಾದ ಕಾರಣವಾದ್ರು ಏನು.?
2019ರಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ ಹಲವಾರು ವಿಐಪಿ ಮತ್ತು ವಿವಿಐಪಿಗಳು ಬರಲಿದ್ದಾರೆ, ಮಾಹಿತಿಗಳ ಪ್ರಕಾರ ಅವರ ಆದರೆ ಅವರ ಭದ್ರತೆಗೆ ಬೆದರಿಕೆ ಇದೆ ಎಂದು ನಾವು ಮಾಹಿತಿಯನ್ನು ಪಡೆದುಕೊಂಡಿದ್ದೇವೆ ಎಂದು ಉತ್ತರ ಪ್ರದೇಶದ ಅಧಿಕಾರಿಗಳು ಹೇಳಿಕೊಂದಿದ್ದಾರೆ.
ಆದ್ದರಿಂದ ಅವರಿಗೆ ರಕ್ಷಣೆ ನೀಡಲು ಮತ್ತು ಮಹಾ ಕುಂಭಮೇಳಕ್ಕೆ ಬರಲಿರುವ ಎಲ್ಲಾ ಭಕ್ತರ ಸುರಕ್ಷತೆಯ ಸಲುವಾಗಿ ಈ ನಿರ್ಣಯವನ್ನು ನಾವು ತೆಗೆದುಕೊಳ್ಳಲಾಗಿದ್ದು, ಇದರ ಜೊತೆಗೆ ಇನ್ನಿತರೆ ಅಗತ್ಯ ಕ್ರಮಗಳನ್ನು ಶೀಘ್ರವೇ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.
ರೂ. 25 ಕೋಟಿ ವೆಚ್ಚದಲ್ಲಿ 112 ಐಷಾರಾಮಿ ಕಾರುಗಳನ್ನು ಖರೀದಿಸುವುದಲ್ಲದೇ, ಕೆಂದ್ರ ಸರ್ಕಾರದ ಆದೇಶದಂತೆ ಹಳೆಯ ಹತ್ತು ವರ್ಷ ದಾಟಿದ ಕಾರುಗಳ ಬಳಕೆಯನ್ನು ಖಡಿತಗೊಳಿಸಿ, ಹೊಸ ಕಾರುಗಳನ್ನು ಆ ಜಾಗದಲ್ಲಿ ಬದಲಾಯಿಸಲಿದೆ.
MOST READ: ಜಾವಾ 42 ಬೈಕಿನ ಮೈಲೇಜ್ ಮತ್ತು ಟಾಪ್ ಸ್ಪೀಡ್ ಬಗ್ಗೆ ವಿವರ ಇಲ್ಲಿದೆ ನೋಡಿ..
ಈ ಬಾರಿಯ ಮಹಾ ಕುಂಭಮೇಳದಲ್ಲಿ ಮತ್ತೊಂದು ವಿಶೇಷವೆಂದರೆ , ಲಕ್ಷಾಂತರ ಭಕ್ತರ ಮತ್ತು ಜನರ ಒಪ್ಪಿಗೆಯಂತೆ ಅಲಹಾಬಾದ್ ನಗರದ ಹೆಸರನ್ನು ಪ್ರಯಾಗ್ರಾಗ್ ಎಂಬ ಹೆಸರಿನೊಂದಿಗೆ ಮರುನಾಮಕರಣ ಮಾಡಲಿದ್ದಾರೆ ಯುಪಿ ಮುಖ್ಯಂತ್ರಿಗಳಾದ ಯೋಗಿ ಆಧಿತ್ಯನಾಥ್.
Source: RushLane