ತಾನು ಮಾರಿದ ಕಾರನ್ನೆ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದ ಇಂಜಿನಿಯರ್..!!
ಮನೆಯ ಹತ್ತಿರ ಅಥವ ರಸ್ತೆಗಳಲ್ಲಿ ನಿಲ್ಲಿಸಿದ ವಾಹನಗಳೆ ಕಳ್ಳತನವಾಗುತ್ತಿದೆ. ಆದರೆ ಘಜಿಯಾಬಾದ್ನಲ್ಲಿನ ಒಬ್ಬ ವ್ಯಕ್ತಿ ಮಾಡಿದ ಈ ಸಾಹಸವು ನಿಮಗೆ ಆಶ್ಚರ್ಯ ಉಂಟುಮಾಡಬಹುದು.
ಮನೆಯ ಹತ್ತಿರ ಅಥವ ರಸ್ತೆಗಳಲ್ಲಿ ನಿಲ್ಲಿಸಿದ ವಾಹನಗಳೆ ಕಳ್ಳತನವಾಗುತ್ತಿದೆ. ಆದರೆ ಘಜಿಯಾಬಾದ್ನಲ್ಲಿನ ಒಬ್ಬ ವ್ಯಕ್ತಿ ಮಾಡಿದ ಈ ಸಾಹಸವು ನಿಮಗೆ ಆಶ್ಚರ್ಯ ಉಂಟುಮಾಡಬಹುದು. ಈತ ಡೂಪ್ಲಿಕೇಟ್ ಕೀ ಸಹಾಯದಿಂದ ತಾನು ಮಾರಾಟ ಮಾಡಿದ ಕಾರನ್ನೆ ಕದ್ದಿದ್ದಾನೆ.

ಉತ್ತರ ಪ್ರದೇಶ್ ಘಜಿಯಾಬಾದ್ ಮೂಲದ ಸರ್ಫರಾಜುದ್ದೀನ್ ಎಂಬಾತ ಜನವರಿ 2017ರಲ್ಲಿ ಆಡಿ ಅ6 ಸೆಡಾನ್ ಕಾರನ್ನು ಮನೋಜ್ ಸಿಂಗ್ ಅಂಬಾತನಿಂದ ರೂ 17.5 ಲಕ್ಷ ನೀಡಿ ಖರೀದಿ ಮಾಡಿದ್ದರು.

ಮೊದಲನೆಯ ಬಾರಿ ಸರ್ಫರಾಜುದ್ದೀನ್ ಮನೋಜ್ ಸಿಂಘಾಲ್ಗೆ ರೂ 50,000 ನಗದನ್ನು ನೀಡಿ ಆಡಿ ಎ6 ಕಾರನ್ನು ಪಡೆದುಕೊಂಡ. ನಂತರ ಮಿಕ್ಕಿದ ಹಣವನ್ನು ಕಂತುಗಳಲ್ಲಿ (installment) ಕಟ್ಟಲು ಇಬ್ಬರು ಒಪ್ಪಿಕೊಂಡರು.

ಪ್ರಕಾರವಾಗಿ ಸರ್ಫರಾಜುದ್ದೀನ್ ರೂ 14 ಲಕ್ಷದ ಹಣವನ್ನು ಇಂಟರ್ನೆಟ್ ಬ್ಯಾಕಿಂಗ್ ಮೂಲಕ ಮನೋಜ್ ಸಿಂಗ್ಗೆ ವರ್ಗಾಯಿಸಿದ. ಆದರೆ ಆಗ ರೂ 14.5 ಲಕ್ಷ ನೀಡಿದ್ದರೂ ಮನೋಜ್ ಸಿಂಗ್ ಆಡಿ ಎ6 ಕಾರಿನ ಆರ್ಸಿ ಬುಕ್ನಲ್ಲಿರುವ ಹೆಸರನ್ನು ಬದಲಾಯಿಸಲು ನಕಾರಿಸಿದ. ಏಕೆಂದು ಸಬ್ರುದ್ದೀನ್ ಕೇಳಿದಾಗ ಮನೋಜ್ ಪೂರ್ತಿ ಹಣ ನೀಡಿದ ಮೇಲೆಯೆ ಹೆಸರನ್ನು ಬದಲಾಯಿಸುತ್ತೇನೆ ಎಂದು ಹೇಳಿದ.

ಈ ನಡುವೆ ಮಿಕ್ಕಿದ 3 ಲಕ್ಷದ ಹಣವನ್ನು ತೆಗೆದುಕೊಳ್ಳಲು ಮನೋಜ್ ಸರ್ಫರಾಜುದ್ದೀನ್ ಅನ್ನು ದೆಹಲಿಯಲ್ಲಿನ ನ್ಯಾಷನಲ್ ಜೂವಾಲಾಜಿಕಲ್ ಪಾರ್ಕ್ಗೆ ಕರೆಸಿಕೊಂಡು, ಹತ್ತಿರದಲ್ಲಿನ ಕ್ಯಾಂಟೀನ್ನಲ್ಲಿ ಚರ್ಚೆಗೆ ಕೂತರು. ಇವರಿಬ್ಬರ ಈ ಭೇಟಿ ನಡೆದದ್ದು ಕಳೆದ ಮಾರ್ಚ್ 15ರಂದು.

ಸರ್ಫರಾಜುದ್ದೀನ್ ಅನ್ನು ಹೆಚ್ಚು ಇನ್ನಷ್ಟು ಹೆಚ್ಚು ಹಣ ನೀಡಲು ಮನೋಜ್ ಕೇಳಿಕೊಂಡರು, ಆದರೆ ಸಮಾಲೋಚನೆಯಲ್ಲಿ ಅವರು ಒಪಂದಕ್ಕೆ ಬರಲಿಲ್ಲವೆಂಬ ಕಾರಣಕ್ಕೆ ಮನೋಜ್ ಸಿಂಗ್ ಇನ್ನುಳಿದ 3 ಲಕ್ಷವನ್ನು ಪಡೆದು ಅಲ್ಲಿಂದ ತೆರಳಿದರು.

ನಂತರ ಸರ್ಫರಾಜುದ್ದೀನ್ ಮತ್ತು ಜೊತೆಗಿದ್ದ ಸಾಕ್ಷಿ ಕೂಡ ಹೊರ ಬಂದರು, ಹೊರ ಬಂದು ನೋಡಿದ್ದಲ್ಲಿ ಅಲ್ಲಿದ್ದ ಆಡಿ ಎ6 ಕಾರು ಕಾಣೆಯಾಗಿತ್ತು. ಈ ನಿಟ್ತಿನಲ್ಲಿ ಸರ್ಫರಾಜುದ್ದೀನ್ ಹಜರತ್ ನಿಜಾಮುದ್ದೀನ್ ಪೊಲೀಸ್ ಠಾಣೆಯಲ್ಲಿ ಕಾರು ಕಳವು ಬಗ್ಗೆ ದೂರು ನೀಡಿದ್ದರು.

ದೂರು ನೀಡಿದ ಮರುಕ್ಷಣವೆ ಪೊಲೀಸರು ತನಿಖೆಯನ್ನು ಶುರು ಮಾಡಿದ್ದು, ಈ ಸಂದರ್ಭದಲ್ಲಿ ಮನೋಜ್ ಸಿಂಗ್ ಸರ್ಫರಾಜುದ್ದೀನ್ಗೆ ಕಾರಿನ ಜೊತೆಗೆ ಅದರ ನಕಲಿ ಕೀಯನ್ನು ನೀಡಲಿಲ್ಲವೆಂಬುದು ಖಚಿತವಾಯಿತು.

ಈ ಮಾಹಿತಿಯಿಂದ ಮನೋಜ್ ಸಿಂಗ್ ಆ ಕಾರನ್ನು ಕದ್ದಿರುವುದಾಗಿ ಖಚಿತಪಡಿಸಿದ ಪೊಲೀಸರು ಮನೋಜ್ ಸಿಂಗ್ನನ್ನು ವಿಚಾರಣೆಗೆ ಕರೆಸಿದರು. ಆದರೆ ಮನೋಜ್ ಸಿಂಗ್ ವಿಚಾರಣೆಗೆ ಒಪಲ್ಲಿಲ್ಲವಾದಾರಿಂದ ಆತನಿಗೆ ಬೇಲ್ಔಟ್ ಅನ್ನು ಕೋರ್ಟ್ ನೀಡಿತ್ತು.

ದೆಹಲಿಯ ಕರೋಲ್ ಬಾಗ್ ಬಿಧಾನ್ಪುರ್ ಪ್ರದೇಶದಲ್ಲಿ ಮನೋಜ್ ಸಿಂಗ್ ಕದ್ದ ಕಾರು ನಿಲ್ಲಿಸಲಾಗಿದ್ದು, ಪೊಲೀಸರು ಅದನ್ನು ಪಡೆದುಕೊಂಡರು. ಈ ಕಾರನ್ನು ಬಿಧಾನ್ಪುರ್ನಲ್ಲಿನ ಮನೋಜ್ ಸಿಂಗ್ ಅವರ ಮೊಬೈಲ್ ಅಂಗಡಿಯ ಹತ್ತಿರ ನಿಲುಗಡೆ ಮಾಡಲಾಗಿತ್ತು.

ಇದರಂತೆಯೆ ಹಲವಾರು ಕಡೆ ಸೆಕೆಂಡ್ ಹ್ಯಾಂಡ್ ಬೈಕ್ ಅಥವ ಕಾರು ಖರೀದಿಸುವಾಗ ಹಲವಾರು ಮೋಸದ ಘಟನೆಗಳು ನಡೆದಿವೆ. ಮನೋಜ್ ಸಿಂಗ್ನಂತವರ ಕೈಯಿಂದ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಜಾಗರೂಕರಾಗಿರಿ. ಇಂತಹ ವಂಚನೆಯಿಂದ ನೀವು ಹೇಗೆ ತಪ್ಪಿಸಿಕೊಳ್ಳಬಹುದೆಂಬ ಮಾಹಿತಿ ಇಲ್ಲಿದೆ ನೋಡಿ..

ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ವಾಹನವನ್ನು ಪಡೆದು ಸಾಧ್ಯವಾದಷ್ಟು ವೇಗವಾಗಿ ವ್ಯವಹಾರವನ್ನು ಮುಗಿಸೊಕೊಂಡು ಅದನ್ನು ನಿಮ್ಮ ಹೆಸರಿನಲ್ಲಿ ವರ್ಗಾಯಿಸಿಕೊಳ್ಳಿ. ವಾಹನ ಪಡೆಯುವಾಗ ನಕಲಿ ಕೀಲಿಯನ್ನು ಕೇಳಿ. ನಕಲಿ ಕಲಿಯು ಕಳೆದುಹೋಗಿದೆ ಎಂದಲ್ಲಿ ಅದನ್ನು ನಂಬದಿರಿ.

ಚಲನೆ ಇಲ್ಲದ ಸ್ಥಳಗಳಲ್ಲಿ ಹಣದ ವ್ಯವಹಾರವನ್ನು ಮಾಡದಿರಿ. ಜನರಿರುವ ಪ್ರದೇಶದಲ್ಲಿ ಹಣದ ವ್ಯಾವಹಾರವನ್ನು ಮಾಡಿರಿ ಮತ್ತು ಹಣ ಪಾವತಿಸಿದ ನಂತರ ರಸೀದಿಯನ್ನು ತೆಗೆದುಕೊಳ್ಳುವುದನ್ನು ಮರೆಯದಿರಿ.


Click it and Unblock the Notifications








