Just In
- 40 min ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 2 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 3 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- 3 hrs ago ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
Don't Miss!
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ಯಾಶ್ಲೆಸ್ ವ್ಯವಹಾರಕ್ಕೂ ಮುನ್ನ ಎಚ್ಚರ..!! ಟೋಲ್ ಬೂತ್ನಲ್ಲಿ 4 ಲಕ್ಷ ಕಳೆದುಕೊಂಡ ಮೈಸೂರಿನ ವೈದ್ಯ..!!
ಕ್ಯಾಶ್ಲೆಸ್ ವ್ಯವಹಾರಕ್ಕಾಗಿ ದೇಶದಲ್ಲಿ ಹೊಸ ಕ್ರಾಂತಿಯೇ ಶುರುವಾಗಿದೆ. ಆದ್ರೆ ಕಾರ್ಡ್ ಬಳಕೆಗೂ ಮುನ್ನ ಎಚ್ಚರ ತಪ್ಪಿದರೆ ನಿಮ್ಮ ಜೇಬಿಗೆ ಕತ್ತರಿ ಗ್ಯಾರೆಂಟಿ ಅನ್ನೋದನ್ನು ಮರೆಯಬೇಡಿ.
ಈಗ ಎಲ್ಲಿಗೆ ಹೋದ್ರು ಪ್ರತಿಯೊಂದಕ್ಕೂ ಕಾರ್ಡ್ ಮೂಲಕ ಬಿಲ್ ಪಾವತಿಸಿ ಎನ್ನುವ ನಾಮಫಲಕಗಳನ್ನು ನಾವು ದಿನನಿತ್ಯ ಶಾಪ್ಗಳು, ಪೆಟ್ರೋಲ್ ಬಂಕ್ಗಳ ಮುಂದೆ ನೋಡುವುದು ಕಾಮನ್. ಆದ್ರೆ ಕಾರ್ಡ್ ಬಳಕೆಗೂ ಮುನ್ನ ಈ ಸುದ್ದಿ ಓದಿದರೇ ಎಂತರಿಗೂ ಶಾಕ್ ಆಗದೇ ಇರಲಾರದು.
ನಿನ್ನೆ ತಡರಾತ್ರಿಯಷ್ಟೇ ಮೈಸೂರು ಮೂಲದ ವೈದ್ಯರೊಬ್ಬರು ತಮ್ಮ ಕಾರಿನಲ್ಲಿ ಕೊಚ್ಟಿನ್ ಟು ಮುಂಬೈ ಹೆದ್ದಾರಿಯಲ್ಲಿ ಪ್ರಯಾಣ ಮಾಡ್ತಾ ಇದ್ದರು. ಹೆದ್ದಾರಿಯಲ್ಲಿ ಪ್ರಯಾಣ ಅಂದರೆ ಶುಲ್ಕು ಪಾವತಿ ಮಾಡುವುದು ಸಾಮಾನ್ಯ ಅಲ್ಲವೇ, ಹೀಗಾಗಿ ಎಂದಿನಂತೆ ಅವರು ಕೂಡಾ ಟೋಲ್ ಬೂತ್ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿ ಮಾಡಿದ್ದಾರೆ. ಆದ್ರೆ ನಿಮಿಷಾರ್ಧದಲ್ಲೇ ಅವರಿಗೆ ಒಂದು ಶಾಕ್ ಕಾದಿತ್ತು.
ಮುಂಬೈನಿಂದ ಬಂದಿದ್ದ ಮೈಸೂರು ವೈದ್ಯ ಡಾ. ರಾವ್ ಉಡುಪಿ ಬಳಿ ಇರುವ ಗುಂಡಮಿ ಟೋಲ್ನಲ್ಲಿ 40 ರೂ. ಪಾವತಿಸಲು ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ದಾರೆ. ಆದ್ರೆ 40 ರೂಪಾಯಿ ಬದಲು ಅವರ ಖಾತೆಯಿಂದ ಪಾವತಿ ಎಷ್ಟು ಗೊತ್ತಾ? ಬರೋಬ್ಬರಿ 4 ಲಕ್ಷ ರೂಪಾಯಿ..!!
ಅವರ ಖಾತೆಯಿಂದ ಹಣ ಪಾವತಿಯಾಗುತ್ತಿದ್ದಂತೆ ವೈದ್ಯನ ಮೊಬೈಲ್ಗೆ ನೆಟ್ ಬ್ಯಾಕಿಂಗ್ ಸಂದೇಶ ಬಂದಿದೆ. ಮೊಬೈಲ್ನಲ್ಲಿರುವ ಸಂದೇಶ ನೋಡಿದ ವೈದ್ಯನಿಗೆ ಒಂದು ನಿಮಿಷ ಏನ್ ಮಾತನಾಡಬೇಕೇಂದು ತಿಳಿಯದೇ ಗಾಬರಿಯಾಗಿದ್ದಾರೆ.
40 ರೂಪಾಯಿ ಬದಲಿಗೆ 4 ಲಕ್ಷ ಪಾವತಿಯಾಗಿದ್ದನ್ನು ನೋಡಿದ ಮೈಸೂರು ವೈದ್ಯ, ತಕ್ಷಣವೇ ಕಾರಿನಿಂದ ಇಳಿದು ಬಂದಿದ್ದಾರೆ. 4 ಲಕ್ಷ ರೂಪಾಯಿ ಕಟ್ ಆಗಿದ್ದರ ಕುರಿತು ಟೋಲ್ ಸಿಬ್ಬಂದಿ ಬಳಿ ಮಾತಿನ ಚಕಮಕಿ ನಡೆಸಿದಾಗ 40 ರೂಪಾಯಿ ಬದಲು 4 ಲಕ್ಷ ಪಾವತಿಯಾಗಿದ್ದರ ಬಗ್ಗೆ ಸಿಬ್ಬಂದಿ ತಪ್ಪೊಪ್ಪಿಕೊಂಡಿದ್ದಾನೆ.
ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಮೈಸೂರು ಮೂಲದ ಡಾ.ರಾವ್, ಆಗಿರುವ ಘಟನೆ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ. ದೂರು ಹಿನ್ನೆಲೆ ಟೋಲ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಆದ ತಪ್ಪಿನ ಬಗ್ಗೆ ಕ್ಷಮೆ ಕೋರಿದ್ದು, ಚೆಕ್ ರೂಪದಲ್ಲಿ ಹಣ ವಾಪಸ್ ಮಾಡುವುದಾಗಿ ಪೊಲೀಸರಿಗೆ ಮನವಿ ಮಾಡಿದ್ದಾನೆ.
ಆದ್ರೆ ಟೋಲ್ ಸಿಬ್ಬಂದಿ ಮಾತು ಕೇಳದ ಡಾ. ರಾವ್, ತನಗೆ ಹಣ ರೂಪದಲ್ಲೇ 4 ಲಕ್ಷ ವಾಪಸ್ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ ಟೋಲ್ ಸಿಬ್ಬಂದಿ, ಕಾರ್ಡ್ ಮೂಲಕ ಕಟ್ ಆಗಿದ್ದ ಹೆಚ್ಚುವರಿ ಮೊತ್ತವನ್ನು ಹಣ ರೂಪದಲ್ಲೇ ವಾಪಸ್ ಮಾಡಿದ್ದಾನೆ.
ಸದ್ಯ ರೂ. 3,99,960 ಹಣ ಪಡೆದಿರುವ ಡಾ.ರಾವ್ ಆದ ಘಟನೆ ಕುರಿತು ಗಾಬರಿಯಾಗಿದ್ದು ಸುಳ್ಳಲ್ಲ. ಮೊದಮೊದಲು ಹೆಚ್ಚುವರಿ ಹಣ ಕಟ್ ಆಗಿದ್ದರ ಬಗ್ಗೆ ನಿರಾಕರಿಸಿದ್ದ ಟೋಲ್ ಸಿಬ್ಬಂದಿ, ಸೂಕ್ತ ದಾಖಲೆ ತೊರಿಸಿದ ನಂತರವಷ್ಟೇ ತಪ್ಪೊಪ್ಪಿಕೊಂಡಿದ್ದ.
ಪೊಲೀಸರ ಮಧ್ಯಪ್ರವೇಶದಿಂದ ಡಾ. ರಾವ್ ಅವರಿಗೆ 4 ಲಕ್ಷ ರೂಪಾಯಿ ವಾಪಸ್ ಏನೋ ಬಂತು. ಆದ್ರೆ ಇದೇ ಅನುಭವ ಒಬ್ಬ ಮಹಿಳೆಗೆ ಆಗಿದ್ದರೆ ಆ ರಾತ್ರಿ ವೇಳೆ ಪೊಲೀಸ್ ಠಾಣೆಗೆ ಹೋಗಿ ಬೂತ್ ಸಿಬ್ಬಂದಿಯಿಂದ ಹಣ ಪಡೆಯಲು ಸಾಧ್ಯವೇ ಎಂಬ ಅನುಮಾನ ಸೃಷ್ಠಿಯಾಗುತ್ತೆ.
ಇದಷ್ಟೇ ಅಲ್ಲಾ ಈ ಘಟನೆಯಿಂದಾಗಿ ನಮ್ಮಲ್ಲೇ ಹತ್ತಾರು ಪ್ರಶ್ನೆಗಳು ಶುರುವಾಗುತ್ತವೆ. ಕ್ಯಾಶ್ಲೆಸ್ ವ್ಯವಹಾರ ಎಷ್ಟು ಸೇಫ್ ಅಂತಾ. ಜೊತೆಗೆ ಟೋಲ್ಗಳಲ್ಲಿ ಹಗಲು ದರೋಡೆ ನಡೆಯುತ್ತಿರುವ ಬಗ್ಗೆಯೂ ಗುಮಾನಿ ಶುರುವಾಗುತ್ತಿದೆ. ಆದ್ರೆ ಅದೇನೇ ಇರಲಿ ನೀವು ಕೂಡಾ ಕ್ಯಾಶ್ಲೆಸ್ ವ್ಯವಹಾರಕ್ಕೂ ಇಂತವರ ಬಗ್ಗೆ ಎಚ್ಚದಿಂದ ಇರುವುದು ಒಳಿತು.
ಹೊಚ್ಚ ಹೊಸ ಮಾರುತಿ ಇಗ್ನಿಸ್ ಕಾರಿನ ಫೋಟೋಗಳನ್ನು ವೀಕ್ಷಿಸಲು ಈ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.