Just In
- 10 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 11 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 12 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 12 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಳೆ ವಾಹನಗಳಿಗೆ ಹೊಸ ರೀತಿ ತೆರಿಗೆ ಹೊರೆ
ಮಹಾರಾಷ್ಟ್ರದಲ್ಲಿ ಏನಿಲ್ಲವೆಂದರೂ 15 ವರ್ಷ ಹಳೆಯದಾದ 15 ಲಕ್ಷ ಖಾಸಗಿ ವಾಹನಗಳು ಹಾಗೂ 8 ವರ್ಷ ಹಳೆಯದಾದ 6 ಲಕ್ಷ ಸರಕು ಸಾಗಾಣಿಕೆ ವಾಹನಗಳಿವೆ. ಇವೆಲ್ಲವೂ ಹೆಚ್ಚು ಇಂಧನ ವ್ಯಯಿಸಿ ಹೆಚ್ಚು ಮಾಲಿನ್ಯ ಹೊರಸೂಸುತ್ತಿವೆ. ಆದ್ದರಿಂದ ಇವುಗಳ ಬಳಕೆ ಕಮ್ಮಿ ಮಾಡಬೇಕು ಹಾಗೂ ಮಾಲಿನ್ಯ ತಡೆಗಟ್ಟಬೇಕು ಎಂದು ಪರಿಸರ ತೆರಿಗೆ ವಿಧಿಸಲಾಗುತ್ತಿದೆ.
ಹಳೆ ಡೀಸೆಲ್ ವಾಹನಗಳ ಮಾಲೀಕರು ಐದು ವರ್ಷಕ್ಕೆ 3,500 ರು ಕಟ್ಟಬೇಕು ಹಾಗೂ ಹಳೆ ಪೆಟ್ರೋಲ್ ವಾಹನವುಳ್ಳವರು 3,000 ರು ತೆರಬೇಕು. 15 ವರ್ಷಕ್ಕೂ ಹಳೆಯದಾದ ದ್ವಿಚಕ್ರ ವಾಹನವುಳ್ಳವರು 2 ಸಾವಿರ ರು ತೆರಿಗೆ ಕಟ್ಟಬೇಕಾಗುತ್ತದೆ.
ವಾಣಿಜ್ಯ ಉದ್ದೇಶಿತ ವಾಹನ ವಿಷಯಕ್ಕೆ ಬಂದರೆ, LCV ಮಾಲೀಕರು 2500 ರು, ಟ್ಯಾಕ್ಸಿ ಮಾಲೀಕರು 1,250 ರು, ಆಟೋರಿಕ್ಷಾದಾರರು 750 ರು ಐದು ವರ್ಷಕ್ಕೆ ಕಟ್ಟಬೇಕು. ಈ ಎಲ್ಲಾ ತೆರಿಗೆ ಹಣವನ್ನು ಪರಿಸರ ಸಂರಕ್ಷಣಾ ಕಾರ್ಯಕ್ರಮಗಳಿಗೆ ಬಳಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.
ಇದು ಇತರ ರಾಜ್ಯಗಳು ಮಾದರಿಯಾಗಬಲ್ಲದು ಎಂದರೆ ತಪ್ಪಾಗಲಾರದು. ಇದರ ಮೂಲ ಉದ್ದೇಶ ಹಳೆ ವಾಹನಗಳ ಬಳಕೆ ಕಮ್ಮಿಮಾಡುವುದು ಹಾಗೂ ಮಾಲಿನ್ಯ ತಡೆಗಟ್ಟುವುದು.
ಆದರೆ, ಇದರ ಜೊತೆಗೆ ಬದಲೀ ಇಂಧನ ಮೂಲಗಳಾದ ಎಲ್ ಪಿಜಿ ಹಾಗೂ ಸಿಎನ್ ಜಿ ಬಳಕೆಗೆ ಪ್ರೋತ್ಸಾಹ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಪರಿಸರ ಸಮತೋಲನ ಕಾಪಾಡಿ, ಮುಂದಿನ ಪೀಳಿಗೆಗೆ ಒಳ್ಳೆ ವಾತಾವರಣ ರೂಪಿಸುವುದು ಸರ್ಕಾರದಷ್ಟೇ ಜನಸಾಮಾನ್ಯರ ಆದ್ಯತೆಯಾಗಲಿ.