ಶ್ರಾವಣ ವಾಹನ ಸ್ಪೆಷಲ್: ಬರುತ್ತಿದೆ 5 ಹೊಸ ಕಾರು

ನ್ಯಾ. ಶಿವರಾಜ್ ಪಾಟೀಲ್ ರಾಜ್ಯದ ನೂತನ ಲೋಕಾಯುಕ್ತರಾಗಿ ನೇಮಕಗೊಂಡಿದ್ದಾರೆ. ಗುಜರಾತ್ ಗೆ ಕೇಶುಬಾಯಿ ಪಟೇಲ್ ನಂತರ ಬಂದ ನರೇಂದ್ರ ಮೋದಿಯಂತೆ, ಕರ್ನಾಟಕಕ್ಕೆ ಯಡಿಯೂರಪ್ಪ ನಂತರ ಯಾರು ಬರಬಹುದು ಎಂಬ ಹೊಸ ನಿರೀಕ್ಷೆಯಲ್ಲಿ ಎಲ್ಲರೂ ಇದ್ದಾರೆ..
ಆದರೆ, ವಾಹನ ಕಂಪನಿಗಳಿಗಿನ್ನೂ ಆಷಾಢ ಮುಗಿದಿಲ್ಲ. ಮಾರಾಟದಲ್ಲಿ ಗಮನಾರ್ಹ ಬದಲಾವಣೆಗಳು ಕಂಡಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರ ಹೆಚ್ಚಿಸಿದೆ. ಪೆಟ್ರೊಲ್ ದರಗಳು ಪೆಟ್ರೊಲ್ ಕಾರುಗಳ ಮಾರಾಟಕ್ಕೆ ಹಿನ್ನಡೆ ನೀಡಿವೆ. ಇದೆಲ್ಲದರ ಹೊರತಾಗಿಯೂ ಶ್ರಾವಣ ಪೌರ್ಣಮಿಯ ಈ ಆಗಸ್ಟ್ ನಿಂದ ವಾಹನ ಲೋಕಕ್ಕೂ ಒಂದಿಷ್ಟು ಸಂಭ್ರಮದ ವಿಷಯಗಳಿವೆ.
ಈ ಹಬ್ಬದ ಸೀಸನ್ ನಲ್ಲಿ ಹಲವು ಹೊಸ ಕಾರುಗಳು ರಸ್ತೆಗಿಳಿಯಲಿವೆ. ಗ್ರಾಹಕರ ಫ್ಯಾಮಿಲಿ ಸವಾರಿಗೆ ಸೂಕ್ತವಾದ ಇವೆಲ್ಲ ಕಾರುಗಳ ದರ ಕೂಡ 4 ಲಕ್ಷ ರು.ನಿಂದ ಆರಂಭವಾಗುತ್ತದೆ. ಸದ್ಯ ರಸ್ತೆಗಿಳಿಯಲು ನಿಮಗಿಷ್ಟವಾಗಬಹುದಾದ 5 ಕಾರುಗಳು ಸರತಿ ಸಾಲಿನಲ್ಲಿ ನಿಂತಿವೆ. ಮಾರುತಿಯಿಂದಲೇ ಸುರು ಮಾಡೋಣ.


Click it and Unblock the Notifications