ಬೆಂಗಳೂರಲ್ಲಿ ಕುಡುಕ ಚಾಲಕನ ಅವಾಂತರ
ರಾತ್ರಿ ಸುಮಾರು ಹತ್ತುವರೆ ಗಂಟೆಗೆ ಎಚ್ ಮಂಜುನಾಥ(24) ಕುಡಿದು ಚಾಲನೆ ಮಾಡಿ ಈ ಅವಾಂತರ ಸೃಷ್ಟಿಸಿದ್ದಾನೆ. ಆತ ಟ್ರಾವೆಲ್ ಏಜೆಂಟ್ ನಾಗಗುಪ್ತ ಎಂಬವರ ಕಾರು ಚಾಲಕನಾಗಿದ್ದಾನೆ.
"ಒಬ್ಬರನ್ನು ಡ್ರಾಪ್ ಮಾಡಿ ಬರುವಾಗ ಸ್ನೇಹಿತರು ಸಿಕ್ಕಿದ್ದಾರೆ. ಅವರೊಂದಿಗೆ ತ್ರಿಮುತಿ ಬಾರ್ ಗೆ ಹೋಗಿ ಆರು ಪೆಗ್ ಕುಡಿದೆ. ನಂತರ ನನಗೆ ಕಾರಿನ ಮೇಲೆ ಹಿಡಿತ ತಪ್ಪಿತ್ತು" ಎಂದು ಪೊಲೀಸರ ಮುಂದೆ ಮಂಜುನಾಥ ತಪ್ಪೊಪ್ಪಿಕೊಂಡಿದ್ದಾನೆ.
ಮೆಡಿಕಲ್ ಟೆಸ್ಟ್ ಆಧರಿಸಿ ಆತನ ಮೇಲೆ ಕುಡಿದು ವಾಹನ ಚಾಲನೆ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ರಾತ್ರಿವೇಳೆ ಕುಡಿದು ವಾಹನ ಚಾಲನೆ ಮಾಡುವುದು ಅಪರಾಧ. ಪಾನಮತ್ತ ಚಾಲಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಅವಕಾಶವಿದೆ. ಹೀಗಾಗಿ ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ಕನ್ನಡ ಡ್ರೈವ್ ಸ್ಪಾರ್ಕ್ ಆಗಾಗ ಎಚ್ಚರಿಸುತ್ತಲೇ ಇದೆ.
ವಾಹನ ಚಾಲಕ ಕುಡಿದು ವಾಹನ ಚಾಲನೆ ಮಾಡುವುದು ಪತ್ತೆಯಾದರೆ 2 ಸಾವಿರ ರುಪಾಯಿಯಿಂದ 10 ಸಾವಿರ ರುಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ. ಅಥವಾ ಆರು ತಿಂಗಳಿನಿಂದ ನಾಲ್ಕು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಅಥವಾ ಇವೆರಡೂ ಶಿಕ್ಷೆಯನ್ನೂ ಅನುಭವಿಸಬೇಕಾಗಬಹುದು.
ರಕ್ತದಲ್ಲಿ ಸಿಕ್ಕ ಆಲ್ಕೋಹಾಲ್ ಪ್ರಮಾಣಕ್ಕೆ ತಕ್ಕಂತೆ ಶಿಕ್ಷೆ ಹೇಗೆ?


Click it and Unblock the Notifications









