ಡ್ರೈವಿಂಗ್ ಲೈಸನ್ಸ್ ಕುರಿತು ಆಯುಕ್ತ ಶ್ಯಾಂ ಭಟ್ ಏನಂದ್ರು?

Maintain Transparency while Issuing driving licences
ಬೆಂಗಳೂರು, ಜ 14: ಅತ್ಯುತ್ತಮ ಚಾಲಕರಿಗೆ ಮಾತ್ರ ವಾಹನ ಚಾಲನಾ ಪರವಾನಿಗೆ ನೀಡಿದರೆ ಅಪಘಾತಗಳನ್ನು ನಿಯಂತ್ರಣಕ್ಕೆ ತರಬಹುದು ಎಂದು ರಾಜ್ಯ ಸಾರಿಗೆ ಆಯುಕ್ತ ಟಿ. ಶ್ಯಾಂ ಭಟ್ ಹೇಳಿದ್ದಾರೆ. ಬೆಂಗಳೂರಿನ ಯುವನಿಕಾದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ-2012 ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

"ಜನರಿಗೆ ಡ್ರೈವಿಂಗ್ ಲೈಸನ್ಸ್ ನೀಡುವ ಯೋಜನೆ ಹೆಚ್ಚು ಪಾರದರ್ಶಕವಾಗಿರಬೇಕು. ವಾಹನ ಚಾಲನೆ ಸರಿಯಾಗಿ ತಿಳಿಯದವರಿಗೆ ಪರವಾನಿಗೆ ನೀಡಬಾರದು. ಈ ಕುರಿತು ಜಾಗೃತಿ ಮೂಡಿಸಲು ಜ್ಞಾನ ಭಾರತಿಯಲ್ಲಿ ಚಾಲನಾ ಟ್ರ್ಯಾಕ್ ನಿರ್ಮಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

ಅಪಘಾತಕ್ಕೆ ವಾಹನಗಳ ಸ್ಥಿತಿಗತಿ ಕೂಡ ಕಾರಣವಾಗುತ್ತದೆ. ತಾಂತ್ರಿಕವಾಗಿ ವಾಹನದ ಸಮರ್ಪಕತೆ ಪರಿಶೀಲಿಸಲು ನೆಲಮಂಗಲ ಸಮೀಪ ವಾಹನ ಗುಣಮಟ್ಟ ಪರಿಶೀಲನೆ ಮತ್ತು ಪ್ರಮಾಣ ಪತ್ರ ನೀಡುವ ಕಚೇರಿ ಆರಂಭಿಸುವ ಸೂಚನೆಯನ್ನು ಅವರು ನೀಡಿದ್ದಾರೆ,

"ಇದರೊಂದಿಗೆ ಧಾರವಾಡ ಮತ್ತು ಬೆಂಗಳೂರಿನಲ್ಲ ಜ್ಞಾನಭಾರತಿಯಲ್ಲಿರುವಂತಹ ತರಬೇತಿ ಸಂಸ್ಥೆ ಆರಂಭಿಸಲಾಗುವುದು. ಇಲ್ಲೇ ಪರವಾನಿಗೆ ಬಯಸುವರ ಚಾಲನಾ ಕೌಶಲ್ಯ ಪರಿಶೀಲಿಸಲಾಗುವುದು. ಇಲ್ಲೇ ಡ್ರೈವಿಂಗ್ ಲೈಸನ್ಸ್ ವಿತರಣೆ ಮಾಡಲಾಗುವುದು" ಎಂದು ಶ್ಯಾಂ ಭಟ್ ಹೇಳಿದ್ದಾರೆ.

More from DriveSpark

Article Published On: Saturday, January 14, 2012, 15:48 [IST]
English summary
Maintain absolute transparency in issuing driving licences, Sham Bhatt T , I.A.S., Commissioner for Transport & Road Safety Said in Road Safety Week celebrations.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+