ವಿತ್ತ ಸಚಿವ ಪ್ರಣಬ್ ಮುಖರ್ಜಿಗೆ ಕಪಿಲಾ ಬರೆದ ಪತ್ರ
"ರಸ್ತೆ ಅಪಘಾತ ಸಾರ್ವಜನಿಕರ ಆರೋಗ್ಯದ ಪ್ರಮುಖ ವೈರಿ. ಜನರ ಸುರಕ್ಷತೆಗಾಗಿ ಸರಕಾರ ಹೆಚ್ಚು ಕ್ರಮ ಕೈಗೊಳ್ಳಬೇಕು. ರಸ್ತೆ ಸುರಕ್ಷತೆಗೆ ಸಹಕರಿಸುವ ಖಾಸಗಿ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಬಜೆಟ್ ನಲ್ಲಿ ತೆರಿಗೆ ವಿನಾಯಿತಿ ಘೋಷಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇತರ ಅಭಿವೃದ್ಧಿಹೊಂದಿರುವ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ 15-20 ಪಟ್ಟು ಹೆಚ್ಚು ವಾಹನಗಳಿವೆ ಎನ್ನುವ ಮಾಹಿತಿ ಸೇರಿದಂತೆ ಪ್ರಣಬ್ ಮುಖರ್ಜಿಗೆ ಕಪಿಲಾ ಬರೆದ ಪತ್ರದಲ್ಲಿ ಇನ್ನಷ್ಟು ಪ್ರಮುಖ ಮಾಹಿತಿಗಳಿವೆ.
2000-2001ರಲ್ಲಿ ರಸ್ತೆ ಅಪಘಾತದ ಮೂಲಕ ಸಾಮಾಜಿಕ-ಆರ್ಥಿಕ ನಷ್ಟ 55 ಸಾವಿರ ಕೋಟಿ ರು. ಆಗಿತ್ತು. ಪ್ರತಿವರ್ಷ ಲಕ್ಷ ಲಕ್ಷ ಕೋಟಿ ರುಪಾಯಿ ರಸ್ತೆ ಅಪಘಾತಗಳಿಂದ ನಷ್ಟವಾಗುತ್ತದೆ ಎನ್ನುವ ಯೋಜನಾ ಆಯೋಗದ ಅಂಕಿಅಂಶಗಳನ್ನು ಕಪಿಲಾ ಉಲ್ಲೇಖಿಸಿದ್ದಾರೆ.
"ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯುಎಚ್ಒ) ಪ್ರಕಾರ 2030ಕ್ಕೆ ರಸ್ತೆ ಅಪಘಾತವು ಐದನೇ ಬೃಹತ್ ಸಮಸ್ಯೆಯಾಗಲಿದೆ ಎಂದು ಅವರು ವಿತ್ತ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಪ್ರಸಕ್ತ ಬಜೆಟ್ ನಲ್ಲಿ ರಸ್ತೆ ಸುರಕ್ಷತೆಯ ಕಡೆಗೂ ನಿಮ್ಮ ಗಮನವಿರಲಿ ಎಂದು ಹೇಳಿ ಪತ್ರಕ್ಕೆ ಕಪಿಲಾ ಚುಕ್ಕಿಯಿಟ್ಟಿದ್ದಾರೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications
