ನಗರಾದ್ಯಂತ ಮಳೆ; ತುರ್ತು ಸಂದರ್ಭದಲ್ಲಿ ಕರೆ ಮಾಡಿ '103'
ಬೆಂಗಳೂರು ನಗರಾದ್ಯಂತ ಕಳೆದ ರಾತ್ರಿಯಿಂದ ಭಾರಿ ಮಳೆ ಸುರಿಯುತ್ತಿದ್ದು, ತುರ್ತು ಸಂದರ್ಭಗಳಲ್ಲಿ '103' ಸಹಾಯವಾಣಿಗೆ ಸಂಖ್ಯೆಗೆ ಕರೆ ಮಾಡಲು ಸಾರ್ವಜನಿಕರಿಗೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಕರೆ ನೀಡಿದೆ.
ಹವಾಮಾನ ಇಲಾಖೆ ವರದಿ ಪ್ರಕಾರ ಬೆಂಗಳೂರು ನಗರಕ್ಕೆ ಮುಂಗಾರು ಪ್ರವೇಶವಾಗಿದ್ದು, ಮಳೆ ತೀವ್ರತೆ ಇನ್ನು ಜಾಸ್ತಿಯಾಗುವ ಸಾಧ್ಯತೆಯಿದೆ. ಇದರಂತೆ ವಾಹನ ಸವಾರರು ನಿಧಾನವಾಗಿ ಚಲಿಸುವಂತೆಯೇ ಸೂಚನೆ ನೀಡಲಾಗಿದೆ.
ತುರ್ತು ಸಂದರ್ಭದಲ್ಲಿ ಕರೆ ಮಾಡಿ- 103
ಯಾವುದೇ ಕಾರಣಕ್ಕೂ ವಾಹನಗಳನ್ನು ಮರಗಳ ಕೆಳಗಡೆ ನಿಲ್ಲಸಬಾರದು. ಇನ್ನು ಮಳೆಯಾಗುತ್ತಿರುವುದರಿಂದ ರಸ್ತೆಗಳು ಜಾರುವ ಸಂಭವವಿದೆ. ಹಾಗಾಗಿ ಚಾಲಕರು ನಿಧಾನವಾಗಿ ಚಲಿಸಿ ಸುರಕ್ಷಿತವಾಗಿ ತಲುಪಲು ಮನವಿ ಮಾಡಲಾಗಿದೆ.
ಮಳೆ ಸಂದರ್ಭದಲ್ಲಿ ವಾಹನದ ಇಂಡಿಕೇಟರ್ಸ್ ಬಳಸಿ ಸುಗಮ ಪಯಣಕ್ಕೆ ಅನುವು ಮಾಡಿಕೊಡಬೇಕು. ಮಳೆ ಸಂದರ್ಭದಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಿರುವುದರಿಂದ ಅನಾವ್ಯಶಕ ಹಾರ್ನ್ ಬಳಕೆ ಬೇಡ. ಈ ಮೂಲಕ ಶಬ್ದ ಮಾಲಿನ್ಯವನ್ನು ತಡೆಗಟ್ಟಬಹುದು. ಯಾವುದೇ ತುರ್ತು ಸಂದರ್ಭದಲ್ಲಿ ಟ್ರಾಫಿಕ್ ಸಹಾಯವಾಣಿ ಸಂಖ್ಯೆ '103'ಕ್ಕೆ ಮಾಹಿತಿ ಕೊಡಲು ವಿನಂತಿಸಲಾಗಿದೆ.


Click it and Unblock the Notifications









