ನಿಮ್ಮ ಬೇಸಿಗೆ ರಜೆ ಮಧುರಗೊಳಿಸಲು ಕೆಎಸ್ಆರ್ಟಿಸಿ ಜತೆ ಪಯಣಿಸಿ
ದೇಶದಲ್ಲೇ ಅತ್ಯುತ್ತಮ ಸಾರಿಗೆ ಸಂಚಾರವನ್ನು ಒದಗಿಸುತ್ತಿರುವ ರಾಜ್ಯದ ಹೆಮ್ಮೆಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬೇಸಿಗೆ ರಜೆ ವೇಳೆ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ವಿಶೇಷ ಬಸ್ ಸರ್ವಿಸ್ಗಳನ್ನು ಆರಂಭಿಸಿದೆ.
ಕೆಎಸ್ಆರ್ಟಿಸಿ ಫೇಸ್ಬುಕ್ ಪೇಜ್ನಲ್ಲಿ ಈ ಬಗ್ಗೆ ವಿವರಣೆ ಕೊಡಲಾಗಿದ್ದು, ಬೇಸಿಗೆ ರಜೆಗಳನ್ನು ಮಧುರಗೊಳಿಸಲು ಕೆಎಸ್ಆರ್ಟಿಸಿ ಜತೆ ಪಯಣಿಸಿ ಎಂಬ ಆಹ್ವಾನ ನೀಡಲಾಗಿದೆ. ತ್ವರೆ ಮಾಡಿ ನಿಮ್ಮ ಟಿಕೆಟ್ ಇಂದೇ ಕಾಯ್ದಿರಿಸಿರಿ!
ಪ್ರಯಾಣಿಕರು ಕೆಎಸ್ಆರ್ಟಿಸಿ ಅಧಿಕೃತ ವೆಬ್ಸೈಟ್ ಆದ ಕೆಎಸ್ಆರ್ಟಿಸಿ ಡಾಟ್ ಇನ್ (http://www.ksrtc.in/site/) ಭೇಟಿಕೊಟ್ಟು ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇದು ಮಾರ್ಚ್ 1ರಿಂದ ಆರಂಭವಾಗಿದ್ದು ಜೂನ್ 30ರ ವರೆಗೆ ಚಾಲ್ತಿಯಲ್ಲಿರುತ್ತದೆ.
ಹಾಗಿದ್ದರೆ ಈ ಬೇಸಿಗೆ ರಜೆಗಳಲ್ಲಿ ಕೆಎಸ್ಆರ್ಟಿಸಿ ಯಾವೆಲ್ಲ ಪ್ರದೇಶಗಳಿಗೆ ವಿಶೇಷ ಬಸ್ ಸೇವೆಗಳನ್ನು ಒದಗಿಸುತ್ತಿದೆ ಎಂಬುದನ್ನು ಫೋಟೊ ಫೀಚರ್ ಮೂಲಕ ನೋಡೋಣ ಬನ್ನಿ...
ವಿ.ಸೂ: ಅಗತ್ಯವಿದ್ದವರು ಫೋಟೊ ಹಿಗ್ಗಿಸಿ ವಿವರಣೆ ಪಡೆದುಕೊಳ್ಳಬಹುದು. ಇದಕ್ಕಾಗಿ ಚಿತ್ರಗಳನ್ನು ಡೌನ್ಲೋಡ್ ಮಾಡಿಕೊಂಡರೆ ಸಾಕು.

ಪಾಂಡಿಚೇರಿ, ವೆಲಾಂಕನಿ, ಸೇಲಂ, ಕಾಚಿಂಪುರಂ, ವೆಲ್ಲೂರು, ಚೆನ್ನೈ, ಕೊಯಂಬತ್ತೂರು, ಚೆನ್ನೈ, ತಿರುಪತಿ, ಮುಂಬೈ, ವಿಜಯವಾಡ ಹಾಗೂ ಮಂತ್ರಾಲಯಗಳಿಗೆ ವಿಶೇಷ ಬಸ್ ಸರ್ವಿಸ್ಗಳನ್ನು ಕೆಎಎಸ್ಆರ್ಟಿಸಿ ಆರಂಭಿಸಿದೆ.

ಪ್ರಸ್ತುತ ಸರ್ವೀಸ್ ಜೂನ್ 30ರ ವರೆಗೆ ಮುಂದುವರಿಯಲಿದೆ. ಇದಕ್ಕಾಗಿ ಕೆಎಸ್ಆರ್ಟಿಸಿ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಿ.

ದೇಶದಲ್ಲಿ ಅತ್ಯುತ್ತಮ ಬಸ್ ಸೇವೆಯನ್ನು ಕೆಎಸ್ಆರ್ಟಿಸಿ ಒದಗಿಸುತ್ತಿದೆ. ಹಾಗೆಯೇ ಪ್ರಾಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಹಾಗಿದ್ದರೂ ರಾಜ್ಯದೊಳಗೆ ವಿಶೇಷ ಬೇಸಿಗೆ ರಜೆ ಬಸ್ ಸರ್ವಿಸ್ಗಳನ್ನು ಆರಂಭಿಸದಿರುವುದು ಬೇಸರಕ್ಕೆ ಕಾರಣವಾಗಿದೆ.

ಇದೀಗ ಕೆಎಸ್ಆರ್ಟಿಸಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.


Click it and Unblock the Notifications








