ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕ್ವಾಡ್ರಾಸೈಕಲ್ ತಡೆ ಆದೇಶ ವಿಸ್ತಾರ
ಮಹತ್ವದ ಬೆಳವಣಿಗೆಯೊಂದರಲ್ಲಿ ಕ್ವಾಡ್ರಾಸೈಕಲ್ ವಿಭಾಗದ ಮೇಲಿನ ತಡೆ ಆದೇಶವನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಗುಲ್ಬರ್ಗಾವು ವಿಸ್ತರಿಸಿದೆ.
ದೇಶದ ರಸ್ತೆಯಲ್ಲಿ ಓಡಾಡುವ ಆಟೋ ರಿಕ್ಷಾಗಳಿಗೆ ಬದಲಿ ವ್ಯವಸ್ಥೆ ಎಂಬಂತೆ ನಾಲ್ಕು ಚಕ್ರಗಳ ಕ್ವಾಡ್ರಾಸೈಕಲ್ ವಾಹನಗಳ ಪ್ರಯಾಣಕ್ಕೆ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿತ್ತು.

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಕೋನದಲ್ಲಿ ಕೇಂದ್ರ ಸರಕಾರ ಕ್ವಾಡ್ರಾಸೈಕಲ್ ವಾಹನಗಳಿಗೆ ಅನುವು ಮಾಡಿಕೊಟ್ಟಿತ್ತು. ಆದರೆ ಬಜಾಜ್ನ ಆರ್ಇ60 ಹೊರತುಪಡಿಸಿದರೆ ಈ ವಿಭಾಗದಲ್ಲಿ ವಾಹನಗಳು ನಿರ್ಮಾಣವಾಗಿಲ್ಲ.
ಬಹುತೇಕ ಸಂಸ್ಥೆಗಳು ಇನ್ನಷ್ಟೇ ಕ್ವಾಡ್ರಾಸೈಕಲ್ ವಾಹನಗಳನ್ನು ನಿರ್ಮಾಣ ಮಾಡಬೇಕಾಗಿದೆ. ಮಹೀಂದ್ರ ಹಾಗೂ ಟಾಟಾ ಸಂಸ್ಥೆಗಳು ಈ ವಿಭಾಗದಲ್ಲಿ ಹೊಸ ವಾಹನಗಳ ತಯಾರಿಯಲ್ಲಿ ತೊಡಗಿಸಿಕೊಂಡಿದೆ.
ಈ ನಡುವೆ 2014 ನವೆಂಬರ್ 25ರಂದು ಜಾರಿಯಲ್ಲಿದ್ದ ಕ್ವಾಡ್ರಾಸೈಕಲ್ ಮೇಲಿನ ತಡೆಯನ್ನು ನವೆಂಬರ್ 26ರ ವರೆಗೆ ಕರ್ನಾಟಕ ಉಚ್ಚ ನ್ಯಾಯಾಲಯ ಗುಲ್ಬರ್ಗಾ ವಿಸ್ತರಿಸಿದೆ. ಅಲ್ಲದೆ ಈ ಸಂಬಂಧ ಕೇಂದ್ರ ಸರಕಾರ ಇನ್ನಷ್ಟೇ ನ್ಯಾಯಾಲಕ್ಕೆ ಉತ್ತರ ನೀಡಬೇಕಾಗಿದೆ.


Click it and Unblock the Notifications








