Just In
- 1 hr ago ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ: ಟಾಟಾ ಟಿಯಾಗೋ ಇವಿ EMI, ಆನ್ ರೋಡ್ ಬೆಲೆ ಎಷ್ಟು?
- 15 hrs ago ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- 15 hrs ago KWID: ಜನಪ್ರಿಯ ರೆನಾಲ್ಟ್ ಕ್ವಿಡ್ ಕಾರು ಖರೀದಿಸಬೇಕೇ.. ಆನ್ - ರೋಡ್ ಬೆಲೆ ಏನು, EMI ಎಷ್ಟು?
- 16 hrs ago Citroen Basalt Vision: ಸಿಟ್ರನ್ ಹೊಸ ಕಾಂಪ್ಯಾಕ್ಟ್ ಎಸ್ಯುವಿ ಅನಾವರಣ... ಬಿಡುಗಡೆಗೆ ಸಜ್ಜು!
Don't Miss!
- Movies ರೋಜಾ ವಿರುದ್ಧ ಅನುಷ್ಕಾ ಶೆಟ್ಟಿ ಸ್ಪರ್ಧೆ? ಸ್ವೀಟಿ ಕಣಕ್ಕಿಳಿಸಿ ಸೇಡು ತೀರಿಸಿಕೊಳ್ತಾರಾ ಪವನ್ ಕಲ್ಯಾಣ್?
- News ಬಿಜೆಪಿ ಯುವಕರಿಗೆ ಪಕೋಡಾ ಮಾರಿ ಎಂದು ಹೇಳಿ ಅವಮಾನ ಮಾಡಿದೆ- ಡಿ ಕೆ ಶಿವಕುಮಾರ್ ಕಿಡಿ
- Finance ಐತಿಹಾಸಿಕ ಹರಾಜು: ಭಾರತ ಮೂಲದ ನೆಲ್ಲೂರು ಹಸು ಬ್ರೆಜಿಲ್ ನಲ್ಲಿ 40 ಕೋಟಿ ರೂ.ಗೆ ಮಾರಾಟ!
- Sports IPL 2023: SRH ಅತ್ಯಧಿಕ ಐಪಿಎಲ್ ಮೊತ್ತ ಗಳಿಸಿದ ಹೊರತಾಗಿಯೂ RCBಯ ಈ ದಾಖಲೆ ಟಚ್ ಮಾಡಲಾಗಲಿಲ್ಲ
- Technology ಅಗ್ಗದ ಬೆಲೆಯಲ್ಲಿ 5G ಫೋನ್ ಬೇಕೆ?..ಹಾಗಿದ್ರೆ ಈ ಆಫರ್ ನಿಮಗೆ ಸೂಪರ್!
- Lifestyle ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸೇವ್ ರಿವರ್' ಅಭಿಯಾನಕ್ಕಾಗಿ 2.10 ಕೋಟಿ ಮೌಲ್ಯದ ಕಾರು ಖರೀದಿಸಿದ ಸದ್ಗುರು
ಆಧುನಿಕತೆ ಮತ್ತು ಕೈಗಾರಿಕರಣದ ಭರಾಟೆಯಲ್ಲಿ ದಿನದಿಂದ ದಿನಕ್ಕೆ ಪರಿಸರದ ಮೇಲಿನ ಮಾನವನ ಕೃತ್ಯಗಳು ಹೆಚ್ಚುತ್ತಿದ್ದು,ಪರಿಣಾಮ ನದಿ ಮೂಲಗಳು ಭತ್ತಿ ಹೊಗುತ್ತಿವೆ.ಈ ಹಿನ್ನೆಲೆ 'ಇಶಾ ಪ್ರತಿಷ್ಠಾನ' ಸೇವಾಸಂಸ್ಥೆಯು ಸೇವ್ ರಿವರ್ ಅಭಿಯಾನ ಕೈಗೊಂಡಿದೆ.
ಆಧುನಿಕತೆ ಮತ್ತು ಕೈಗಾರಿಕರಣದ ಭರಾಟೆಯಲ್ಲಿ ದಿನದಿಂದ ದಿನಕ್ಕೆ ಪರಿಸರದ ಮೇಲಿನ ಮಾನವನ ಕೃತ್ಯಗಳು ಹೆಚ್ಚುತ್ತಿದ್ದು, ಪರಿಣಾಮ ನದಿ ಮೂಲಗಳು ಭತ್ತಿ ಹೊಗುತ್ತಿವೆ. ಈ ಹಿನ್ನೆಲೆ 'ಇಶಾ ಪ್ರತಿಷ್ಠಾನ' ಸೇವಾಸಂಸ್ಥೆಯು ಸೇವ್ ರಿವರ್ ಅಭಿಯಾನ ಕೈಗೊಂಡಿದೆ.
ನದಿಗಳ ರಕ್ಷಣೆಗಾಗಿ 'ಇಶಾ ಪ್ರತಿಷ್ಠಾನ' ಸೇವಾಸಂಸ್ಥೆಯು ಬೃಹತ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಶಿಸಿಹೋಗುತ್ತಿರುವ ನದಿ ಮೂಲಗಳ ಕುರಿತು ಜನತೆಗೆ ಅರಿವು ಮೂಡಿಸುವುದಕ್ಕಾಗಿ ಮಾಡುತ್ತಿರುವ ಅಭಿಯಾನ ಇದಾಗಿದೆ.
ಇದಕ್ಕಾಗಿ ಭರ್ಜರಿ ತಯಾರಿ ನಡೆಸಿರುವ ಸದ್ಗುರು ಜಗ್ಗಿ ವಾಸುದೇವ ಅವರು ತಮ್ಮ ಇಶಾ ಫೌಂಡೇಶನ್ ಮೂಲಕ ನದಿಗಳ ಪುನರುಜ್ಜೀವನಕ್ಕೆ ಮುಂದಾಗಿದ್ದು, ಕನ್ಯಾಕುಮಾರಿಯಿಂದ ಹಿಮಾಲಯದ ತವಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದಾರೆ.
ಹೀಗಾಗಿ ಹಸಿರು ಸಿರಿಯನ್ನು ಪ್ರತಿನಿಧಿಸುವ ದೃಷ್ಠಿಯಿಂದ ಐಷಾರಾಮಿ ಕಾರು ಒಂದನ್ನು ಖರೀದಿ ಮಾಡಿರುವ ಸದ್ಗುರು ಜಗ್ಗಿ ವಾಸುದೇವ ಅವರು ರೂ.2.10 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಜಿ63ಎಎಂಜಿ ಕಾರನ್ನು ಜಾಗೃತಿ ಅಭಿಯಾನಕ್ಕೆ ಆಯ್ದುಕೊಂಡಿದ್ದಾರೆ.
Recommended Video
ಇನ್ನು ಮರ್ಸಿಡಿಸ್ ಬೆಂಝ್ ಜಿ63ಎಎಂಜಿ ಕಾರಿನೊಂದಿಗೆ ಸದ್ಗುರು ಜಗ್ಗಿ ವಾಸುದೇವ ಅವರ ಸೇವ್ ರಿವರ್ ಜಾಥಾ ಶುರುವಾಗಲಿದ್ದು, ಕಠಿಣ ಪರಿಸ್ಥಿತಿಗಳಲ್ಲೂ ಸೂಕ್ತ ಭದ್ರತೆ ಒದಗಿಸುವ ಸೌಲಭ್ಯಗಳನ್ನು ಪಡೆದುಕೊಂಡಿದೆ.
ಇನ್ನೊಂದು ವಿಶೇಷ ಅಂದ್ರೆ ಭಾರತದಲ್ಲಿ ಕೆಲವೇ ಉದ್ಯಮಿಗಳು ಮತ್ತು ಬಾಲಿವುಡ್ ನಟರು ಮಾತ್ರ ಮರ್ಸಿಡಿಸ್ ಬೆಂಝ್ ಜಿ63ಎಎಂಜಿ ಹೊಂದಿದ್ದು, ಇದೀಗ ಜಗ್ಗಿ ವಾಸುದೇವ ಅವರು ಖರೀದಿ ಮಾಡುವ ಮೂಲಕ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ.
5.5-ಲೀಟರ್ ಟ್ವಿನ್ ವಿ8 ಎಂಜಿನ್ ಹೊಂದಿರುವ ಮರ್ಸಿಡಿಸ್ ಬೆಂಝ್ ಜಿ63ಎಎಂಜಿ ಕಾರು 563-ಬಿಎಚ್ಪಿ ಮತ್ತು 760-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ. ಜೊತೆಗೆ 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, 8 ಏರ್ಬ್ಯಾಗ್, ಎಬಿಎಸ್, ಹಿಲ್ ಕಂಟ್ರೋಲರ್ ಸೌಲಭ್ಯ ಹೊಂದಿದೆ.
ಹೀಗಾಗಿ ಅತ್ಯಂತ ಕಡಿಮೆ ಇಂಧನ ಕಾರ್ಯಕ್ಷಮತೆ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್ಗೆ ಕೇವಲ 5 ಕಿ.ಮಿ ಮೈಲೇಜ್ ನೀಡಲು ಮಾತ್ರ ಶಕ್ತವಾಗಿದೆ ಎಂದರೇ ನಂಬಲೇಬೇಕು. ಆದರೂ ಉತ್ತಮ ಸೌಲಭ್ಯಗಳನ್ನು ಹೊಂದಿರುವುದು ವಿಶೇಷತೆ.