Just In
- 2 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 2 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 4 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- 5 hrs ago ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
Don't Miss!
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- News Delhi Rain: ದೆಹಲಿಯಲ್ಲಿ ದಾರಾಕಾರ ಮಳೆ: ಬಿಸಿಲಿನ ಶಾಖದಿಂದ ಪರಿಹಾರ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Movies ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಮ-ಬೆಸ ಸಂಚಾರ ಸೂತ್ರದಲ್ಲಿ ಹೊಸ ಬದಲಾವಣೆ- ಎನ್ಜಿಟಿಯಿಂದ ಹೊರಬಿತ್ತು ಮಹತ್ವದ ಆದೇಶ..!
ರಾಜಧಾನಿ ದೆಹಲಿಯಲ್ಲಿ ಮಿತಿ ಮೀರುತ್ತಿರುವ ಮಾಲಿನ್ಯವನ್ನು ತಡೆಯಲು ಆಪ್ ಸರ್ಕಾರವು ಸಮ-ಬೆಸ ಸಂಚಾರ ಸೂತ್ರವನ್ನು ಜಾರಿಗೆ ತಂದಿತ್ತು. ಆದ್ರೆ ಸೂಕ್ತ ನಿರ್ದೆಶನ ಇಲ್ಲದ ಹಿನ್ನೆಲೆಯಲ್ಲಿ ವಿನೂತನ ಯೋಜನೆಗೆ ಹಿನ್ನಡೆ ಉಂಟಾಗಿತ್ತು.
ಆದ್ರೆ ಇದೀಗ ಸಮ-ಬೆಸ್ ಸಂಚಾರ ಸೂತ್ರದಲ್ಲಿ ಕೆಲವು ಬದಲಾವಣೆಗಳನ್ನು ತರವು ಮೂಲಕ ಮತ್ತೆ ಜಾರಿಗೆ ತರಲು ಸಿದ್ದತೆ ನಡೆಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಎನ್ಜಿಟಿಯಿಂದ ಮಹತ್ವದ ಆದೇಶ ಹೊರಬಿದ್ದಿದೆ. ಹೊಸ ಆದೇಶದಿಂದ ದೆಹಲಿ ಜನತೆಯು ನಿಟ್ಟುಸಿರು ಬಿಟ್ಟಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಮತ್ತೆ ಸರಿ-ಬೆಸ ಸೂತ್ರದ ಆಧಾರದ ಮೇಲೆ ವಾಹನಗಳು ರಸ್ತೆಗಿಳಿಯಲಿವೆ.
ರಾಷ್ಟ್ರೀಯ ಹಸಿರು ಪೀಠ(ಎನ್ಜಿಟಿ)ವು ಸಮ-ಬೆಸ ಸಂಚಾರಿ ಸೂತ್ರದಲ್ಲಿ ಕೆಲವು ಬದಲಾವಣೆಗಳನ್ನು ತರುವ ಮೂಲಕ ಹೊಸ ಯೋಜನೆಯನ್ನು ಮರು ಜಾರಿಗೆ ಮಾಡಲು ಒಪ್ಪಿಗೆ ಸೂಚಿಸಿದ್ದು, ದ್ವಿಚಕ್ರ ವಾಹನಗಳ ಬಳಕೆದಾರರಿಗೆ ಮತ್ತು ಮಹಿಳಾ ಚಾಲಕರಿರುವ ವಾಹನಗಳಿಗೆ ವಿನಾಯ್ತಿ ನೀಡುವಂತೆ ನಿರ್ದೆಶನ ನೀಡಿದೆ.
ದೆಹಲಿ ಸರ್ಕಾರವು ಸಮ-ಬೆಸ್ ಸಂಚಾರಿ ಸೂತ್ರವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಹಲವು ಕಠಿಣ ಕ್ರಮ ಕೈಗೊಂಡಿದ್ದರೂ, ವೈಜ್ಞಾನಿಕವಾದ ರೂಪರೇಷ ಇಲ್ಲದ ಹಿನ್ನೆಲೆಯಲ್ಲಿ ಮಹತ್ವದ ಯೋಜನೆಗೆ ಹಿನ್ನಡೆಯಾಗಿದ್ದರಿಂದ ಹೊಸ ಯೋಜನೆಯನ್ನೇ ಕೈಬಿಡಲಾಗಿತ್ತು.
ಆದ್ರೆ ಇದೀಗ ಸಮ-ಬೆಸ ಸಂಚಾರಿ ನಿಯಮಕ್ಕೆ ಬದಲಾವಣೆ ತರುವ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಬಗ್ಗೆ ರಾಷ್ಟ್ರೀಯ ಹಸಿರು ಪೀಠವು ಮಹತ್ವದ ಆದೇಶ ನೀಡಿದ್ದು, ಮಹಿಳಾ ಚಾಲಕರು ಮತ್ತು ದ್ವಿಚಕ್ರಗಳಿಗೆ ಹೊಸ ಕಾಯ್ದೆಯಿಂದ ವಿನಾಯ್ತಿ ನೀಡಿದೆ.
ಇದರಿಂದ ಹೊಸ ಸಂಚಾರಿ ಸೂತ್ರಕ್ಕೆ ಅನುಗುಣವಾಗಿಯೇ ವಾಹನಗಳು ದೆಹಲಿ ರಸ್ತೆಗಳಲ್ಲಿ ಓಡಾಡಬೇಕಿದ್ದು, ಈ ಹಿಂದೆ ದ್ವಿಚಕ್ರ ವಾಹನಗಳಿಗೆ ಮತ್ತು ಮಹಿಳಾ ಚಾಲಕರಿರುವ ಕಾರುಗಳಿಗೂ ಬ್ರೇಕ್ ಹಾಕಿತ್ತು. ಆದ್ರೆ ಸರ್ಕಾರದ ನಿರ್ಧಾರದಿಂದ ದೆಹಲಿ ಜನತೆ ರೋಷಿ ಹೊಗಿದ್ದರು.
ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಎನ್ಜಿಟಿಯು ತುರ್ತು ಸೇವಾ ವಾಹನಗಳಾದ ಪೊಲೀಸ್, ಅಗ್ನಿಶಾಮಕದಳ, ಆ್ಯಂಬುಲೆನ್ಸ್ಗಳಿಗಿದ್ದ ವಿನಾಯ್ತಿಯನ್ನು ದ್ವಿಚಕ್ರ ವಾಹನಗಳಿಗೆ ಮತ್ತು ಮಹಿಳಾ ಚಾಲನೆಯ ಕಾರುಗಳಿಗೂ ವಿನಾಯ್ತಿ ನೀಡಿದೆ.
MOST READ: ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!
ಈ ಮಧ್ಯೆ ದೇಶದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಪರಿಸರ ಮಾಲಿನ್ಯ ಅಷ್ಟೇ ಅಲ್ಲದೇ ನಗರಪ್ರದೇಶಗಳಲ್ಲಿ ವಾಹನಗಳು ನಿಲ್ಲುವುದಕ್ಕೂ ಜಾಗವಿಲ್ಲ ಪರಿಸ್ಥಿತಿ ಎದುರಾಗಿದೆ. ಈ ಸಮಸ್ಯೆಯಿಂದ ಹೊರ ಬರುಲು ಮಹತ್ವದ ಯೋಜನೆಯೊಂದನ್ನ ಜಾರಿಗೆ ತರುತ್ತಿರುವ ಗುಜರಾತ್ ಸರ್ಕಾರವು ಒಬ್ಬ ವ್ಯಕ್ತಿ ಒಂದೇ ವಾಹನ ಎನ್ನುವ ಹೊಸ ನೀತಿಯೊಂದನ್ನ ಜಾರಿ ಮಾಡಲು ಸಿದ್ದತೆ ನಡೆಸಿದೆ.
ಕೈಗಾರಿಕೆಯಲ್ಲಿ ದೇಶದ ಇತರೆ ರಾಜ್ಯಗಳಿಂತ ಮುಂಚೂಣಿಯಲ್ಲಿರುವ ಗುಜರಾತ್ನಲ್ಲಿ ಇದೀಗ ಮಿತಿಮಿರುತ್ತಿರುವ ವಾಹನಗಳ ಸಂಖ್ಯೆಯು ಹೊಸ ಸಮಸ್ಯೆಗಳಿಗೆ ಕಾರಣವಾಗಿದ್ದು, ಇದೇ ಕಾರಣಕ್ಕೆ ಹೊಸ ಸಂಚಾರಿ ನಿಯಮವನ್ನ ಜಾರಿ ತರುತ್ತಿರುವ ಗುಜರಾತ್ ಸರ್ಕಾರವು ಒಂದಕ್ಕಿಂತ ಹೆಚ್ಚು ವಾಹನಗಳನ್ನು ಖರೀದಿ ಮಾಡುವ ಗ್ರಾಹಕರ ಮೇಲೆ ನಿಯಂತ್ರಣ ಹೇರಲು ಮುಂದಾಗಿದೆ.
ಅಂದರೇ, ಒಬ್ಬ ವ್ಯಕ್ತಿಯು ಯಾವುದಾದರೂ ಒಂದು ವಾಹನದ ಮಾಲೀಕತ್ವವನ್ನು ಮಾತ್ರವೇ ಹೊಂದಬೇಕಿದ್ದು, ಇದರಿಂದ ಒಂದಕ್ಕಿಂತಲೂ ಹೆಚ್ಚು ವಾಹನಗಳನ್ನ ಖರೀದಿ ಮಾಡುಲು ಮುಂದಾಗುವ ಗ್ರಾಹಕರಿಗೆ ಹೊಸ ರೂಲ್ಸ್ ಅವಕಾಶ ನೀಡುವದಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ಹೊರತುಪಡಿಸಿ ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಕೆಲವು ಶ್ರೀಮಂತರು ಒಂದಕ್ಕಿಂತಾ ಹೆಚ್ಚು ಕಾರುಗಳನ್ನು ಮತ್ತು ಬೈಕ್ಗಳನ್ನು ಹೊಂದುತ್ತಿರುವ ಪ್ಯಾಶನ್ ಆಗಿದ್ದು, ಇದೇ ಕಾರಣಕ್ಕಾಗಿಯೇ ಹೆಚ್ಚಿನ ಮಟ್ಟದ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿರುವುದು.
ಇದಕ್ಕಾಗಿ ಗುಜುರಾತ್ ಸರ್ಕಾರವು ಆರ್ಟಿಒ ಇಲಾಖೆಯಿಂದ ಕಾರು ಮಾಲೀಕರ ಮಾಹಿತಿ ಸಂಗ್ರಹಿಸುತ್ತಿದ್ದು, ಹೊಸ ವಾಹನಗಳನ್ನು ಖರೀದಿಸುವಾಗ ಆರ್ಟಿಒದಿಂದ ಎನ್ಒಸಿ ಪ್ರಮಾಣ ಪತ್ರವನ್ನು ಪಡೆದುಕೊಂಡ ನಂತರವೇ ಹೊಸ ವಾಹನ ಖರೀದಿಗೆ ಅವಕಾಶ ಸಿಗಲಿದೆ.
MOST READ: ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!
ಇದರ ಹೊರತಾಗಿ ಒಂದಕ್ಕಿಂತ ಹೆಚ್ಚಿನ ವಾಹನಗಳನ್ನು ಖರೀದಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡದಿರುವಂತೆ ಗುಜರಾತ್ ರೋಡ್ ಸೆಫ್ಟಿ ಅಥಾರಟಿ ಆಕ್ಟ್ ಅಡಿಯಲ್ಲಿ ಬರುವ ಸೆಕ್ಷನ್ 33ರನ್ನ ತಿದ್ದುಪಡಿ ತರುವ ಮೂಲಕ ಬೇಕಾಬಿಟ್ಟಿ ವಾಹನ ಖರೀದಿಗೆ ನಿರ್ಬಂಧ ಹೇರಲು ಸಿದ್ದತೆ ನಡೆಸಲಾಗುತ್ತಿದೆ.
15 ವರ್ಷ ಮೇಲ್ಪಟ್ಟ ವಾಹನಗಳಿಗೆ ಸಂಕಷ್ಟ
ಹೌದು, ಗುಜರಾತ್ ಸರ್ಕಾರವು ಒಬ್ಬ ವ್ಯಕ್ತಿಗೆ ಒಂದೇ ವಾಹನ ಕಾಯ್ದೆ ಜೊತೆಗೆ 15 ವರ್ಷ ಮೇಲ್ಪಟ್ಟ ವಾಹನಗಳ ಓಡಾಟದ ಮೇಲೂ ನಿಯಂತ್ರಣ ಹೇರಲು ಮುಂದಾಗಿದ್ದು, ಹಳೆಯ ವಾಹನ ಮಾಲೀಕರು ಹೊಸ ವಾಹನಗಳನ್ನು ಖರೀದಿ ಮಾಡುವುದಾದರೇ ಕಡ್ಡಾಯ ಹಳೆಯ ವಾಹನಗಳನ್ನ ಸ್ಕ್ರ್ಯಾಪಿಂಗ್ ಮಾಡಲೇಬೇಕೆಂಬ ನಿಯಮಗಳನ್ನು ಜಾರಿ ಮಾಡುವ ಸಾಧ್ಯತೆಗಳಿವೆ.
ಒಟ್ಟಿನಲ್ಲಿ ಟ್ರಾಫಿಕ್ ಸಮಸ್ಯೆಯನ್ನ ತಗ್ಗಿಸಲು ಗುಜರಾತ್ ಸರ್ಕಾರವು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದು, ಹೊಸ ಸಂಚಾರಿ ನೀತಿ ಯಶಸ್ವಿಯಾಗಿದ್ದೇ ಆದರಲ್ಲಿ ದೇಶದ ಇತರೆ ರಾಜ್ಯಗಳಲ್ಲೂ ಹೊಸ ಕಾಯ್ದೆ ಅನುಷ್ಠಾನಕ್ಕೆ ಬಂದ್ರು ಬರಬಹುದು.
ಮಾಲಿನ್ಯದಿಂದ ಬೇಸತ್ತು ಹೋಗಿರುವ ಜನತೆಗೆ ಸದ್ಯ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳು ಪರ್ಯಾಯ ಆಯ್ಕೆಯಾಗುತ್ತಿದ್ದು, ಬೆಂಗಳೂರು ಮೂಲದ ಏಥರ್ ಎನರ್ಜಿ ಸಂಸ್ಥೆಯು ಬಿಡುಗಡೆಗೊಳಿಸಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಇಲ್ಲಿವೆ ನೋಡಿ..