Just In
- 8 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 9 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 11 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 12 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಂಬ್ಯೂಲೆನ್ಸ್ ಗೆ ದಾರಿ ಬಿಡದ ಇಂತವರನ್ನ ಏನು ಮಾಡಬೇಕು ನೀವೆ ಹೇಳಿ...
ಆಂಬ್ಯೂಲೆನ್ಸ್ ಮತ್ತು ಇತರ ತುರ್ತು ವಾಹನಗಳಿಗೆ ದಾರಿ ನೀಡಬೇಕು ಮತ್ತು ಅಂತಹ ಒಂದು ವಾಹನವನ್ನು ನಿರ್ಬಂಧಿಸುವುದು ಭಾರತ ಸೇರಿದಂತೆ ವಿಶ್ವದ ಬಹುತೇಕ ಭಾಗಗಳಲ್ಲಿ ಕ್ರಿಮಿನಲ್ ಅಪರಾಧವಾಗಿದೆ. ಆದರೆ ಇಲ್ಲಿ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ ರೈಡರ್ ಒಬ್ಬ ಆಂಬ್ಯೂಲೆನ್ಸ್ ಗೆ ದಾರಿ ನೀಡದೆ ಕೇರಳ ಪೊಲೀಸರ ಹತ್ತಿರ ಸಿಕ್ಕಿಬಿದ್ದಿದ್ದಾನೆ. ಮುಂದೇನಾಯ್ತು ಎಂಬುದನ್ನು ತಿಳಿಯಲು ಮುಂದಕ್ಕೆ ಓದಿರಿ...
ಹೌದು, ಆಂಬ್ಯೂಲೆನ್ಸ್ ಗೆ ರಸ್ತೆಗಳಲ್ಲಿ ದಾರಿ ಬಿಡದೆ ಇದ್ದಲ್ಲಿ ಅಂತವರ ಮೇಲೆ ಕಠಿಣವಾದ ಶಿಕ್ಷೆಯನ್ನು ನೀಡಿರುವುದನ್ನು ಮಾದಿರುವುದು ನಾವು ಕಂಡಿದ್ದೇವೆ. ಇಲ್ಲಿ ನಡೆದದ್ದು ಕೂಡಾ ಅದೆ, ಆಂಬ್ಯೂಲೆನ್ಸ್ ಗೆ ದಾರಿ ಬಿಡದ ಈ ರಾಯಲ್ ಎನ್ಫೀಲ್ಡ್ ಸವಾರಿಯ ವಿದೀಯೋ ಇದೀಗೆ ಎಲ್ಲೆಡೆ ವೈರಲ್ ಆಗಿದ್ದು, ಈ ವಿಡಿಯೋನಲ್ಲಿ ಕಾಣಿಸಿಕೊಂಡ ಆ ಯುವಕ ಕಯಾಮ್ಕುಲಂ ಮೂಲದ ಆದರ್ಶ್ ಎಂದು ಗುರುತಿಸಲಾಗಿದೆ.
ಯುವಕನಿಗೆ ಬಿತ್ತು ಭಾರೀ ದಂಡ
24 ವರ್ಷದ ರಾಯಲ್ ಎನ್ಫೀಲ್ಡ್ ರೈಡರ್ ಆದರ್ಶ್ ಕಯಾಮ್ಕುಲಂ ನಿಂದ ಎರ್ನಾಕುಲಂಗೆ ಹೋಗುವ ವೇಳೆ ಹೀಗೆ ನಡೆದಿದ್ದು, ಆದರ್ಶ್ಗೆ ಟ್ರಾಫಿಕ್ ಪೊಲೀಸರು ರೂ. 6,000 ದಂಡವನ್ನು ವಿಧಿಸಿದ್ದಾರೆ. ಟ್ರಾಫಿಕ್ ಪೊಲೀಸರು ದಂಡ ನೀಡಿದ ನಂತರ ಹೇಗೆ ಮಾದಿದ್ದು ಯಾಕೆ ಅಂತ ಕೇಳಿದಾಗ ಅವರು ನೀಡಿದ ಉತ್ತರವೆ ಬೇರೆ.
ಅಸಲಿಗೆ ಆದರ್ಶ್ ಹಾಗೆ ಮಾಡಿದ್ದೇಕೆ.?
ಎಲ್ಲರಿಗೂ ಕಾಣಿಸಿದ್ದು, ಆತ ಆಂಬ್ಯೂಲೆನ್ಸ್ ಗೆ ದಾರಿ ಬಿಟ್ಟಿಲ್ಲವೆಂದು ಮಾತ್ರ. ಆದರೆ ನಿಜಕ್ಕೂ ಆದರ್ಶ್ ಆ ಆಂಬ್ಯೂಲೆನ್ಸ್ ಗೆ ಮಾರ್ಗದರ್ಶಕನಾಗಿ ಮುಂದೆ ಹೋಗುತ್ತಿದ್ದನಂತೆ. ತುರ್ತು ವಾಹನಕ್ಕಾಗಿ ಪೈಲಟ್ ವಾಹನದಂತೆ ಕಾರ್ಯನಿರ್ವಹಿಸುವ ಯಾವುದೇ ಅನಧಿಕೃತ ವಾಹನವನ್ನು ಕಾನೂನು ಎಂದಿಗೂ ಪರಿಗಣಿಸಲ್ಪಡುವುದಿಲ್ಲ.
ಅಂದರೆ ಇದರ ಅರ್ಥ ಆದರ್ಶ್ ಜವಾಬ್ದಾರಿಯನ್ನು ತೆಗೆದುಕೊಂಡು ಆಂಬ್ಯೂಲೆನ್ಸ್ ಗೆ ರಸ್ತೆಯಲ್ಲಿ ಸಹಾಯ ಮಾಡಲು ಮುಂದಾದರೂ ಸಹ, ಅದೊಂದು ಅನಧಿಕೃತ ವಾಹನವಾದುದರಿಂದ ಅವರಿಗೆ ದಂಡ ವಿಧಿಸಲಾಗಿದೆ ಎನ್ನಲಾಗಿದೆ. ಹಾಗಾದರೆ ನಿಮಗೆ ಆಂಬ್ಯೂಲೆನ್ಸ್ ಕಾಣಿಸಿಕೊಂಡಲ್ಲಿ ಮಾಡಬೇಕಾದ ಕೆಲಸವೇನು.?
ರಸ್ತೆಯಲ್ಲಿ ನಿಮಗೆ ಆಂಬ್ಯೂಲೆನ್ಸ್ ಕಾಣಿಸಿಕೊಂಡರೆ ಈ ಕೆಲಸವನ್ನು ತಕ್ಷಣ ಮಾಡಿ..
- ಆಂಬ್ಯೂಲೆನ್ಸ್ ಸೈರನ್ ನಿಮಗೆ ಕೇಳಿಸಿದ್ದಾಲಿ ತಕ್ಷಣವೇ ನಿಮ್ಮ ವಾಹನದ ಇಂಡಿಕೇಟರ್ ಅನ್ನು ಆನ್ ಮಾಡಿ ಎಡಭಾಗಕ್ಕೆ ನಿಮ್ಮ ವಾಹನವನ್ನು ಸೇರಿಸೆ. ಇದು ಖಚಿತವಾಗಿ ಆಂಬ್ಯೂಲೆನ್ಸ್ ಗೆ ದಾರಿ ಮಾಡಿಕೊಡುವಲ್ಲಿ ಸಹಕಾರಿಯಾಗುತ್ತದೆ. ಆದರೆ ಎಡಭಾಗಕ್ಕೆ ನಿಮ್ಮ ವಾಹನವನ್ನು ಕೊಂಡೊಯ್ಯುವಾಗ ಮರೆಯದೆ ನಿಮ್ಮ ಎಡಭಾಗದಲ್ಲಿನ ಮಿರರ್ ಅನ್ನು ಗಮನಿಸಿ ಬೇರಾವುದಾದರು ವಾಹನ ಬರುತ್ತಿದೆಯೆ ಎಂದು ಪರಿಶೀಲಿಸಿ ಎಡಕ್ಕೆ ಬನ್ನಿ.
ನಿಮ್ಮ ಮುಂಭಾಗದಲ್ಲಿ ಆಂಬ್ಯೂಲೆನ್ಸ್ ಹೋಗುತ್ತಿದ್ದಲ್ಲಿ ದಯವಿಟ್ಟು ನೀವು ಅದನ್ನು ಓವರ್ ಟೇಕ್ ಮಾಡಲು ಮುಂದಾಗಬೇಡಿ. ಇದೊಂದು ನಮ್ಮ ಭಾರತೀಯ ರಸ್ತೆಯಲ್ಲಿ ಅಭ್ಯಾದವಾಗಿ ಹೋಗಿದೆ ಎಂದರೆ ತಪ್ಪಾಗುವಿದಿಲ್ಲ. ದಾರಿ ಸಿಕ್ಕಲ್ಲೆಲ್ಲ ಹಲವಾರು ವಾಹನ ಸವಾರರು ಮುನ್ನುಗ್ಗುತ್ತಾರೆ ಮತು ಲೇನ್ ಫಾಲೋ ಮಾಡೊದೆ ಇಲ್ಲ.
ಅಕಸ್ಮಾತ್ ಆಗಿ ವ್ರಾಂಗ್ ವೇನಲ್ಲಿ ನಿಮ್ಮ ಎದುರು ಆಂಬ್ಯೂಲೆನ್ಸ್ ಬಂದಾಗ ಕೂಡಾ, ನಿಮ್ಮ ವಾಹನವನ್ನು ಎಡಕ್ಕೆ ಸರಿಸಿರಿ.
ಜೊತೆಗೆ ಆಂಬ್ಯೂಲೆನ್ಸ್ ಮುಂದೆ ನಿಮ್ಮ ವಾಹನದಲ್ಲಿ ಪೈಲೆಟ್ (ಮಾರ್ಗಸೂಚಕ) ಆಗಿ ಹೋಗಲೇಬೇಡಿ. ಯಾಕಂದ್ರೆ ನೀವು ಮಾಡುತ್ತಿರುವುದು ಒಳ್ಳೆಯ ಕೆಲಸವಾದರೂ ಸಹ ಅದು ಕಾನೂನು ಬಾಹಿರ.