Just In
- 13 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 13 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 14 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 15 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- News ಕರ್ನಾಟಕದ ಮೇಲೆ ವರುಣನ ಕೃಪೆ: ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಎಷ್ಟು? ಇಲ್ಲಿದೆ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರು ಅಡ್ಡ ಹಾಕಿ ಅಸಭ್ಯವಾಗಿ ವರ್ತಿಸಿದವನ ವಿರುದ್ಧ ನಟ ಕುನಾಲ್ ಖೇಮು ದೂರು
ಬಾಲಿವುಡ್ ನಟ ಕುನಾಲ್ ಖೇಮು ಹಾಗೂ ಅವರ ಪತ್ನಿ ಸೇರಿದಂತೆ ಇನ್ನಿತರರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಕಾರು ಚಾಲಕನೊಬ್ಬನ ಕೆಟ್ಟ ವರ್ತನೆಯ ಬಗ್ಗೆ ನಟ ಕುನಾಲ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಅವರ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ನಟ ಕುನಾಲ್ ಖೇಮು ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಬರೆದುಕೊಂಡಿರುವ ವಿಚಾರ ಹೀಗಿದ್ದು.. ಘಟನೆ ನಡೆದಾಗ ಕುನಾಲ್ ಕೆಮ್ಮು, ಪತ್ನಿ ಸೋಹಾ ಅಲಿ ಖಾನ್ ಮತ್ತು ಮಗಳು ಇನಾಯಾ (ಸಾವಾ) ಇದ್ದರು. ಬೆಳಿಗ್ಗೆ 9 ಗಂಟೆ ಸುಮಾರಿಗೆ ತಮ್ಮ ಕಾರಿನಲ್ಲಿ ಪತ್ನಿ, ಮಗಳು, ಸಂಬಂಧಿಕರ ಮಕ್ಕಳು ಜೊತೆಗೂಡಿ ಹತ್ತಿರದ ಜುಕು ಎಂಬ ಪ್ರದೇಶಕ್ಕೆ ಬ್ರೇಕ್ಫಾಸ್ಟ್ಗೆಂದು ತೆರಳಿದ್ದರು.
ಆ ಸಮಯದಲ್ಲಿ ಪುದುಚೇರಿ ನೋಂದಣಿಯ ಬಿಳಿ ಬಣ್ಣದ ಲ್ಯಾಂಬೋರ್ಗಿನಿ ಗಲ್ಲಾರ್ಡೊ ಕಾರು ಚಾಲಕನೊಬ್ಬ ಕಾರನ್ನು ಅಜಾಗರೂಕತೆಯಿಂದ ಓಡಿಸಿದ್ದಲ್ಲದೆ, ಇದ್ದಕ್ಕಿದ್ದಂತೆ ಕುನಾಲ್ ಅವರ ಕಾರನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿದ್ದಾನೆ. ಬಳಿಕ ಕಾರಿನ ಮುಂದೆ ಬಂದು ಬ್ರೇಕ್ ಹಾಕಿದ್ದಾನೆ. ಆ ವೇಳೆ ಕುನಾಲ್ ಕೂಡ ಸಡನ್ ಬ್ರೇಕ್ ಹಾಕಿ ಆಗಬಹುದಾದ ಅನಾಹುತ ತಪ್ಪಿಸಿರುವುದಾಗಿ ಬರೆದುಕೊಂಡಿದ್ದಾರೆ.
ಈ ಕೃತ್ಯವನ್ನು ರೆಕಾರ್ಡ್ ಮಾಡಲು ಮೊಬೈಲ್ ಅನ್ನು ತೆಗೆದಾಗ, ಅವನು ಕಾರಿಗೆ ಹತ್ತಿ ಪರಾರಿಯಾಗಿದ್ದಾನೆ. ಈ ದುರ್ನಡತೆಯನ್ನು ಪರಿಶೀಲಿಸುವಂತೆ ಮುಂಬೈ ಪೊಲೀಸರನ್ನು ಒತ್ತಾಯಿಸಿ, ಕಾರು ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ನೀಡಿದ್ದಾರೆ. ಪೊಲೀಸರು ದೂರಿನ ಮೇಲೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆಯೇ? ಎಂಬುದು ಇನ್ನು ತಿಳಿದುಬಂದಿಲ್ಲ.
ರಸ್ತೆಗಳಲ್ಲಿ ಅನಗತ್ಯವಾಗಿ ವಾಹನ ಚಾಲಕರ ನಡುವಿನ ಇಂತಹ ವಿವಾದಗಳು ಆಗಾಗ ನಡಯುತ್ತಲೇ ಇರುತ್ತವೆ. ರಸ್ತೆಗಳಲ್ಲಿ ಸಂಚಾರ ದಟ್ಟಣೆ ಇರುವ ಸಂದರ್ಭಗಳಲ್ಲಿ ಶಾಂತ ಮನಸ್ಸಿನಿಂದ ವಾಹನ ಚಾಲನೆ ಮಾಡುವುದು ತುಂಬಾ ಕಷ್ಟ. ವಾಹನ ಚಾಲಕರು ಉದ್ವಿಗ್ನರಾಗಲು ಮತ್ತು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ಇದು ಒಂದು ಕಾರಣವಾಗಿದೆ.
ಇತರೆ ವಾಹನ ಚಾಲಕರೊಂದಿಗೆ ಆಗಬಹುದಾದ ಕೆಲವು ತೊಂದರೆಗಳನ್ನು ತಪ್ಪಿಸಲು ಕೆಲವು ಮಾರ್ಗಗಳನ್ನು ಅನುಸರಿಸಬೇಕು. ಡ್ರೈವಿಂಗ್ ಯಾವಾಗಲೂ ನಿರಾಳವಾಗಿರಬೇಕು. ಸಾಧ್ಯವಾದಷ್ಟು ಶಾಂತ ರೀತಿಯಲ್ಲಿ ಇರಬೇಕು, ಸಂಗೀತ ಮತ್ತು ಎಸಿ ಆನ್ ಮಾಡಿಕೊಂಡರೆ ಸ್ವಲ್ಪ ನೆಮ್ಮದಿಯ ಡ್ರೈವಿಂಗ್ ಮಾಡಬಹುದು.
ವಾಹನವನ್ನು ಓಡಿಸಲು ಕುಳಿತ ತಕ್ಷಣ ಯಾವಾಗಲೂ ನೆಮ್ಮದಿಯ ಮನಸ್ಸಿರಬೇಕು, ರಸ್ತೆಯಲ್ಲಿ ಇತರ ವಾಹನ ಚಾಲಕರಿಗೆ ಉದ್ವಿಗ್ನತೆಯನ್ನು ಪ್ರದರ್ಶಿಸಬಾರದು. ಅಲ್ಲದೆ ಸಂಚಾರ ನಿಯಮಗಳನ್ನು ಸರಿಯಾಗಿ ಅನುಸರಿಸಬೇಕು, ಇದು ಇತರ ವಾಹನ ಚಾಲಕರಿಗೆ ನಿಮ್ಮ ಮೇಲೆ ಕೋಪಗೊಳ್ಳದಿರಲು ಸಹಾಯ ಮಾಡುತ್ತದೆ.
ಯಾವಾಗಲೂ ವೇಗದ ಮಿತಿಯನ್ನು ಅನುಸರಿಸಿ. ಅಗತ್ಯವಿದ್ದಾಗ ಇತರ ವಾಹನ ಚಾಲಕರಿಗೆ ಸಂಕೇತ ನೀಡಿ, ಉದಾಹರಣೆಗೆ ಎಡಕ್ಕೆ ತಿರುಗುವಾಗ ಎಡ ಸೂಚಕವನ್ನು ಆನ್ ಮಾಡಬೇಕು. ಬಹುತೇಕ ಮಂದಿ ಎಡಕ್ಕೆ ತಿರುಗುವಾಗ ಬಲಕ್ಕೆ ಇಂಡಿಕೇಟರ್ ಆನ್ ಮಾಡುತ್ತಾರೆ. ಇದು ದೊಡ್ಡ ಅನಾಹುತಗಳಿಗೆ ಕಾರಣವಾಗಬಹುದು. ಅಲ್ಲದೆ ಹಿಂಬರುವವರ ಕೋಪಕ್ಕೆ ಕಾರಣವಾಗಬಹುದು.
ಅಲ್ಲದೇ ಅನಗತ್ಯ ಸಮಸ್ಯೆಗಳು ಉದ್ಭವಿಸಬಹುದು. ಅದೇ ರೀತಿ, ನಿಮ್ಮ ವಾಹನದ ಹಿಂಭಾಗದ ನೋಟ ಕನ್ನಡಿಗಳನ್ನು ಸರಿಯಾಗಿ ಬಳಸಬೇಕು. ಕೆಲವೊಮ್ಮೆ ನೀವು ಸರಿಯಾಗಿದ್ದರೂ, ತಾಳ್ಮೆಯಿಂದಿದ್ದರೂ ಇತರ ವಾಹನ ಚಾಲಕರು ಜಗಳ ತೆಗೆಯಬಹುದು. ಇಂತಹವರನ್ನು ನಿರ್ಲಕ್ಷಿಸಿ ಅಲ್ಲಿಂದ ಹೊರಡುವುದು ಉತ್ತಮ.
ಇದು ನಿಮ್ಮ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ. ಇಲ್ಲದಿದ್ದರೆ ಅನಗತ್ಯ ಸಮಯ ವ್ಯರ್ಥವಾಗುತ್ತದೆ. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಅನಗತ್ಯ ಜಗಳಗಳಿಂದ ಉದ್ವಿಗ್ನವಾದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಉದ್ವೇಗವನ್ನು ಕಡಿಮೆ ಮಾಡಲು ಮತ್ತು ತಕ್ಷಣವೇ ಸಮಾಧಾನಗೊಳ್ಳಲು ಕೆಲ ಮಾರ್ಗಗಳನ್ನು ಕಂಡುಕೊಳ್ಳುವುದು ಉತ್ತಮ.