ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
ವಿಶ್ವದ ಅತಿ ಹೆಚ್ಚು ಅಪಘಾತಗಳು ನಡೆಯುವ ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಅಪಘಾತ ನಿಯಂತ್ರಣಕ್ಕೆ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಜಾರಿಗೆ ತಂದರೂ ಪ್ರಾಣ ನಷ್ಟ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆಯಾದರೂ ಅಪಘಾತ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ.

ಕೇಂದ್ರ ಸಾರಿಗೆ ಸಚಿವಾಲಯದ ವರದಿಯ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 4.50 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ 1.50 ಲಕ್ಷ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇತರ ಯಾವುದೇ ದೇಶಕ್ಕೆ ಹೋಲಿಸಿದರೆ ಈ ಸಂಖ್ಯೆ ವಿಶ್ವದಲ್ಲೇ ಅತ್ಯಧಿಕವಾಗಿದೆ. ಭಾರತದಲ್ಲಿ ಅಂಗವೈಕಲ್ಯಕ್ಕೆ ರಸ್ತೆ ಅಪಘಾತಗಳು ಮುಖ್ಯ ಕಾರಣ ಎಂದು ಉಲ್ಲೇಖಿಸಲಾಗಿದೆ.

ಈ ನಿಟ್ಟಿನಲ್ಲಿ ಅಪಘಾತಗಳಾದರೂ ಜೀವ ಉಳಿಸುವ ಕಠಿಣ ಕ್ರಮಗಳನ್ನು ಜಾರಿಗೆ ತರುವ ಹಿನ್ನೆಲೆಯಲ್ಲಿ ಈ ವರ್ಷದ ಆರಂಭದಲ್ಲಿ ಎಂಟು ಜನರ ಆಸನ ಸಾಮರ್ಥ್ಯದ ಕಾರುಗಳಿಗೆ ಅಕ್ಟೋಬರ್ 2022 ರಿಂದ ಆರು ಏರ್ಬ್ಯಾಗ್ಗಳನ್ನು ಕಡ್ಡಾಯಗೊಳಿಸಲು ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆ (MoRTH) ಕರಡು ಅಧಿಸೂಚನೆಯನ್ನು ಹೊರಡಿಸಿತ್ತು.

ಆದರೆ ಇದರಿಂದ ಕಾರುಕಂಪನಿಗಳಿಗೆ ನಷ್ಟವಾಗಲಿದ್ದು, ಕೆಲವು ಕಾರು ತಯಾರಕರು ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಏರ್ಬ್ಯಾಗ್ಗಳ ಹೆಚ್ಚುವರಿ ಅಳವಡಿಕೆಗೆ ಹೆಚ್ಚುವರಿ ಖರ್ಚಾಗಲಿದ್ದು, ಬೆಲೆ ಕೂಡ ಏರಿಕೆಯಾಗಲಿದೆ. ಇದರಿಂದ ಗ್ರಾಹಕರು ವಾಹನಗಳನ್ನು ಕೊಳ್ಳಲು ಹಿಂಜರಿಯುತ್ತಾರೆ. ಹೀಗೆ ಮುಂದಿವರಿದರೆ ವಾಹನ ತಹಯಾರಿ ಸ್ಥಗಿತಗೊಳ್ಳುವುದಾಗಿ ಕಾರು ಕಂಪನಿಗಳು ಸರ್ಕಾರಕ್ಕೆ ವಿವರಿಸಿದ್ದವು.

ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು, ಆರು ಏರ್ಬ್ಯಾಗ್ಗಳನ್ನು ಕಡ್ಡಾಯವಾಗಿ ಒದಗಿಸುವ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ, ಈಗ ಕೆಲವು ಕಂಪನಿಗಳು ಭಾರತದಲ್ಲಿ ಅಂತರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರದ ಕಾರುಗಳನ್ನು ತಯಾರಿಸುತ್ತಿವೆ. ಆದರೆ ವಿದೇಶಿ ಮಾರುಕಟ್ಟೆಗೆ ಅಂತರಾಷ್ಟ್ರೀಯ ಗುಣಮಟ್ಟವನ್ನು ಅನುಸರಿಸುವ ಅದೇ ಮಾದರಿಯ ಕಾರುಗಳನ್ನು ತಯಾರಿಸುತ್ತಿದ್ದಾರೆ.

ಇದನ್ನು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ನಮ್ಮ ನಿರ್ಧಾರದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ಭಾರತವು ಗರಿಷ್ಠ ರಸ್ತೆ ಅಪಘಾತಗಳು ಮತ್ತು ಸಾವುಗಳನ್ನು ಪ್ರತಿ ವರ್ಷ ವರದಿ ಮಾಡುತ್ತಿದೆ, ಇದನ್ನು ಏಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ? ಎಂದು ಪ್ರಶ್ನಿಸಿದರು.

ಗ್ಲೋಬಲ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ನಲ್ಲಿ ಕೇವಲ ಮೂರು ಸ್ಟಾರ್ಗಳನ್ನು ಪಡೆದ ಕಿಯಾ ಸೆಲ್ಟೋಸ್ ಅದೇ ಮಾದರಿಯು ಭಾರತದ ಹೊರಗೆ ತಯಾರಿಸಲ್ಪಟ್ಟಿದ್ದು, ಅದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಮಾರುಕಟ್ಟೆಯಲ್ಲಿ ಪರೀಕ್ಷಿಸಲ್ಪಟ್ಟಿದೆ. ಆ ದೇಶಗಳಲ್ಲಿ ಸಂಪೂರ್ಣ ಫೈವ್ ಸ್ಟಾರ್ ರೇಟಿಂಗ್ನೊಂದಿಗೆ ಆಸ್ಟ್ರೇಲಿಯನ್ NCAP (ANCAP) ಕ್ರ್ಯಾಶ್ ಪರೀಕ್ಷೆಯನ್ನು ಪಡೆದುಕೊಂಡಿದೆ.

ಸುರಕ್ಷತಾ ವೈಶಿಷ್ಟ್ಯಗಳು ಮಾರುಕಟ್ಟೆಯಿಂದ ಮಾರುಕಟ್ಟೆಗೆ ಭಿನ್ನವಾಗಿರುತ್ತವೆ, ಆದರೆ ಅಂತರರಾಷ್ಟ್ರೀಯ ಮಾದರಿಯು ಸ್ಥಿರವಾದ ದೇಹ ರಚನೆಯನ್ನು ಹೊಂದಿದ್ದಾಗ ಭಾರತ-ಸ್ಪೆಕ್ ಮಾದರಿಯ ರಚನೆಯು ಅಸ್ಥಿರವಾಗಿತ್ತು. ಇತ್ತೀಚೆಗೆ, MoRTH ಎಲ್ಲಾ ಮಾದರಿಗಳಿಗೆ ಆರು ಏರ್ಬ್ಯಾಗ್ಗಳನ್ನು ಪ್ರಮಾಣಿತಗೊಳಿಸಲು ಡ್ರಾಫ್ಟ್ ಅನ್ನು ಪರಿಚಯಿಸಿತು.

ಆದರೆ ಆರು ಏರ್ಬ್ಯಾಗ್ಗಳು ಮತ್ತು ಇಎಸ್ಪಿ ಸೇರಿದಂತೆ ಸುದೀರ್ಘ ಗುಣಮಟ್ಟದ ಸುರಕ್ಷತಾ ವೈಶಿಷ್ಟ್ಯಗಳ ಪಟ್ಟಿಯನ್ನು ಪಡೆಯುವ ಕ್ಯಾರೆನ್ಸ್, ಅಸ್ಥಿರವಾದ ದೇಹದಿಂದಾಗಿ ಮೂರು ಸ್ಟಾರ್ಗಳ ಸರಾಸರಿ ಸ್ಕೋರ್ ಅನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.

ಆದ್ದರಿಂದ ಇದು ಕೇವಲ ಸುರಕ್ಷತಾ ವೈಶಿಷ್ಟ್ಯಗಳು ಮುಖ್ಯವಲ್ಲ, ಆದರೆ ಒಟ್ಟಾರೆ ವಾಹನದ ರಚನಾತ್ಮಕ ಸಮಗ್ರತೆಯು ತುಂಬಾ ಮುಖ್ಯವಾಗಿದೆ ಎಂದು ಸಾಬೀತುಪಡಿಸುತ್ತದೆ. ಕೆಲವು ತಯಾರಕರು ಆರು ಏರ್ಬ್ಯಾಗ್ಗಳ ನಿಯಮವನ್ನು ವಿರೋಧಿಸುತ್ತಿದ್ದಾರೆ. ಅರ್ಥಮಾಡಿಕೊಳ್ಳಬಹುದಾದಂತೆ, ಸಣ್ಣ ಕಾರುಗಳಲ್ಲಿ ಅವುಗಳನ್ನು ಅಳವಡಿಸಲು ಸಾಕಷ್ಟು ಮರು-ಇಂಜಿನಿಯರಿಂಗ್ ಅಗತ್ಯವಿರುತ್ತದೆ.

ಇದು ವೆಚ್ಚವನ್ನು ಹೆಚ್ಚಿಸುತ್ತದೆ. ಆದರೆ ಭಾರತವು ಜಗತ್ತಿನಾದ್ಯಂತ ಅತಿದೊಡ್ಡ ಕಾರು ಮಾರುಕಟ್ಟೆಗಳಲ್ಲಿ ಒಂದಾಗಿರುವುದರಿಂದ, ಸುರಕ್ಷತೆಯು ಬಹಳಷ್ಟು ಮುಖ್ಯವಾಗಿದೆ ಮತ್ತು ವಿದೇಶಗಳಲ್ಲಿ ಮಾರಾಟವಾಗುವ ಮಾದರಿಗಳಲ್ಲಿನ ಅಸಮಾನತೆಯ ಬಗ್ಗೆ ಗಡ್ಕರಿ ಅವರ ಇತ್ತೀಚಿನ ಪ್ರತಿಕ್ರಿಯೆಗಳು ಸಾಕಷ್ಟು ಅರ್ಥವನ್ನು ನೀಡುತ್ತವೆ.

ಕಾರುಗಳನ್ನು ಸ್ಥಗಿತಗೊಳಿಸಲು ಮಾರುತಿ ಸುಜುಕಿ ಚಿಂತನೆ
ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ BS6 ಹೊರಸೂಸುವಿಕೆ ಮಾನದಂಡವನ್ನು ಅಳವಡಿಸಲಾಗಿದೆ, ಇದು ಸಾಲದೆಂಬಂತೆ ಕರೋನಾದಿಂದಾಗಿ ಕಚ್ಛಾ ವಸ್ತುಗಳು ದುಬಾರಿಯಾಗಿವೆ. ಇದರಿಂದಾಗಿ ಮಾರುತಿ ಸುಜುಕಿ ಈಗಾಗಲೇ 2021 ರಲ್ಲಿ 4 ಬಾರಿ ಮತ್ತು 2022 ರಲ್ಲಿ 3 ಬಾರಿ ಕಾರಿನ ಬೆಲೆಯನ್ನು ಹೆಚ್ಚಿಸಿದೆ.

ಪರಿಣಾಮ ಕಂಪನಿಯ ಎಂಟ್ರಿ ಲೆವೆಲ್ ಮಾಡೆಲ್ಗಳು ತುಂಬಾ ದುಬಾರಿಯಾಗಿದ್ದು, ಇದೀಗ 6 ಏರ್ಬ್ಯಾಗ್ ಬೇಕು ಎಂಬ ನಿಯಮವನ್ನು ಸರ್ಕಾರ ತರಲು ಹೊರಟಿರುವುದು ಕಾರುಗಳ ಬೆಲೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಪನಿಯ ಅಧ್ಯಕ್ಷ ಭಾರ್ಗವ ಅವರು, ಇದು ಕೇವಲ ಕಾರುಗಳ ಬೆಲೆಯನ್ನು ಹೆಚ್ಚಿಸುತ್ತದೆಯೇ ಹೊರತು ಅಪಘಾತಗಳನ್ನು ಕಡಿಮೆ ಮಾಡುವುದಿಲ್ಲ ಎಂದಿದ್ದಾರೆ.

ಕಾಂಪ್ಯಾಕ್ಟ್ ವಾಹನಗಳನ್ನು ಮಾರಾಟ ಮಾಡುವುದರಿಂದ ಕಂಪನಿಯು ಹೆಚ್ಚು ಲಾಭ ಗಳಿಸುವುದಿಲ್ಲ. ಕಂಪನಿಯು ಪ್ರಸ್ತುತ ಏಕಪಕ್ಷೀಯವಾಗಿ ಸಣ್ಣ ಕಾರುಗಳನ್ನು ನಿಯಂತ್ರಿಸುತ್ತದೆ. ಆಲ್ಟೊ ಮತ್ತು ಎಸ್-ಪ್ರೆಸ್ಸೊದಂತಹ ಮಾದರಿಗಳೊಂದಿಗೆ ಸ್ಪರ್ಧಿಸಲು ಇತರ ಯಾವುದೇ ಮಾದರಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಹಾಗಾಗಿ ಕಂಪನಿಯು ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು.

ಈ ನಿಯಮದಿಂದಾಗಿ ಕೈಗೆಟಕುವ ದರದ ಕಾರುಗಳ ಬೆಲೆ ಗಣನೀಯವಾಗಿ ಏರಿಕೆಯಾಗಲಿದ್ದು, ಇದು ಕಾರುಗಳ ಮಾರಾಟದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಕಾರು ಕಂಪನಿಗಳು ಆತಂಕ ವ್ಯಕ್ತಪಡಿಸಿದ್ದವು. ಈಗಾಗಲೇ ಭಾರತದಲ್ಲಿ ಆಟೋಮೊಬೈಲ್ ಉದ್ಯಮವು ಕಳೆದ ಮೂರು ವರ್ಷಗಳಿಂದ ನಷ್ಟವನ್ನು ಎದುರಿಸಿವೆ ಎಂದು ಹೇಳಿಕೊಂಡಿವೆ.


Click it and Unblock the Notifications