Just In
- 6 hrs ago ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- 7 hrs ago Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
- 8 hrs ago Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 9 hrs ago 150KM ರೇಂಜ್, ಸುರಕ್ಷತೆಯ ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ: ಹೆಚ್ಚು ಲಾಭ
Don't Miss!
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಂಧನ ಖರ್ಚಿಲ್ಲದ ಸೋಲಾರ್ ಕಾರ್ ಅಭಿವೃದ್ಧಿಪಡಿಸಿದ ಶಿಕ್ಷಕ: ಶ್ಲಾಘಿಸಿದ ಆನಂದ್ ಮಹೀಂದ್ರಾ
ಕಾಶ್ಮೀರದ ಗಣಿತಶಾಸ್ತ್ರ ಶಿಕ್ಷಕರಾದ ಬಿಲಾಲ್ ಅಹ್ಮದ್ ಎಂಬುವರು ಇತ್ತೀಚೆಗೆ ಮಾರುತಿ 800 ಕಾರನ್ನು ಸೌರಶಕ್ತಿ ಚಾಲಿತ ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತಿಸಿ ಜನಪ್ರಿಯವಾಗಿದ್ದರು. ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ಪರಿಸರ ಕಾಳಜಿಯೊಂದಿಗೆ ನಿರ್ಮಿಸಿರುವ ಈ ಕಾರು ಹಲವರ ಗಮನ ಸೆಳೆದಿದ್ದು, ಇದೀಗ ಆಟೋ ಉದ್ಯಮದ ದಿಗ್ಗಜ ಆನಂದ್ ಮಹೀಂದ್ರಾ ಶಿಕ್ಷಕನ ಆವಿಷ್ಕಾರವನ್ನು ಶ್ಲಾಘಿಸಿದ್ದಾರೆ.
ಅಹ್ಮದ್ ಬಿಲಾಲ್ ಅವರ ಹೊಸ ಆವಿಷ್ಕಾರದ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿವೆ. ಜನರು ಅವರ ಸೌರ ಚಾಲಿತ ಎಲೆಕ್ಟ್ರಿಕ್ ಕಾರನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕೂಡ ಅಹ್ಮದ್ ಬಿಲಾಲ್ ಅವರ ಈ ಸಾಧನೆಯ ಬಗ್ಗೆ ಶ್ಲಾಘಿಸಿದ್ದರು.
Bilal’s passion is commendable. I applaud his single-handedly developing this prototype. Clearly the design needs to evolve into a production-friendly version. Perhaps our team at Mahindra Research Valley can work alongside him to develop it further. Velu_Mahindra ? https://t.co/p6WRgQmcXo
— anand mahindra (anandmahindra) July 20, 2022
ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಮುಕ್ತ ಅಭಿವ್ಯಕ್ತಿಗೆ ಹೆಸರುವಾಸಿಯಾದ ಮಹೀಂದ್ರಾದ ಸಿಇಒ ಆನಂದ್ ಮಹೀಂದ್ರಾ, ಬಿಲಾಲ್ ಅಹ್ಮದ್ ಅವರ ಆವಿಷ್ಕಾರವನ್ನು ಪ್ರಶಂಸಿದ್ದಾರೆ. ಶಿಕ್ಷಕ ಬಿಲಾಲ್ ಅಹ್ಮದ್ ಅವರ ಉತ್ಸಾಹವು ಶ್ಲಾಘನೀಯವಾಗಿದೆ, ಏಕಾಂಗಿಯಾಗಿ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಅವರು ತಮ್ಮ ಮಹೀಂದ್ರಾ ರಿಸರ್ಚ್ ವ್ಯಾಲಿ ಸಹಾಯದಿಂದ ತಮ್ಮ ಯೋಜನೆಯನ್ನು ಅಭಿವೃದ್ಧಿಪಡಿಸಲು ಆ ವ್ಯಕ್ತಿಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ವಿನ್ಯಾಸವು ಉತ್ಪಾದನಾ ಸ್ನೇಹಿ ಆವೃತ್ತಿಯಾಗಿ ವಿಕಸನಗೊಳ್ಳುವ ಅಗತ್ಯವಿದೆ. ಬಹುಶಃ ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿರುವ ನಮ್ಮ ತಂಡವು ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಅವರೊಂದಿಗೆ ಕೆಲಸ ಮಾಡಬಹುದು ಎಂದು ಹೇಳಿದ್ದಾರೆ.
ಬಿಲಾಲ್ ಅಹ್ಮದ್ ಅವರು 13 ವರ್ಷಗಳಿಗೂ ಹೆಚ್ಚು ಕಾಲದಿಂದ ಈ ಕಾರಿಗಾಗಿ ಶ್ರಮಿಸಿದ್ದು, ಇದೀಗ ಮಹತ್ವದ ಮೈಲಿಗಲ್ಲು ಮುಟ್ಟಿದೆ. ಅವರು ತಮ್ಮ ಸೌರಶಕ್ತಿ ಚಾಲಿತ ಎಲೆಕ್ಟ್ರಿಕ್ ವಾಹನವನ್ನು ಮಾರುತಿ ಸುಜುಕಿ 800 ನಿಂದ ನಿರ್ಮಿಸಿದ್ದಾರೆ. ಈ ಕಾರಿಗೆ ಸೌರ ಶಕ್ತಿಯನ್ನು ಸ್ಟೋರ್ ಮಾಡಿಕೊಳ್ಳಲು ಸಂಪೂರ್ಣವಾಗಿ ಸೌರ ಫಲಕಗಳನ್ನು ಅಳವಡಿಸಲಾಗಿದೆ.
ಇನ್ನು ಈ ಸೋಲಾರ್ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಕಾರು ಫೆರಾರಿಯಂತೆ ಗುಲ್ವಿಂಗ್ ಬಾಗಿಲುಗಳನ್ನು ಹೊಂದಿದೆ. ಈ ಗುಲ್ವಿಂಗ್ ಬಾಗಿಲುಗಳನ್ನು ತಯಾರಿಸುವುದು ಅವರಿಗೆ ಸವಾಲಾಗಿತ್ತು, ಆದರೂ ಪಟ್ಟುಬಿಡದೇ ತಮ್ಮ ಕನಸಿನ ಕಾರನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಎಲ್ಲೆಡೆ ಈ ಕಾರಿಗೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ ಎಂದು ಶಿಕ್ಷಕ ಬಿಲಾಲ್ ಅಹ್ಮದ್ ಹೇಳಿದ್ದಾರೆ.
ಶಿಕ್ಷಕರಾದ ಬಿಲಾಲ್ ಅಹ್ಮದ್ ಅವರ ಬಗ್ಗೆ ಹೇಳುವುದಾದರೆ, ಇವರಿಗೆ ಐಷಾರಾಮಿ ಕಾರು ತಯಾರಿಸುವ ಆಸೆ. ಅದೇ ಸಮಯದಲ್ಲಿ ಅದು ಸಾಮಾನ್ಯ ಜನರ ಕೈಗೆಟುಕುವಂತಿರಬೇಕು ಎಂಬುದು ಸಹ ಮುಖ್ಯ ಧ್ಯೇಯವಾಗಿತ್ತು. ಇದಕ್ಕಾಗಿ 50ರ ದಶಕದಿಂದ ತಯಾರಿಸಿದ ಕಾರುಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು, ಬಳಿಕ ಇದೇ ಅಧ್ಯಯನವು ಸೋಲಾರ್ ಕಾರನ್ನು ತಯಾರಿಸಲು ಪ್ರೇರೇಪಿಸಿತು.
ಇದೇ ವೇಳೆ ಆಟೋಮೊಬೈಲ್ ಕಂಪನಿ DMC ಮಾಲೀಕತ್ವದ ಯುಎಸ್ನ ಡೆಟ್ರಾಯಿಟ್ನ ಎಂಜಿನಿಯರ್ ಮತ್ತು ನವೋದ್ಯಮಿಗಳ ಕೆಲಸದಿಂದ ಅವರು ಸ್ಫೂರ್ತಿ ಪಡೆದರು. ಮರ್ಸಿಡಿಸ್, ಫೆರಾರಿ ಮತ್ತು ಬಿಎಂಡಬ್ಲ್ಯು ಕಾರುಗಳು ಸಾಮಾನ್ಯ ಜನರ ಕನಸು, ಶ್ರೀಮಂತರು ಮಾತ್ರ ಅಂತಹ ಕಾರುಗಳನ್ನು ಖರೀದಿಸಬಹುದಾಗಿದೆ. ಇದೇ ಐಷಾರಾಮಿಯನ್ನು ಕಡಿಮೆ ಬೆಲೆಗೆ ನೀಡುವ ಮೂಲಕ ಜನರಿಗೆ ದುಬಾರಿ ಕಾರುಗಳ ಭಾವನೆಯನ್ನು ನೀಡುವುದು ಉತ್ತಮ ಎಂದು ಅವರು ನಿರ್ಣಯಿಸಿದರು.
2009 ರಲ್ಲಿ ಅವರು ಸೋಲಾರ್-ರನ್ ಐಷಾರಾಮಿ ಕಾರನ್ನು ತಯಾರಿಸುವ ಆಲೋಚನೆಯನ್ನು ಮಾಡಿದರು, ನಂತರ ಅವರು ಈ ಯೋಜನೆಯಲ್ಲಿ ತೊಡಗಿಸಿಕೊಂಡು ಯೋಜನೆಯನ್ನು ಈ ವರ್ಷ ಪೂರ್ಣಗೊಳಿಸಿದರು. ಈ ಸೌರಶಕ್ತಿ ಚಾಲಿತ ಕಾರಿಗೆ ಇತರ ಐಷಾರಾಮಿ ಕಾರುಗಳಂತೆಯೇ ವೈಶಿಷ್ಟ್ಯತೆಗಳನ್ನು ನೀಡಲಾಗಿದೆ.
ಬಿಲಾಲ್ ಅವರು ಮೊದಲಿಗೆ ಅಂಗವಿಕಲರಿಗಾಗಿ ಕಾರನ್ನು ನಿರ್ಮಿಸಲು ಬಯಸಿದ್ದರು. ಆದರೆ ಆರ್ಥಿಕ ಸಮಸ್ಯೆಗಳಿಂದಾಗಿ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಈ ಹಿಂದೆ ANI ಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ ಶ್ರಮಿಸುತ್ತಿರುವ ಸರ್ಕಾರ
ದೇಶದೆಲ್ಲಡೆ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ಆಯಾ ರಾಜ್ಯ ಸರ್ಕಾರಗಳು ಸಾಕಷ್ಟು ಶ್ರಮಿಸುತ್ತಿವೆ. ಮುಂದಿನ ದಿನಗಳಲ್ಲಿ ಕಾರ್ಬನ್ ಮುಕ್ತ ದೇಶವನ್ನಾಗಿಸಲು ಕೇಂದ್ರ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಸಬ್ಸಿಡಿ ನೀಡಿ ಪ್ರೋತ್ಸಾಹಿಸುತ್ತಿದೆ. ಆದರೂ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯ ವೇಗವು ನಿಧಾನವಾಗುತ್ತಿದೆ.
ಇದಕ್ಕೆ ಹಲವು ಕಾರಣಗಳಿವೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯವು ಇನ್ನೂ ಅಭಿವೃದ್ಧಿಯ ಹಂತದಲ್ಲಿವೆ. ಅಲ್ಲದೇ ಇವಿ ವಾಹನಗಳು ಸೀಮಿತ ವ್ಯಾಪ್ತಿಯನ್ನು ಹೊಂದಿರುವುದರ ಜೊತೆಗೆ ಅವು ಚಾರ್ಜ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಇವೆಲ್ಲದರ ಜೊತೆಗೆ ಆಗಾಗ್ಗೆ ವರದಿಯಾಗುತ್ತಿರುವ ಇವಿ ವಾಹನಗಳ ಬೆಂಕಿ ಅವಘಗಳು ಸಹ ಪ್ರಮುಖ ಕಾರಣವಾಗಿವೆ.
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಎಲೆಕ್ಟ್ರಿಕ್ ವಾಹನಗಳು ಮಾತ್ರವಲ್ಲದೇ ಜನರಿಗೆ ಕಡಿಮೆ ವೆಚ್ಚ, ಹೆಚ್ಚು ಪ್ರಮಾಣಿತ ಹಾಗೂ ಇಂಧನವಿಲ್ಲದೇ ಪ್ರಯಾಣಿಸುವ ವಾಹನಗಳನ್ನು ಕೊಡುಗೆಯಾಗಿ ನೀಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಹೊರಹೊಮ್ಮಿರುವ ಶಿಕ್ಷಕ ಬಿಲಾಲ್ ಅಹ್ಮದ್ ಅವರ ಸೌರ ಶಕ್ತಿ ಚಾಲಿತ ಕಾರು ದೇಶದ ಹೆಮ್ಮೆಯಾಗಿದೆ. ಮುಂದಿನ ದಿನಗಳಲ್ಲಿ ಇವರ ಆವಿಷ್ಕಾರ ವಿಶ್ವ ದೇಶಗಳಿಗೆ ಮಾದರಿಯಾಗಬೇಕು ಎಂಬುದು ನಮ್ಮ ಆಶಯ.