ಮಹಿಳೆಯ ಜೀವ ಉಳಿಸಲು ಆಂಬ್ಯುಲೆನ್ಸ್'ಗೆ ನೆರವಾದ ಕನ್ನಡಿಗರು

ಆಂಬ್ಯುಲೆನ್ಸ್‌ಗಳು ಮಾನವ ಅಂಗಗಳನ್ನು ಹಾಗೂ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಸಂಚಾರವನ್ನು ನಿಯಂತ್ರಿಸಿದ ಹಲವಾರು ಘಟನೆಗಳು ಈ ಹಿಂದೆ ನಡೆದಿವೆ. ಈಗ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ.

ಮಹಿಳೆಯ ಜೀವ ಉಳಿಸಲು ಆಂಬ್ಯುಲೆನ್ಸ್'ಗೆ ನೆರವಾದ ಕನ್ನಡಿಗರು

ತುರ್ತು ಶಸ್ತ್ರಚಿಕಿತ್ಸೆಗಾಗಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ನಮ್ಮ ಕನ್ನಡಿಗರು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ. ಈ ಆಂಬ್ಯುಲೆನ್ಸ್ ಕೇವಲ 4 ಗಂಟೆಗಳಲ್ಲಿ 370 ಕಿ.ಮೀ ದೂರ ಚಲಿಸಿದೆ. ಸುಹಾನಾ ಎಂಬ 22 ವರ್ಷದ ಮಹಿಳೆಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಅವರನ್ನು ಆಂಬ್ಯುಲೆನ್ಸ್ಮೂಲಕ ಪುತ್ತೂರಿನ ಮಹಾವೀರ್ ವೈದ್ಯಕೀಯ ಕೇಂದ್ರದಿಂದ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ವೈದೇಹಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮಹಿಳೆಯ ಜೀವ ಉಳಿಸಲು ಆಂಬ್ಯುಲೆನ್ಸ್'ಗೆ ನೆರವಾದ ಕನ್ನಡಿಗರು

ಆಂಬ್ಯುಲೆನ್ಸ್ ಚಾಲಕ ಹನೀಫ್ ಕೇವಲ 4 ಗಂಟೆ 5 ನಿಮಿಷಗಳಲ್ಲಿ ಇಷ್ಟು ದೂರ ಚಲಿಸಿದ್ದಾರೆ. ಈ ತುರ್ತು ಪರಿಸ್ಥಿತಿಯ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಲಾಗಿತ್ತು. ಈ ಕಾರಣಕ್ಕೆ ಅವರು ಆಂಬ್ಯುಲೆನ್ಸ್ ವೇಗವಾಗಿ ಸಾಗಲು ಪೊಲೀಸರೊಂದಿಗೆ ಕೈಜೋಡಿಸಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮಹಿಳೆಯ ಜೀವ ಉಳಿಸಲು ಆಂಬ್ಯುಲೆನ್ಸ್'ಗೆ ನೆರವಾದ ಕನ್ನಡಿಗರು

ಆಯಾ ಭಾಗಗಳ ಸ್ವಯಂಸೇವಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಸಹ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಆಂಬ್ಯುಲೆನ್ಸ್ ನಿಖರವಾಗಿ ಎಲ್ಲಿದೆ ಎಂಬುದನ್ನು ತಿಳಿದು ಸಂಚಾರವನ್ನು ನಿಯಂತ್ರಿಸಿದ್ದಾರೆ. ಇದಕ್ಕಾಗಿ ವಾಟ್ಸಾಪ್ ಬಳಸಿದ್ದಾರೆ. ಆಂಬ್ಯುಲೆನ್ಸ್ ಬರುವ ವೇಳೆ ಸಂಬಂಧಪಟ್ಟ ಪ್ರದೇಶದಲ್ಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಮಹಿಳೆಯ ಜೀವ ಉಳಿಸಲು ಆಂಬ್ಯುಲೆನ್ಸ್'ಗೆ ನೆರವಾದ ಕನ್ನಡಿಗರು

ಆಂಬ್ಯುಲೆನ್ಸ್ ಜೊತೆಗೆ ಕೆಲವು ಕಾರುಗಳು ಸಹ ಸಾಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಆ ಕಾರುಗಳು ಸಹ ವೇಗವಾಗಿ ಚಲಿಸಿವೆ. ಆ ಕಾರುಗಳು ರೋಗಿಯ ಸಂಬಂಧಿಕರಿಗೆ ಸೇರಿದ ಕಾರುಗಳೇ ಅಥವಾ ಸಾರ್ವಜನಿಕರ ಕಾರುಗಳೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆ ಕಾರುಗಳು ಅಪಾಯಕಾರಿಯಾಗಿ ಚಲಿಸಿವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಹಿಳೆಯ ಜೀವ ಉಳಿಸಲು ಆಂಬ್ಯುಲೆನ್ಸ್'ಗೆ ನೆರವಾದ ಕನ್ನಡಿಗರು

ಆ ಕಾರುಗಳು ಅತಿ ವೇಗದಲ್ಲಿ ಚಲಿಸಿವೆ. ಆದರೆ ಅದೃಷ್ಟವಶಾತ್ ಯಾವುದೇ ಅಪಘಾತಗಳಾಗಿಲ್ಲ. ಈ ಬಗ್ಗೆ ಮಾತನಾಡಿರುವ ಆಂಬ್ಯುಲೆನ್ಸ್ ಚಾಲಕ ಹನೀಫ್ ಎಲ್ಲರ ಜೀವವು ಮುಖ್ಯ ಎಂದು ಹೇಳಿದ್ದಾರೆ.

ಮಹಿಳೆಯ ಜೀವ ಉಳಿಸಲು ಆಂಬ್ಯುಲೆನ್ಸ್'ಗೆ ನೆರವಾದ ಕನ್ನಡಿಗರು

ವೇಗವಾಗಿ ಆಸ್ಪತ್ರೆಗೆ ಹೋಗುವ ಮೂಲಕ ರೋಗಿಯ ಜೀವ ಉಳಿಸುವುದೇ ತಮ್ಮ ಉದ್ದೇಶವೆಂದು ಅವರು ಹೇಳಿದರು. ಇದರ ಜೊತೆಗೆ ಆಂಬ್ಯುಲೆನ್ಸ್ ತ್ವರಿತವಾಗಿ ಸಾಗಲು ಅವಕಾಶ ಮಾಡಿಕೊಟ್ಟ ಸಾರ್ವಜನಿಕರ ಕಾರ್ಯವನ್ನು ಪೊಲೀಸರು ಶ್ಲಾಘಿಸಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಭಾರತದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಜನರು ಈ ರೀತಿ ಆಂಬ್ಯುಲೆನ್ಸ್‌ಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ. ಆ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಗಮನ ಸೆಳೆದಿವೆ.

ಮಹಿಳೆಯ ಜೀವ ಉಳಿಸಲು ಆಂಬ್ಯುಲೆನ್ಸ್'ಗೆ ನೆರವಾದ ಕನ್ನಡಿಗರು

ಆದರೂ ಕೆಲ ವಾಹನ ಸವಾರರು ಆಂಬ್ಯುಲೆನ್ಸ್‌ಗಳಿಗೆ ದಾರಿ ಮಾಡಿಕೊಡುವುದಿಲ್ಲ. 2019ರಲ್ಲಿ ತಿದ್ದುಪಡಿ ಮಾಡಲಾದ ಮೋಟಾರು ವಾಹನ ಕಾಯ್ದೆಯನ್ವಯ ತುರ್ತು ಸೇವೆ ನೀಡುವ ವಾಹನಗಳಾದ ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳಿಗೆ ಅಡ್ಡಿ ಪಡಿಸುವ ವಾಹನ ಸವಾರರಿಗೆ ದಂಡ ವಿಧಿಸುವುದರ ಜೊತೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

Article Published On: Tuesday, December 8, 2020, 9:57 [IST]
English summary
Ambulance driver covers 370 kms in just four hours to save woman. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+