Just In
- 36 min ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- 2 hrs ago ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- 2 hrs ago Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- 3 hrs ago ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
Don't Miss!
- Technology Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- News Lok Sabha Election: ಕರ್ನಾಟಕದ ಈ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ನಿರ್ಣಾಯಕ
- Sports ರೋಹಿತ್ ಶರ್ಮಾ ಬಳಿಕ ಭಾರತ ತಂಡದ ನಾಯಕನಾರು?; ಅಚ್ಚರಿ ಹೆಸರು ತಿಳಿಸಿದ ಹರ್ಭಜನ್ ಸಿಂಗ್!
- Lifestyle ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Movies Sathya : ತಾಜ್ ಮಹಲ್ ಎದುರು ನಿಂತ ಸತ್ಯಾ, ಪತಿ ಜೊತೆ ಗೌತಮಿ ಪ್ರವಾಸ...!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಸ್ತೆ ಮೇಲೆ ಬಾಟಲ್ ಎಸೆದ ಕಾರು ಪ್ರಯಾಣಿಕರಿಗೆ ಪಾಠ ಕಲಿಸಿದ ಬೈಕ್ ಸವಾರರು
ಭಾರತದಲ್ಲಿ ತನ್ನ ಅಟ್ಟಹಾಸವನ್ನು ತೋರಿದ್ದ ಕರೋನಾ ವೈರಸ್ ಎರಡನೇ ಅಲೆ ಬಹುತೇಕ ಎಲ್ಲ ರಾಜ್ಯಗಳಲ್ಲಿ ಕಡಿಮೆಯಾಗಿದೆ. ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಜಾರಿಗೊಳಿಸಿದ್ದ ಲಾಕ್ಡೌನ್ ಅನ್ನು ಸಡಿಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜನರು ಮತ್ತೆ ಓಡಾಟವನ್ನು ಆರಂಭಿಸಿದ್ದಾರೆ. ಒಂದು ತಿಂಗಳಿಗಿಂತ ಹೆಚ್ಚು ಕಾಲ ಮನೆಯೊಳಗೆ ಬಂಧಿಯಾಗಿದ್ದ ಜನರು ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಕರೋನಾ ವೈರಸ್ ಮೂರನೇ ಅಲೆ ಎದುರಾಗಬಹುದೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕೆ ನೀಡುತ್ತಿದ್ದರೂ ಜನರು ಪ್ರವಾಸಿ ತಾಣಗಳಿಗೆ ಮುಗಿ ಬೀಳುತ್ತಿದ್ದಾರೆ.
ಗುಡ್ಡಗಾಡು ಪ್ರದೇಶಗಳಲ್ಲಿರುವ ಪ್ರವಾಸಿ ತಾಣಗಳು ಸಹ ಜನರಿಂದ ತುಂಬಿ ತುಳುಕುತ್ತಿವೆ. ಪ್ರವಾಸಿ ತಾಣಗಳಿಗೆ ತೆರಳುವ ಜನರು ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದು ಸಹಜ. ಜನರು ರಸ್ತೆ ಮೇಲೆ ಕಸ ಎಸೆದಾಗ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ವಿರೋಧಿಸುತ್ತಾರೆ.
ಲಡಾಖ್ಗೆ ಟೊಯೊಟಾ ಫಾರ್ಚೂನರ್ ಕಾರಿನಲ್ಲಿ ತೆರಳಿದ್ದ ಕುಟುಂಬವೊಂದು ತಾವು ಬಳಸಿದ ಪ್ಲಾಸ್ಟಿಕ್ ಬಾಟಲಿಯನ್ನು ರಸ್ತೆಯ ಮೇಲೆ ಎಸೆದಿತ್ತು. ಆಗ ಆ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರರೊಬ್ಬರು ಫಾರ್ಚೂನರ್ ಕಾರ್ ಅನ್ನು ಅಡ್ಡ ಗಟ್ಟಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿರುವ ಲಡಾಖ್, ಬೈಕ್ ಸವಾರರ ನೆಚ್ಚಿನ ತಾಣಗಳಲ್ಲಿ ಒಂದು. ಲಡಾಖ್ಗೆ ದೂರದ ಊರುಗಳಿಂದ ಬೈಕ್ ಸವಾರರು ತೆರಳುತ್ತಾರೆ. ಅದರಲ್ಲೂ ಉತ್ತರ ಭಾರತದ ಬೈಕ್ ಸವಾರರು ಲಡಾಖ್ಗೆ ಭೇಟಿ ನೀಡುತ್ತಲೇ ಇರುತ್ತಾರೆ.
ಇಂತಹ ನೆಚ್ಚಿನ ತಾಣದಲ್ಲಿ ಯಾರಾದರೂ ಕಸ ಎಸೆದರೆ ಬೈಕ್ ಸವಾರರು ಕೋಪಗೊಳ್ಳುವುದು ಸಹಜ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಫಾರ್ಚೂನರ್ ಕಾರ್ ಅನ್ನು ಬೈಕ್ ಸವಾರರೊಬ್ಬರು ತಡೆದು ನಿಲ್ಲಿಸಿರುತ್ತಾರೆ.
ಆ ವೇಳೆ ಮತ್ತೊಂದು ಬೈಕಿನಲ್ಲಿ ಬರುವವರು ರಸ್ತೆ ಮೇಲೆ ಬಿದ್ದಿದ್ದ ಬಾಟಲ್ ಅನ್ನು ತರುತ್ತಾರೆ. ಕಾರ್ ಅನ್ನು ತಡೆದ ನಂತರ ಇಷ್ಟು ದೊಡ್ಡ ಕಾರಿನಲ್ಲಿ ಸಂಚರಿಸುತ್ತಿರುವ ನಿಮಗೆ ರಸ್ತೆ ಮೇಲೆ ಬಾಟಲ್ ಎಸೆಯಬಾರದು ಎಂಬುದು ತಿಳಿಯುವುದಿಲ್ಲವೇ ಎಂದು ಬೈಕ್ ಸವಾರರು ಕೇಳುತ್ತಾರೆ.
ನಂತರ ಕಾರಿನಲ್ಲಿದ್ದವರಿಗೆ ಅವರು ರಸ್ತೆ ಮೇಲೆ ಎಸೆದಿದ್ದ ಬಾಟಲ್ ಅನ್ನು ನೀಡುತ್ತಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಲಡಾಖ್ ಸಂಸದರಾದ ಜಮ್ಯಾಂಗ್ ತೆಸ್ರೀಂಗ್'ರವರು ಲಡಾಖ್ಗೆ ಬರುವವರು ಎಲ್ಲೆಂದರಲ್ಲಿ ಕಸ ಎಸೆಯಬಾರದೆಂದು ಮನವಿ ಮಾಡಿದ್ದಾರೆ.
ಕೆಲವೊಮ್ಮೆ ಕಸ ಎಸೆದಿರುವವರು ಪ್ರಶ್ನಿಸುವವರ ಮೇಲೆಯೇ ಜಗಳಕ್ಕೆ ತೆರಳುವ ಸಾಧ್ಯತೆಗಳಿರುತ್ತವೆ. ಆದರೆ ಈ ಘಟನೆಯಲ್ಲಿ ಕಾರಿನಲ್ಲಿದ್ದವರು ಬಾಟಲಿಯನ್ನು ವಾಪಸ್ ಪಡೆದು ತಮ್ಮ ತಪ್ಪನ್ನು ಅರಿತು ಕೊಂಡಿದ್ದಾರೆ.
ಈ ವೀಡಿಯೊದಲ್ಲಿ ಕಾರಿನಲ್ಲಿದ್ದವರು ಎರಡು ಮೂರು ಬಾರಿ ಕ್ಷಮಿಸಿ ಎಂದು ಹೇಳುವುದನ್ನು ಕೇಳಬಹುದು. ಈ ಘಟನೆಯ ನಂತರ ಕಾರಿನಲ್ಲಿದ್ದವರು ಮತ್ತೊಮ್ಮೆ ರಸ್ತೆಯ ಮೇಲೆ ಕಸ ಎಸೆಯುವ ಸಾಧ್ಯತೆಗಳು ಕಡಿಮೆ.