ಅಡ್ಡಾದಿಡ್ಡಿ ನುಗ್ಗಿ ಕಾರಿನ ಬಾನೆಟ್ ಮೇಲೆ ಅಪ್ಪಳಿಸಿದ ದಂಪತಿ... ಬೆಚ್ಚಿಬೀಳಿಸುವ ವಿಡಿಯೋ ವೈರಲ್
ಭಾರತದಲ್ಲಿ ಅದೆಷ್ಟೋ ಜನರು 18 ವರ್ಷ ತುಂಬಿದ್ರೂ ಡಿಎಲ್ ಇಲ್ಲದೇ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಪೊಲೀಸರಿಗೆ ಸಿಕ್ಕಿಬಿದ್ದಾಗ ಮಾತ್ರ ದಂಡ ಪಾವತಿಸಿ ಆ ಸಮಯಕ್ಕೆ ತಪ್ಪಿಸಿಕೊಳ್ಳುತ್ತಾರೆ. ಹಾಗೆಯೇ ಬಹುತೇಕ ಮಂದಿ ಟ್ರಾಫಿಕ್ ನಿಯಮಗಳು ಕೂಡ ತಿಳಿಯದೇ ರಸ್ತೆಗಳಲ್ಲಿ ಸಂಚರಿಸಿ ಅಪಘಾತಗಳನ್ನು ಮಾಡುತ್ತಿದ್ದಾರೆ, ಇಂತಹದೇ ಘಟನೆ ಇದೀಗ ವೈರಲ್ ಆಗಿದೆ.
ವಿರುದ್ಧ ದಿಕ್ಕಿನಲ್ಲಿ ಬಂದು ಕಾರೊಂದಕ್ಕೆ ಡಿಕ್ಕಿ ಹೊಡೆದ ಬೈಕ್ ಸವಾರನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಕುರಿತ ವಿಡಿಯೋ ಅಪಘಾತಕ್ಕೆ ಒಳಗಾದ ಕಾರಿನಲ್ಲಿ ಅಳವಡಿಸಲಾದ ಡ್ಯಾಶ್ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಧ್ಯಪ್ರದೇಶದ ಖಜುರಾಹೊದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಹೆದ್ದಾರಿಯಲ್ಲಿ ವೇಗವಾಗಿ ಬಂದು ನೇರವಾಗಿ ಕಾರಿಗೆ ಡಿಕ್ಕಿಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಚಾಲಕ ಹಾಗೂ ಹಿಂದೆ ಕುಳಿತಿದ್ದ ಮಹಿಳೆ ಕಾರಿನ ಬಾನೆಟ್ ಗೆ ಅಪ್ಪಳಿಸಿದ್ದಾರೆ.

ಈ ಸಂಪೂರ್ಣ ದೃಶ್ಯಗಳು ಕಾರಿನ ಡ್ಯಾಶ್ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ, ವಾಹನವು ಹೆದ್ದಾರಿಯಲ್ಲಿ ಜಂಕ್ಷನ್ ಅನ್ನು ಸಮೀಪಿಸುತ್ತಿರುವುದನ್ನು ನಾವು ನೋಡಬಹುದು. ಎರಡು ಬೈಕ್ಗಳು ಹೆದ್ದಾರಿಯ ಬಲ-ತುದಿಯ ಲೇನ್ನಲ್ಲಿ ವಾಹನವನ್ನು ಸಮೀಪಿಸುತ್ತಿರುವಂತೆ ಓರ್ವ ಚಾಲಕ ಸಂಪೂರ್ಣ ಡಿವೈಡರ್ ಬದಿಗೆ ಸರಿದುಕೊಂಡರೆ ಮಹಿಳೆಯನ್ನು ಕೂರಿಸಿಕೊಂಡು ಬರುತ್ತಿದ್ದ ಇನ್ನೋರ್ವ ಚಾಲಕ ನಿಯಂತ್ರಣ ಕಳೆದುಕೊಂಡು ಕಾರಿಗೆ ವೇಗವಾಗಿ ಡಿಕ್ಕಿ ಹೊಡೆದಿದ್ದು, ಸವಾರ ಹಾಗೂ ಹಿಂದೆ ಕುಳಿತಿದ್ದ ಮಹಿಳೆ ಬಾನೆಟ್ಗೆ ಅಪ್ಪಳಿಸಿದ್ದಾರೆ.
ಈ ವಿಡಿಯೋವನ್ನು ಸ್ಪಷ್ಟವಾಗಿ ಗಮನಿಸಿದರೆ ದ್ವಿಚಕ್ರ ವಾಹನ ಸವಾರರ ಬೇಜವಾಬ್ದಾರಿತನ ತಿಳಿಯುತ್ತದೆ. ವಿರುದ್ಧ ದಿಕ್ಕಿನಲ್ಲಿ ಬರುವುದಲ್ಲದೇ ಎದುರು ಬರುತ್ತಿದ್ದ ಕಾರಿಗೆ ದಾರಿ ಕೊಡದೆ ನೇರವಾಗಿ ಬಂದಿದ್ದಾರೆ. ಇನ್ನು ಅಪಘಾತಕ್ಕೆ ಸಿಲುಕಿದ ದಂಪತಿಯಲ್ಲಿ ಒಬ್ಬರು ಹೆಲ್ಮೆಟ್ ಧರಿಸಿದ್ದರೆ, ಹಿಂದೆ ಕುಳಿತಿದ್ದ ಮಹಿಳೆ ಯಾವುದೇ ಹೆಲ್ಮೆಟ್ ಧರಿಸಿರಲಿಲ್ಲ. ಈ ಅಪಘಾತದ ಬಳಿಕ ಮಹಿಳೆಯು ಬಾನೆಟ್ ಮೇಲೆ ಬಿದ್ದರೇ ಸವಾರ ಕೆಳೆಗೆ ಬಿದ್ದಿದ್ದಾನೆ. ಬಳಿಕೆ ಮಹಿಳೆಯು ಸಣ್ಣ ಗಾಯಗಳೊಂದಿಗೆ ಸವಾರನನ್ನು ವಿಚಾರಿಸಲು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.

ಭಾರತದಲ್ಲಿ, ರೈಟ್ ಆಫ್ ವೇ ಪರಿಕಲ್ಪನೆಯು ಅಸ್ತಿತ್ವದಲ್ಲಿಲ್ಲ, ಆದ್ದರಿಂದ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ, ಪಟ್ಟಣಗಳು ಮತ್ತು ಹಳ್ಳಿಗಳಂತಹ ಜನನಿಬಿಡ ಪ್ರದೇಶಗಳ ಮೂಲಕ ಹಾದುಹೋಗುವಾಗ ನಿಧಾನಗೊಳಿಸಲು ಸರ್ಕಾರ ಹೆದ್ದಾರಿಗಳ ಉದ್ದಕ್ಕೂ ಸೂಚನಾ ಫಲಕಗಳನ್ನು ಹಾಕಲಾಗುತ್ತದೆ. ಈ ಮೂಲಕ ರಸ್ತೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದಾಟುವಿಕೆಯನ್ನು ಸಮೀಪಿಸುವಾಗ ವೇಗವನ್ನು ಕಡಿಮೆ ಮಾಡಲು ಸಲಹೆ ನೀಡಲಾಗುತ್ತದೆ. ಆದರೆ ಕೆಲವೊಮ್ಮೆ ಸ್ಥಳೀಯರು ನಿಗಧಿಪಡಿಸಿದ ದಾಟುವಿಕೆ ಬದಲಾಗಿ ಡಿವೈಡರ್ ಇರುವ ಕಡೆ ರಸ್ತೆ ದಾಟುತ್ತಾರೆ.
ಮುಖ್ಯವಾಗಿ ಇಂತಹ ಘಟನೆಗಳಿಂದಲೇ ಹೆದ್ದಾರಿಗಳಲ್ಲಿ ನಿತ್ಯ ಅಪಘಾತಗಳು ಸಾಮಾನ್ಯವಾಗಿಬಿಟ್ಟಿವೆ. ಇನ್ನೂ ಕೆಲ ಸಂದರ್ಭಗಳಲ್ಲಿ ಅನೇಕರು ನಿರ್ದಿಷ್ಟ ವೇಗದ ಎಚ್ಚರಿಕೆಯನ್ನು ಕಂಡರೂ ಮಿತಿ ಮೀರಿದ ವೇಗದಲ್ಲಿ ಬರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಹೆದ್ದಾರಿ ಪ್ರಾಧಿಕಾರವು ಹೆದ್ದಾರಿ ಸುತ್ತಮುತ್ತಲಿನ ವಾತಾವರಣ ಹಾಗೂ ಪಟ್ಟಣ, ಹಳ್ಳಿ ಹಾಗೂ ಸ್ಪೀಡ್ ಬ್ರೇಕರ್ಗಳನ್ನು ಗಣನೆಗೆ ತೆಗದುಕೊಂಡು ಅಲ್ಲಿನ ವೇಗವನ್ನು ನಿರ್ಧರಿಸಲಾಗುತ್ತದೆ. ಈ ವೇಗವನ್ನು ಅನುಸರಿಸಿದರೆ ಆ ಪ್ರದೇಶದಲ್ಲಿ ಧಿಡೀರನೆ ಏನದರೂ ಅಡ್ಡ ಬಂದರೂ ಬ್ರೇಕ್ ಹಾಕಿದಾಗ ವಾಹನಗಳು ನಿಲ್ಲುತ್ತವೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications