Just In
- 5 hrs ago ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- 7 hrs ago Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
- 7 hrs ago Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 9 hrs ago 150KM ರೇಂಜ್, ಸುರಕ್ಷತೆಯ ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ: ಹೆಚ್ಚು ಲಾಭ
Don't Miss!
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟನ ಕಾರನ್ನು ಅಡ್ಡಗಟ್ಟಿ ಬಂಧನಕ್ಕೀಡಾದ ಚಾಲಕ
ಬಾಲಿವುಡ್ ನಟ ಅಜಯ್ ದೇವ್ಗನ್ ಅವರ ಬಿಎಂಡಬ್ಲ್ಯು ಎಕ್ಸ್ 7 ಕಾರನ್ನು ವ್ಯಕ್ತಿಯೊಬ್ಬ ಸಾರ್ವಜನಿಕ ರಸ್ತೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿದ್ದ. ಈ ಘಟನೆ ನಡೆದಾಗ ಅಜಯ್ ದೇವಗನ್ ಮುಂಬೈನ ಫಿಲ್ಮ್ ಸಿಟಿಗೆ ಶೂಟಿಂಗ್'ಗಾಗಿ ತೆರಳುತ್ತಿದ್ದರು.
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಜಯ್ ದೇವಗನ್ ಈ ವಿಷಯದ ಬಗ್ಗೆ ಯಾವ ಹೇಳಿಕೆಯನ್ನು ನೀಡದ ಕಾರಣಕ್ಕೆ ರಾಜ್ದೀಪ್ ಸಿಂಗ್ ಎಂಬ ವ್ಯಕ್ತಿ ಅವರ ಕಾರ್ ಅನ್ನು ತಡೆದು ನಿಲ್ಲಿಸಿದ್ದಾನೆ.
ಅಜಯ್ ದೇವಗನ್ ಅವರ ಕಾರನ್ನು ನಿಲ್ಲಿಸಿದ ರಾಜ್ದೀಪ್ ಸಿಂಗ್ ತನ್ನ ಮೊಬೈಲ್ ಫೋನ್ ಕ್ಯಾಮೆರಾ ಆನ್ ಮಾಡಿ ರೈತರ ಹೋರಾಟದ ಬಗ್ಗೆ ಮಾತನಾಡುವಂತೆ ಅಜಯ್ ದೇವಗನ್ ಅವರನ್ನು ಕೇಳಿಕೊಂಡಿದ್ದಾನೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ
ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿದ್ದಾನೆ. ಅಜಯ್ ದೇವಗನ್ ಅವರ ಕಾರ್ ಅನ್ನು ಅಡ್ಡ ಗಟ್ಟಿದ ಕಾರಣಕ್ಕೆ ಪೊಲೀಸರು ರಾಜ್ದೀಪ್ ಸಿಂಗ್ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಈ ವೀಡಿಯೊದಲ್ಲಿ ರಾಜ್ದೀಪ್ ಸಿಂಗ್, ನಿಮ್ಮ ಈ ನಡೆ ಪಂಜಾಬ್'ಗೆ ವಿರುದ್ಧವಾಗಿದೆ. ಪಂಜಾಬ್ ನಿಮಗೆ ಅನ್ನ ನೀಡಿದೆ. ನೀವು ಪಂಜಾಬ್ ವಿರುದ್ಧ ಹೇಗೆ ಇರಲು ಸಾಧ್ಯ? ನಿಮಗೆ ನಾಚಿಕೆಯಾಗಬೇಕು. ನಿಮಗೆ ಕಾರಿನಿಂದ ಇಳಿದು ಮಾತನಾಡಲು ಯಾಕೆ ಸಾಧ್ಯವಾಗುತ್ತಿಲ್ಲವೆಂದು ಪ್ರಶ್ನಿಸಿದ್ದಾನೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು
ರಾಜ್ದೀಪ್ ಸಿಂಗ್ ಪಂಜಾಬ್ ಮೂಲದವನಾಗಿದ್ದು, ಮುಂಬೈನಲ್ಲಿ ಚಾಲಕ ವೃತ್ತಿಯಲ್ಲಿದ್ದಾನೆ. ಆತ ಅಜಯ್ ದೇವಗನ್ ಅವರ ಕಾರನ್ನು 15 ರಿಂದ 20 ನಿಮಿಷಗಳ ಕಾಲ ನಿಲ್ಲಿಸಿದ್ದ ಎಂದು ವರದಿಯಾಗಿದೆ.
ರೈತರ ಹೋರಾಟದ ಬಗ್ಗೆ ಅಜಯ್ ದೇವಗನ್ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ರಾಜ್ದೀಪ್ ಸಿಂಗ್ ಹೀಗೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ
ಪೊಲೀಸರು ರಾಜ್ದೀಪ್ ಸಿಂಗ್'ರವರನ್ನು ಬಂಧಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಜಯ್ ದೇವಗನ್ ದುಬಾರಿ ಬೆಲೆಯ ಕಾರುಗಳನ್ನು ಹೊಂದಿದ್ದಾರೆ.
ಅವರ ಗ್ಯಾರೇಜ್ನಲ್ಲಿ ರೋಲ್ಸ್ ರಾಯ್ಸ್ ಕಲಿನನ್ ಸೇರಿದಂತೆ ಹಲವಾರು ದುಬಾರಿ ಐಷಾರಾಮಿ ಎಸ್ಯುವಿಗಳಿವೆ. ಇವುಗಳಲ್ಲಿ ಬಿಎಂಡಬ್ಲ್ಯು ಎಕ್ಸ್ 7 ಸಹ ಸೇರಿದೆ.ಈ ಘಟನೆ ನಡೆದಾಗ ಅವರು ಬಿಎಂಡಬ್ಲ್ಯು ಎಕ್ಸ್ 7 ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು
ಅಜಯ್ ದೇವಗನ್ ಅವರು ಮಾಸೆರೋಟಿ ಕ್ವಾಟ್ರೋಪೋರ್ಟ್, ಬಿಎಂಡಬ್ಲ್ಯು ಝಡ್ 4 ಹಾಗೂ ಕಸ್ಟಮೈಸ್ ಮಾಡಿದ ವ್ಯಾನ್ ಅನ್ನು ಸಹ ಹೊಂದಿದ್ದಾರೆ.
ಅಜಯ್ ದೇವಗನ್ ಬಹುತೇಕ ಬಾರಿ ತಾವೇ ಕಾರುಗಳನ್ನು ಚಾಲನೆ ಮಾಡುತ್ತಾರೆ. ಆದರೆ ಈ ಘಟನೆ ನಡೆದಾಗ ಅವರ ಜೊತೆಗೆ ಕಾರು ಚಾಲಕನಿದ್ದ.