ಶ್ರೀಲಂಕಾಗೆ ಅನಿರೀಕ್ಷಿತ ಸಹಾಯ... ಭಾರತವನ್ನು ಪ್ರತಿದಿನ ನೆನಪಿಸಿಕೊಳ್ಳಲಿದ್ದಾರೆ ಶ್ರೀಲಂಕಾ ಜನ

ಭಾರತವು ವಿಶ್ವದ ಪ್ರಮುಖ ದೇಶಗಳಾದ ರಷ್ಯಾ, ಅಮೆರಿಕಾ, ಬ್ರಿಟನ್ ಸೇರಿದಂತೆ ತನ್ನ ನೆರೆಹೊರೆಯ ದೇಶಗಳೊಂದಿಗು ಉತ್ತಮ ಭಾಂದವ್ಯವನ್ನು ಉಳಿಸಿಕೊಂಡಿದೆ. ಸದ್ಯ ಆರ್ಥಿಕವಾಗಿ ಭಾರತವೇ ತುಸು ಹಿಂದುಳಿದಿದ್ದರೂ ಸಂಕಷ್ಟದಲ್ಲಿರುವ ದೇಶಗಳಿಗೆ ಆಸರೆಯಾಗಿ ನಿಲ್ಲುತ್ತಿದೆ. ಇತ್ತೀಚೆಗೆ ಕೊರೊನಾದಿಂದಾಗಿ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ಶ್ರೀಲಂಕಾಗೆ ಮತ್ತೊಮ್ಮೆ ಸಹಕರಿಸಿ ಅಲ್ಲಿನ ಸರ್ಕಾರ ಹಾಗೂ ಜನರಿಗೆ ಬೆನ್ನೆಲುಬಾಗಿದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಆರ್ಥಿಕ ಸಹಾಯವಿಲ್ಲದೇ ಹೆಣಗಾಡುತ್ತಿರುವ ಶ್ರೀಲಂಕಾಕ್ಕೆ 75 ಪ್ರಯಾಣಿಕ ಬಸ್ಸುಗಳನ್ನು ಭಾರತ ಸರ್ಕಾರ ಹಸ್ತಾಂತರಿಸಿದೆ. ಈ ಮೂಲಕ ಭಾರತದ ನೆರವು ಅದರ 'ನೆರೆಹೊರೆಗೆ ಮೊದಲು' ನೀತಿಯ ಭಾಗವಾಗಿದೆ ಎಂಬುದನ್ನು ನಿರೂಪಿಸಿದೆ. ಭಾರತದ ನೆರವಿನ ಮೂಲಕ ಶ್ರೀಲಂಕಾಕ್ಕೆ ಒಟ್ಟು 500 ಬಸ್‌ಗಳನ್ನು ಪೂರೈಸಲಾಗುವುದು ಎಂದು ಇಲ್ಲಿನ ಭಾರತೀಯ ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ. ಶೀಘ್ರವೇ ಉಳಿದ ಬಸ್‌ಗಳನ್ನು ಹಸ್ತಾಂತರಿಸಲಾಗುವುದು ಎಂದು ಹೇಳಿದೆ.

ಶ್ರೀಲಂಕಾಗೆ ಅನಿರೀಕ್ಷಿತ ಸಹಾಯ... ಭಾರತವನ್ನು ಪ್ರತಿದಿನ ನೆನಪಿಸಿಕೊಳ್ಳಲಿದ್ದಾರೆ ಶ್ರೀಲಂಕಾ ಜನ

ಡಿಸೆಂಬರ್‌ನಲ್ಲಿ, ದ್ವೀಪ ರಾಷ್ಟ್ರವನ್ನು ಬೆಂಬಲಿಸಲು ಮತ್ತು ವಾಹನಗಳ ಲಭ್ಯತೆಯಿಲ್ಲದ ಕಾರಣ ಪೊಲೀಸರು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಗಂಭೀರ ಚಲನಶೀಲತೆಯ ನಿರ್ಬಂಧದ ಸಮಸ್ಯೆಗಳನ್ನು ಅರಿತ ಭಾರತ ಸಹಾಯ ಮಾಡಲು 125 ಮಹೀಂದ್ರಾ ಸ್ಕಾರ್ಪಿಯೊ ಎಸ್‌ಯುವಿಗಳನ್ನು ಶ್ರೀಲಂಕಾ ಪೊಲೀಸರಿಗೆ ಸಾಲದ ಅಡಿಯಲ್ಲಿ ಹಸ್ತಾಂತರಿಸಿತು. ಭಾರತವು ಶ್ರೀಲಂಕಾಗೆ ಭರವಸೆ ನೀಡಿದ ಒಟ್ಟು 500 ಘಟಕಗಳಲ್ಲಿ ಇದು ಒಂದಾಗಿದ್ದು, ಆ ದೇಶದ ಚೇತರಿಕೆಗೆ ತುಸು ಸಹಕರಿಸಿದಂತಾಗಿದೆ ಎಂದು ಹೇಳಬಹದಾಗಿದೆ.

ಅಗತ್ಯವಿರುವ ಮತ್ತೊಂದು ದೇಶದವರಿಗೆ ಹೆಚ್ಚು ಅಗತ್ಯವಿರುವ ಬೆಂಬಲವನ್ನು ವಿಸ್ತರಿಸುವ ಉತ್ತಮ ನೆರೆಹೊರೆಯಾಗಿ, ಭಾರತವು ವರ್ಷದಲ್ಲಿ ಶ್ರೀಲಂಕಾಕ್ಕೆ ಸುಮಾರು $4 ಶತಕೋಟಿ ಆರ್ಥಿಕ ಸಹಾಯವನ್ನು ನೀಡಿತು. ಜನವರಿಯಲ್ಲಿ, ಆರ್ಥಿಕ ಬಿಕ್ಕಟ್ಟು ತೆರೆದುಕೊಳ್ಳಲು ಪ್ರಾರಂಭಿಸಿದಾಗ ಭಾರತವು ತನ್ನ ಖಾಲಿಯಾದ ವಿದೇಶಿ ಮೀಸಲುಗಳನ್ನು ನಿರ್ಮಿಸಲು ಶ್ರೀಲಂಕಾಕ್ಕೆ $ 900 ಮಿಲಿಯನ್ ಸಾಲವನ್ನು ಘೋಷಿಸಿತು. ಆ ಸಂದರ್ಭದಲ್ಲಿ ಶ್ರೀಲಂಕಾಗೆ ಇದು ಅತ್ಯವಶ್ಯಕ ಆರ್ಥಿಕ ಸಹಾಯವಾಗಿತ್ತು ಎಂದು ಈ ಹಿಂದೆಯು ವರದಿಯಾಗಿತ್ತು.

ಶ್ರೀಲಂಕಾಗೆ ಅನಿರೀಕ್ಷಿತ ಸಹಾಯ... ಭಾರತವನ್ನು ಪ್ರತಿದಿನ ನೆನಪಿಸಿಕೊಳ್ಳಲಿದ್ದಾರೆ ಶ್ರೀಲಂಕಾ ಜನ

ಭಾರತಕ್ಕೆ ಧನ್ಯವಾದ ತಿಳಿಸಿದ್ದ ಶ್ರೀಲಂಕಾ ಕ್ರಿಕೆಟಿಗ
2022 ಮೇ-ಜುಲೈನಲ್ಲಿ ವಿದೇಶಗಳಿಂದ ಆಮದು ಮಾಡಿಕೊಂಡಿದ್ದ ತೈಲ ಖಾಲಿಯಾಗುತ್ತಿದ್ದಂತೆ ಇಂಧನವನ್ನು ಪಡೆಯುವುದು ಶ್ರೀಲಂಕಾ ಪ್ರಜೆಗಳಿಗೆ ಭಾರೀ ಕಷ್ಟವಾಗಿತ್ತು. ಯಾವ ಮಟ್ಟಿಗೆ ಅಂದರೆ ಕ್ರಿಕೆಟಿಗ ಚಾಮಿಕಾ ಕರುಣಾರತ್ನ ಕೂಡ ಇಂಧನವನ್ನು ಸುಲಭವಾಗಿ ಪಡೆಯಲಾಗದಿರುವುದು ಇದಕ್ಕೆ ಉದಾಹರಣೆಯಾಗಿದೆ. ಇಂಧನ ಬಂದರೂ ಪೂರೈಕೆ ಸೀಮಿತವಾಗಿದ್ದು, ಜನರು ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಇತ್ತು.

ಆ ಸಂದರ್ಭದಲ್ಲಿ ಕರುಣಾರತ್ನ ಅವರು ಮುಂಬರುವ ಕ್ರಿಕೆಟ್ ಕಾರ್ಯಯೋಜನೆಗಳಿಗಾಗಿ ತಮ್ಮ ಕಾರಿಗೆ ಇಂಧನ ತುಂಬಲು ಪೆಟ್ರೋಲ್ ಪಂಪ್‌ಗೆ ಹೋದಾಗ ಬಂಕ್ ಅನ್ನು ನೋಡಿ ದಂಗಾಗಿದ್ದರು. ಅಂತಹ ಬಿಕ್ಕಟ್ಟಿನ ಸಮಯದಲ್ಲಿ ಭಾರತವು ಇಂಧನ ಸಹಾಯ ಮಾಡಿದ್ದರಿಂದಲೇ ಕನಿಷ್ಠ ಜನರು ಸರತಿ ಸಾಲಿನಲ್ಲಿ ನಿಂತು ಇಂಧನ ಖರೀದಿಸಿದ್ದರು. ಒಂದು ವೇಳೆ ಆ ಸಹಾಯ ಕೂಡ ಇಲ್ಲದಿದ್ದರೇ, ಪರಿಸ್ಥಿತಿ ಇನ್ನೂ ಶೋಚನೀಯವಾಗಿರುತ್ತಿತ್ತು. ಇಂತಹ ಪರಿಸ್ಥಿಯಲ್ಲಿ ದೇಶಕ್ಕೆ ಸಹಾಯ ಹಸ್ತ ನೀಡಿದ್ದಕ್ಕಾಗಿ ಕ್ರಿಕೆಟಿಗ ಚಾಮಿಕಾ ಕರುಣಾರತ್ನ ಭಾರತಕ್ಕೆ ಧನ್ಯವಾದ ತಿಳಿಸಿದ್ದರು.

ಆ ಸಂದರ್ಭದಲ್ಲಿ ಅವರು ಮಾತನಾಡಿದ್ದು ಹೀಗೆ, "ಕ್ಲಬ್ ಕ್ರಿಕೆಟ್ ಸೀಸನ್ ಇರುವುದರಿಂದ ನಾವು ಕೊಲಂಬೊದಲ್ಲಿ ಮತ್ತು ಇತರ ಸ್ಥಳಗಳಿಗೆ ಅಭ್ಯಾಸಕ್ಕಾಗಿ ಹೋಗಬೇಕಾಗಿದೆ. ಆದರೆ ನಾನು ಕಳೆದ 2 ದಿನಗಳಿಂದ ಇಂಧನಕ್ಕಾಗಿ ಸರದಿಯಲ್ಲಿ ನಿಂತಿದ್ದೇನೆ. ನಾನು 10,000 ರೂ.ಗೆ ಇಂಧನ ತುಂಬಿದ್ದೇನೆ, ಇದು 2-3 ದಿನಗಳವರೆಗೆ ಬರಬಹುದು." "ಭಾರತವು ಸಹೋದರ ರಾಷ್ಟ್ರದಂತಿದೆ, ನಮಗೆ ತುಂಬಾ ಸಹಾಯ ಮಾಡುತ್ತಿದೆ. ನಾನು ಅವರಿಗೆ ಧನ್ಯವಾದ ತಿಳಿಸಲೇಬೇಕು. ನಮಗೆ ಸಮಸ್ಯೆಗಳಿವೆ. ನಾವು ಕಷ್ಟದಲ್ಲಿರುವಾಗ ಅವರು ನಮಗೆ ಸಹಕರಿಸುತ್ತಿದ್ದಾರೆ. ಅದಕ್ಕಾಗಿ ತುಂಬಾ ಧನ್ಯವಾದಗಳು. ಎಲ್ಲದಕ್ಕೂ ಧನ್ಯವಾದಗಳು ಎಂದು ಹೇಳಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, January 9, 2023, 11:19 [IST]
English summary
Government of India has handed over 75 passenger buses to sri Lanka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+