ದರೋಡೆಗೆ ಮುಂದಾದ ಕಳ್ಳರು.. ಕಾರಿನ ಈ ಸೇಫ್ಟಿ ಫೀಚರ್ನಿಂದ ಸಿಕ್ಕಿಬಿದ್ದರು! ವಿಡಿಯೋ
ವಾಹನದಲ್ಲಿನ ಡ್ಯಾಶ್ ಕ್ಯಾಮೆರಾ ಎಂಬ ಸಣ್ಣ ಸಾಧನವು ಎಷ್ಟು ಉಪಯುಕ್ತ ಎಂಬುದಕ್ಕೆ ಇಲ್ಲಿದೆ ಉತ್ತಮ ಉದಾಹರಣೆ. ಇತ್ತೀಚೆಗೆ ಬೆಂಗಳೂರಿನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ಯುವಕರ ಮೇಲೆ ದಾಳಿ ನಡೆದಿದೆ. ಯುವಕರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದರೋಡೆಕೋರರ ಗುಂಪು ದಾಳಿ ನಡೆಸಿದ್ದು, ದರೋಡೆಕೋರರು ತಮ್ಮ ಕಳ್ಳತನದಲ್ಲಿ ಯಶಸ್ವಿಯಾಗಲಿಲ್ಲ. ಕೊನೆಗೆ ಅಲ್ಲಿಂದ ಪರಾರಿಯಾಗಿದ್ದರಾದರೂ ಕಾರಿನಲ್ಲಿನ ಕ್ಯಾಮೆರಾ ಘಟನೆಯ ಪ್ರತಿಯೊಂದು ವಿವರವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಕ್ಯಾಮೆರಾ ಕಾರಿನ ನಂಬರ್ ಪ್ಲೇಟ್ ಅನ್ನು ಸೆರೆಹಿಡಿದಿದ್ದು, ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಾಯ ಮಾಡಿದೆ.
ಅನೇಕ ಭಾರತೀಯ ಹೆದ್ದಾರಿಗಳು ರಾತ್ರಿಯಲ್ಲಿ ಪ್ರಯಾಣಿಸಲು ಸುರಕ್ಷಿತವಲ್ಲ. ದರೋಡೆ ಪ್ರಯತ್ನಗಳು ಹೆಚ್ಚುತ್ತಿರುವುದರಿಂದ ಕಾರುಗಳಲ್ಲಿ ಡ್ಯಾಶ್ ಕ್ಯಾಮೆರಾಗಳನ್ನು ಇಡುವುದು ಒಳ್ಳೆಯದು. ಈ ಘಟನೆಯಲ್ಲೂ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಲಭ್ಯವಿರುವ ವೀಡಿಯೊ ಆಧಾರದ ಮೇಲೆ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿ ಅಪರಾಧಿಗಳನ್ನು ಬಂಧಿಸಿದ್ದಾರೆ.

ಎರ್ನಾಕುಲಂ ಜಿಲ್ಲೆಯ ಪಟ್ಟಿಮಟ್ಟಂ ಪ್ರದೇಶದ ಅಸ್ಲಂ, ಸಿದ್ದೀಕ್, ಚಾರ್ಲ್ಸ್ ರೆಜಿ ಮತ್ತು ಇತರ ಇಬ್ಬರು ತಮ್ಮ ಕಚೇರಿಗೆ ಕಂಪ್ಯೂಟರ್ ಖರೀದಿಸಲು ಬೆಂಗಳೂರಿಗೆ ಹೋಗಿದ್ದರು. ಬೆಂಗಳೂರಿನಿಂದ ಕೊಚ್ಚಿಗೆ ಹಿಂದಿರುಗುತ್ತಿದ್ದಾಗ, ಕೊಯಮತ್ತೂರು ಬಳಿಯ ಮಧುಕರೈನ ಎಲ್ &ಟಿ ಬೈಪಾಸ್ ಬಳಿ ಸೇಲಂ-ಕೊಚ್ಚಿ ಹೆದ್ದಾರಿಯಲ್ಲಿ ಯುವಕರ ಕಾರಿನ ಮೇಲೆ ದರೋಡೆ ಗುಂಪು ದಾಳಿ ನಡೆಸಿದೆ.
ಕಾರಿನಲ್ಲಿ ಅಳವಡಿಸಲಾಗಿದ್ದ ಡ್ಯಾಶ್ ಕ್ಯಾಮ್ ವೀಡಿಯೊದಲ್ಲಿ, ಕಾರು ರಾತ್ರಿಯಲ್ಲಿ ಹೆದ್ದಾರಿಯ ಮೂಲಕ ಚಲಿಸುತ್ತಿರುವುದನ್ನು ನಾವು ನೋಡಬಹುದು. ಇದ್ದಕ್ಕಿದ್ದಂತೆ, ಬಿಳಿ ಟೊಯೊಟಾ ಇನ್ನೋವಾ ಕಾರು ಯುವಕರ ಕಾರನ್ನು ಅಡ್ಡಗಟ್ಟಲು ಕಾರಿನ ಬಂಪರ್ಗೆ ಡಿಕ್ಕಿ ಹೊಡೆದಿದೆ. ಬಳಿಕ ವಾಹನವನ್ನು ನಿಲ್ಲಿಸಲು ಒತ್ತಾಯಿಸಲಾಯಿತು. ಕಾರಿನಲ್ಲಿದ್ದವರಿಗೆ ಮತ್ತು ಚಾಲಕನಿಗೆ ಏನಾಗುತ್ತಿದೆ ಎಂದು ತಿಳಿದಿರಲಿಲ್ಲ.

ಬಿಳಿ ಇನ್ನೋವಾ ಕಾರಿನ ಹಿಂದೆ, ಅದೇ ಗ್ಯಾಂಗ್ಗೆ ಸೇರಿದ ಮತ್ತೊಂದು ಇನ್ನೋವಾ ಇತ್ತು. ಕಾರನ್ನು ನಿರ್ಬಂಧಿಸಿದ ನಂತರ ದರೋಡೆಕೋರರು ಮುಖವಾಡಗಳನ್ನು ಧರಿಸಿ ಹೊರಬಂದರು. ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ವಾಹನದ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ಅವರಲ್ಲಿ ಒಬ್ಬರು ತಮ್ಮ ಕೈಯಲ್ಲಿದ್ದ ಉಪಕರಣವನ್ನು ಬಳಸಿ ಮುಂಭಾಗದ ವಿಂಡ್ಶೀಲ್ಡ್ ಅನ್ನು ಪುಡಿಮಾಡಿದ್ದಾರೆ.
ಈ ಪರಿಸ್ಥಿತಿಯಲ್ಲಿ ಚಾಲಕ ಭಯಭೀತನಾಗಿ ಕಾರನ್ನು ಹಿಮ್ಮುಖವಾಗಿ ಓಡಿಸಿದ್ದಾನೆ. ನಂತರ ಇದ್ದಕ್ಕಿದ್ದಂತೆ ಕಾರನ್ನು ಮುಂದಕ್ಕೆ ಓಡಿಸಿ, ದರೋಡೆಕೋರರನ್ನು ಹೆದರಿಸಿ ಕಾರಿನ ಮುಂಭಾಗದಿಂದ ದೂರ ಸರಿಯುವಂತೆ ಮಾಡಿದ್ದಾನೆ. ಕಾರು ಚಾಲಕ ಮತ್ತು ಅವನ ಸ್ನೇಹಿತರು ಹಾನಿಗೊಳಗಾದ ವಾಹನವನ್ನು ಮಧುಕರೈ ಪೊಲೀಸ್ ಠಾಣೆಗೆ ಓಡಿಸಿ ಘಟನೆಯನ್ನು ವರದಿ ಮಾಡಿ, ದೂರು ಸಲ್ಲಿಸಿದ್ದಾರೆ.

ದಾಳಿಯನ್ನು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಎಂದು ತಿಳಿದ ಕೂಡಲೇ ಪೊಲೀಸರು ದರೋಡೆಕೋರರನ್ನು ಸುಲಭವಾಗಿ ಹಿಡಿದಿದ್ದಾರೆ. ಚಿತ್ತೂರಿನ ಶಿವದಾಸ್ (29), ರಮೇಶ್ ಬಾಬು (27), ಕುನ್ನತುಪಾಳ್ಯಂನ ವಿಷ್ಣು (28) ಮತ್ತು ಮಲ್ಲಪಲ್ಲಿ ಅಜಯ್ ಕುಮಾರ್ (24) ಬಂಧಿತರು, ಇವರನ್ನು ಪಾಲಕ್ಕಾಡ್ ನಲ್ಲಿ ಬಂಧಿಸಲಾಗಿದೆ. ಆರೋಪಿಗಳನ್ನು ರಿಮಾಂಡ್ ಮಾಡಲಾಗಿದ್ದು, ಇತರರು ಪರಾರಿಯಾಗಿದ್ದಾರೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








