ಹಿಮಪಾತದಲ್ಲಿ ಸಿಕ್ಕಿಬಿದ್ದ ಉಪಜಿಲ್ಲಾಧಿಕಾರಿ ರಕ್ಷಣೆಗೆ ಧಾವಿಸಿದ ಭಾರತೀಯ ಸೇನೆ..!

ಬೊಲೆರೊ, ಮಹೀಂದ್ರಾ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಒಂದು. ಈ ಕಾರ್ ಅನ್ನು ಸಾರ್ವಜನಿಕರು ಹಾಗೂ ಸರ್ಕಾರಿ ಇಲಾಖೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತವೆ. ಪೊಲೀಸ್ ಇಲಾಖೆ ಹಾಗೂ ಭಾರತೀಯ ಸೇನೆಯು ಈ ಕಾರ್ ಅನ್ನು ಹೆಚ್ಚು ಬಳಸುತ್ತವೆ. ಸರ್ಕಾರಿ ಅಧಿಕಾರಿಗಳ ಅಧಿಕೃತ ಬಳಕೆಗಾಗಿಯೂ ಸಹ ಇದೇ ಕಾರ್ ಅನ್ನು ನೀಡಲಾಗುತ್ತದೆ.

ಹಿಮಪಾತದಲ್ಲಿ ಸಿಕ್ಕಿಬಿದ್ದ ಉಪಜಿಲ್ಲಾಧಿಕಾರಿ ರಕ್ಷಣೆಗೆ ಧಾವಿಸಿದ ಭಾರತೀಯ ಸೇನೆ..!

ಎಂಯುವಿ ವಾಹನಗಳನ್ನು ಆಫ್-ರೋಡ್ ಹಾಗೂ ಆನ್-ರೋಡ್‌ಗಳಲ್ಲಿ ಸರಾಗವಾಗಿ ಚಲಿಸುವಂತೆ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ಹೆಚ್ಚಿನ ಎಂಜಿನ್ ಸಾಮರ್ಥ್ಯದಿಂದ ನಿರ್ಮಿಸಲಾಗಿರುತ್ತದೆ. ಈ ವಾಹನಗಳು ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶಗಳ ಒರಟು, ಭೂಪ್ರದೇಶವನ್ನು ಹಾದುಹೋಗುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ಹಿಮಪಾತದಲ್ಲಿ ಸಿಕ್ಕಿಬಿದ್ದ ಉಪಜಿಲ್ಲಾಧಿಕಾರಿ ರಕ್ಷಣೆಗೆ ಧಾವಿಸಿದ ಭಾರತೀಯ ಸೇನೆ..!

ಈ ಕಾರಣಕ್ಕೆ ಸರ್ಕಾರವು ಈ ಕಾರ್ ಅನ್ನು ಖರೀದಿಸುವಂತೆ ತನ್ನ ಉದ್ಯೋಗಿಗಳಿಗೆ ಶಿಫಾರಸು ಮಾಡುತ್ತಿದೆ. ಮಹೀಂದ್ರಾ ಕಂಪನಿಯ ಈ ಅಪ್ರತಿಮ ಬೊಲೆರೊ ಎಂಯುವಿಯು ಕಾರು ಅಪಘಾತಕ್ಕೀಡಾಗಿರುವ ವೀಡಿಯೊವೊಂದು ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ವೈರಲ್ ಆಗುತ್ತಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಹಿಮಪಾತದಲ್ಲಿ ಸಿಕ್ಕಿಬಿದ್ದ ಉಪಜಿಲ್ಲಾಧಿಕಾರಿ ರಕ್ಷಣೆಗೆ ಧಾವಿಸಿದ ಭಾರತೀಯ ಸೇನೆ..!

ವರದಿಗಳ ಪ್ರಕಾರ, ಈ ಕಾರು ಜಮ್ಮ ಕಾಶ್ಮೀರದ ಕುಪ್ವಾರ ಜಿಲ್ಲೆಯ ಉಪ-ಜಿಲ್ಲಾಧಿಕಾರಿಗಳ ಅಧಿಕೃತ ವಾಹನವಾಗಿತ್ತು. ಈ ಕಾರಿನಲ್ಲಿಉಪ-ಜಿಲ್ಲಾಧಿಕಾರಿಗಳು ಸೇರಿದಂತೆ ಕರ್ನಾ ಪ್ರದೇಶದ ಇಬ್ಬರು ಸರ್ಕಾರಿ ನೌಕರರು ಪ್ರಯಾಣಿಸುತ್ತಿದ್ದರು.

ಹಿಮಪಾತದಲ್ಲಿ ಸಿಕ್ಕಿಬಿದ್ದ ಉಪಜಿಲ್ಲಾಧಿಕಾರಿ ರಕ್ಷಣೆಗೆ ಧಾವಿಸಿದ ಭಾರತೀಯ ಸೇನೆ..!

ಉತ್ತರ ಕಾಶ್ಮೀರದಲ್ಲಿರುವ ಶೀತ ವಾತಾವರಣದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ಮಾಹಿತಿ ಪಡೆದ ಭಾರತೀಯ ಸೇನೆಯು ಕಾರಿನಲ್ಲಿದ್ದವರನ್ನು ರಕ್ಷಿಸಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಹಿಮಪಾತದಲ್ಲಿ ಸಿಕ್ಕಿಬಿದ್ದ ಉಪಜಿಲ್ಲಾಧಿಕಾರಿ ರಕ್ಷಣೆಗೆ ಧಾವಿಸಿದ ಭಾರತೀಯ ಸೇನೆ..!

ಈ ಘಟನೆ ಏಪ್ರಿಲ್ 22ರಂದು ನಡೆದಿದೆ ಎಂದು ಹೇಳಲಾಗಿದೆ. ಈ ಕಾರಿನಲ್ಲಿದ್ದ ಉಪ-ಜಿಲ್ಲಾಧಿಕಾರಿಗಳಾದ ಬಿಲಾಲ್ ಮೋಹಿ-ಆಸ್-ದಿನ್ ಹಾಗೂ ಇತರ ಇಬ್ಬರು ಸಹ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಘಟನೆಯಿಂದಾಗಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಹಿಮಪಾತದಲ್ಲಿ ಸಿಕ್ಕಿಬಿದ್ದ ಉಪಜಿಲ್ಲಾಧಿಕಾರಿ ರಕ್ಷಣೆಗೆ ಧಾವಿಸಿದ ಭಾರತೀಯ ಸೇನೆ..!

ಕಾರನ್ನು ಹೊರತೆಗೆದ ನಂತರ ಸೈನಿಕರು ರಸ್ತೆಯನ್ನು ಸರಿಪಡಿಸಿದರು. ಭಾರತದ ಬಹುತೇಕ ಭಾಗಗಳಲ್ಲಿ ಬಿರು ಬಿಸಿಲು ಉಂಟಾಗಿದ್ದರೆ, ಕಾಶ್ಮೀರದ ಕೆಲವು ಭಾಗಗಳಲ್ಲಿ ಇನ್ನೂ ಹಿಮಪಾತವಾಗುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಹಿಮಪಾತದಲ್ಲಿ ಸಿಕ್ಕಿಬಿದ್ದ ಉಪಜಿಲ್ಲಾಧಿಕಾರಿ ರಕ್ಷಣೆಗೆ ಧಾವಿಸಿದ ಭಾರತೀಯ ಸೇನೆ..!

ಕೆಲ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ ಈ ರೀತಿಯ ಹಿಮಪಾತ ಉಂಟಾಗುತ್ತಿದೆ. ಕಾಶ್ಮೀರದಲ್ಲಿ ಈ ರೀತಿಯ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಈ ಸಂದರ್ಭದಲ್ಲಿಯೇ ಮಹೀಂದ್ರಾದ ಬೊಲೆರೊ ಕಾರು ಹಿಮದಲ್ಲಿ ಸಿಲುಕಿ ಅಪಘಾತಕ್ಕೀಡಾಗಿದೆ.

ಉಪ-ಜಿಲ್ಲಾಧಿಕಾರಿಗಳು ಕರೋನಾ ವೈರಸ್ ಹರಡುವಿಕೆಯ ಬಗ್ಗೆ ಅಧ್ಯಯನ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಿಮ ಕಾರಿನ ಮೇಲೆ ಬಿದ್ದ ಕಾರಣಕ್ಕೆ ಕಾರಿನ ರೂಫ್‌ಗೆ ಹಾನಿಯಾಗಿದ್ದು, ಮುಂಭಾಗದ ವಿಂಡ್ ಷೀಲ್ಡ್ ಚೂರುಚೂರಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಹಿಮಪಾತದಲ್ಲಿ ಸಿಕ್ಕಿಬಿದ್ದ ಉಪಜಿಲ್ಲಾಧಿಕಾರಿ ರಕ್ಷಣೆಗೆ ಧಾವಿಸಿದ ಭಾರತೀಯ ಸೇನೆ..!

ಈ ಘಟನೆಯನ್ನು ಹತ್ತಿರದಿಂದ ನೋಡಿದವರು, ಹಿಮದ ಮೇಲ್ಭಾಗದಲ್ಲಿ ಕಾರು ಸಿಕ್ಕಿಬಿದ್ದ ಕಾರಣಕ್ಕೆ ಕಾರಿನಲ್ಲಿದ್ದವರು ಪಾರಾಗಿದ್ದಾರೆ. ಒಂದು ವೇಳೆ ಅವರ ಕಾರು 500 ಅಡಿ ಆಳದಲ್ಲಿ ಸಿಕ್ಕಿ ಬಿದ್ದಿದ್ದರೆ ದುರ್ಘಟನೆ ನಡೆಯುವ ಸಾಧ್ಯತೆಗಳಿದ್ದವು ಎಂದು ಹೇಳಿದ್ದಾರೆ.

Most Read Articles

Kannada
English summary
Indian Army rescued Sub District Magistrate from Snow. Read in Kannada.
Story first published: Monday, April 27, 2020, 13:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X