Just In
- 6 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 6 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 7 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 7 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!
ಕೈಲಾಶ ಯಾತ್ರೆಗೆ ಅನುಕೂಲವಾಗುವಂತೆ ಚೀನಾದ ಗಡಿಯಲ್ಲಿ ಹೊಸ ರಸ್ತೆಯನ್ನು ನಿರ್ಮಿಸಲಾಗಿದೆ. ಈ ರಸ್ತೆಗಳು ಕೈಲಾಶ್ ತೀರ್ಥಯಾತ್ರೆಯ ಹೊರತಾಗಿ ಭಾರತದ ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಚೀನಾ ದೇಶವು ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯುವುದು ಸಾಮಾನ್ಯ ಸಂಗತಿಯಾಗಿದೆ.
ಈ ಕಾರಣಕ್ಕೆ ಗಡಿ ಭದ್ರತೆಯನ್ನು ಬಲಪಡಿಸಲು ಹಾಗೂ ಯುದ್ಧದ ಸಂದರ್ಭದಲ್ಲಿ ಸೈನ್ಯವನ್ನು ಗಡಿಗೆ ಕರೆತರಲು ಪ್ರಧಾನಿ ಮೋದಿರವರು ಗಡಿಯಲ್ಲಿನ ರಸ್ತೆ ಯೋಜನೆಗಳನ್ನು ತೀವ್ರಗೊಳಿಸಿದ್ದಾರೆ.ಚೀನಾದ ಗಡಿಯನ್ನು ಕೆಲವೇ ಗಂಟೆಗಳಲ್ಲಿ ತಲುಪುವಂತೆ ಈ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ನಿರ್ಮಿಸಲಾದ ಉದ್ದವಾದ ಸೇತುವೆಗಳು ಹಾಗೂ ರಸ್ತೆಗಳನ್ನು ತೆರೆಯಲಾಗುತ್ತಿದೆ.
ಚೀನಾದ ಗಡಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ರಸ್ತೆ ಭಾರತಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ಚೀನಾದ ಗಡಿಯೊಳಗಿರುವ ಕೈಲಾಶ್ ಪರ್ವತಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಈ ರಸ್ತೆ ಹೆಚ್ಚಿನ ಅನುಕೂಲವನ್ನು ಕಲ್ಪಿಸಲಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ
ಗಡಿ ಭದ್ರತೆಗೆ ಹಾಗೂ ಯುದ್ಧದ ಪರಿಸ್ಥಿತಿಯಲ್ಲಿ ಈ ರಸ್ತೆ ಮಿಲಿಟರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಹೇಳಲಾಗಿದೆ. ಈ ಮೊದಲು ಸಿಕ್ಕಿಂ ಅಥವಾ ನೇಪಾಳ ಮೂಲಕ ಚೀನಾದ ಕೈಲಾಶ್ ಮಾನಸರೋವರ್ ತೀರ್ಥಯಾತ್ರೆಗೆ ತೆರಳಬೇಕಾಗಿತ್ತು. ಈ ಮಾರ್ಗಗಳು ಎತ್ತರದ ಪರ್ವತ ಶ್ರೇಣಿಗಳಾಗಿದ್ದವು. ಜೊತೆಗೆ ಯಾತ್ರಾರ್ಥಿಗಳಿಗೆ ಬಹಳ ಅಪಾಯಕಾರಿಯಾಗಿದ್ದವು.
ಹೊಸ ರಸ್ತೆ ಉತ್ತರಾಖಂಡದ ತಾರ್ಚುಲಾದಿಂದ ಚೀನಾದ ಗಡಿಯಲ್ಲಿರುವ ಲಿಪು ಲೇಕ್ ಪಾಸ್ವರೆಗೆ 80 ಕಿ.ಮೀ ದೂರದಲ್ಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ರವರು ಕಳೆದ ಶುಕ್ರವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಈ ರಸ್ತೆಯನ್ನು ಉದ್ಘಾಟಿಸಿದರು.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!
ಹಿಂದೂಗಳು, ಬೌದ್ಧರು ಹಾಗೂ ಜೈನರು ಪ್ರತಿ ವರ್ಷ ಕೈಲಾಶ್-ಮಾನಸರೋವರ್ಗೆ ಯಾತ್ರೆ ಕೈಗೊಳ್ಳುತ್ತಾರೆ. ಸಿಕ್ಕಿಂ ಅಥವಾ ನೇಪಾಳದ ಮೂಲಕ ಸಾಗುತ್ತಿದ್ದ ಮಾರ್ಗವು 2 ರಿಂದ 3 ವಾರಗಳನ್ನು ತೆಗೆದುಕೊಳ್ಳುತ್ತಿತ್ತು. ಈ ಮಾರ್ಗದಲ್ಲಿ ವಯಸ್ಸಾದವರು ತಲುಪುವುದು ಕಷ್ಟಕರವಾಗಿತ್ತು.
ಈ ಹೊಸ ರಸ್ತೆಯು ಈ ಕಷ್ಟವನ್ನು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದೆ. ಹಲವು ಅಡೆತಡೆಗಳನ್ನು ನಿವಾರಿಸಿ ಈ ರಸ್ತೆಯನ್ನು ನಿರ್ಮಿಸಲಾಗಿದೆ. ರಸ್ತೆಯನ್ನು ಕೆಟ್ಟ ಹವಾಮಾನಕ್ಕೂ ಹೊಂದಿಕೊಳ್ಳುವಂತೆ ಕಡಿದಾದ ಬೆಟ್ಟ ಹಾಗೂ ಒರಟು ಬಂಡೆಗಳ ಮೇಲೆ ನಿರ್ಮಿಸಲಾಗಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ
ಈ ಮೊದಲು ಕೈಲಾಶ್-ಮಾನಸರೋವರ್ಗೆ ಯಾತ್ರೆಗೆ ಹೋಗುವವರು 20% ಭಾರತದಲ್ಲಿ ಹಾಗೂ 80% ಚೀನಾದಲ್ಲಿ ಚಲಿಸಬೇಕಿತ್ತು. ಈಗ ಇದು ಉಲ್ಟಾ ಆಗಿದ್ದು, ಇನ್ನು ಮುಂದೆ ಭಾರತದಲ್ಲಿ 80% ಹಾಗೂ ಚೀನಾದಲ್ಲಿ 20% ಚಲಿಸಬೇಕಿದೆ.
ಕೈಲಾಶ್-ಮಾನಸರೋವರ್ ತೀರ್ಥಯಾತ್ರೆಗೆ ಹೋಗುವವರು ವೇಗವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ತಮ್ಮ ತೀರ್ಥಯಾತ್ರೆಯನ್ನು ಪೂರ್ಣಗೊಳಿಸಬಹುದು.
MOSTREAD: ನಟ ವಿಕ್ರಮ್ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್
ಈ ಹೊಸ ರಸ್ತೆಯಲ್ಲಿ ವಾಹನಗಳು 75 ಕಿ.ಮೀವರೆಗೆ ಪ್ರಯಾಣಿಸಬಹುದು. ಉಳಿದ 5 ಕಿ.ಮೀ ಕಾಮಗಾರಿ ಪೂರ್ಣಗೊಂಡಿಲ್ಲದ ಕಾರಣಕ್ಕೆ ನಡೆದುಕೊಂಡು ಸಾಗಬೇಕು. ಈ ಹೊಸ ರಸ್ತೆಯಿಂದಾಗಿ ಸ್ಥಳೀಯ ಗ್ರಾಮಸ್ಥರಿಗೆ ಹೆಚ್ಚು ಅನುಕೂಲವಾಗಲಿದೆ. ಇದರಿಂದಾಗಿ ಗ್ರಾಮೀಣ ಆರ್ಥಿಕತೆ ಸುಧಾರಿಸುವ ಸಾಧ್ಯತೆಗಳಿವೆ.
ಲಿಪು ಸರೋವರದ ಮೂಲಕ ಭಾರತ ಮತ್ತು ಚೀನಾ ನಡುವೆ ವ್ಯಾಪಾರ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ರಸ್ತೆ ಎರಡೂ ದೇಶಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಚೀನಾದೊಂದಿಗೆ ವ್ಯಾಪಾರ ಮಾಡುವುದಾಗಿ ಹೇಳಿಕೊಂಡು ಕೇಂದ್ರ ಸರ್ಕಾರವು ಮಿಲಿಟರಿ ಬಳಕೆಗಾಗಿ ಈ ರಸ್ತೆಯನ್ನು ನಿರ್ಮಿಸಿದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್
ಈ ರಸ್ತೆ ನಿರ್ಮಾಣಕ್ಕೆ ಚೀನಾವು ವಿರೋಧವನ್ನು ವ್ಯಕ್ತಪಡಿಸಿತ್ತು. ಈ ರಸ್ತೆ ನಿರ್ಮಾಣವು ಭಾರತಕ್ಕೆ ರಾಜತಾಂತ್ರಿಕವಾಗಿ ಭಾರತಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಈ ರಸ್ತೆ ನಿರ್ಮಾಣದ ಮೂಲಕ ಭಾರತವು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದಿದೆ.
ಈ ರಸ್ತೆಯಿಂದಾಗಿ ಭಾರತೀಯ ಸೈನಿಕರು ವೇಗವಾಗಿ ಚೀನಾದ ಗಡಿಯನ್ನು ತಲುಪಬಹುದು. ಲಿಪು ಲೇಕ್ ಪಾಸ್ ಭಾರತ, ಚೀನಾ ಮತ್ತು ನೇಪಾಳ ದೇಶಗಳ ನಡುವಿರುವ ಪ್ರಮುಖ ಗಡಿ ಭಾಗವಾಗಿದೆ. ಈ ರಸ್ತೆ ನಿರ್ಮಾಣಕ್ಕೆ ನೇಪಾಳ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.
ಆದರೆ ಭಾರತವು ಈಗಾಗಲೇ ಯಾತ್ರಾರ್ಥಿಗಳು ಬಳಸುತ್ತಿರುವ ಈ ಮಾರ್ಗವನ್ನು ಐತಿಹಾಸಿಕ ದಾಖಲೆಗಳನ್ನು ಆಧಾರದ ಮೇಲೆ ನವೀಕರಿಸಲಾಗಿದೆ ಎಂದು ಹೇಳಿದೆ. ಸಿಕ್ಕಿಂ ಮೂಲಕ ತಲುಪುವ ಮಾರ್ಗ ಸುಮಾರು 2,780 ಕಿ.ಮೀಗಳಾಗುತ್ತದೆ. ಈ ಪೈಕಿ ದೆಹಲಿಯಿಂದ 1,115 ಕಿ.ಮೀ ನಂತರ ರಸ್ತೆ ಮೂಲಕ 1,665 ಕಿ.ಮೀ ಚಲಿಸಬೇಕು. ನೇಪಾಳದ ಮೂಲಕ 1,940 ಕಿ.ಮೀ ಪ್ರಯಾಣಿಸಬೇಕು.
ಆದರೆ ಈಗ ದೆಹಲಿಯಿಂದ ಲಿಪುಲೆಕ್ಗೆ ಹೋಗುವ ರಸ್ತೆಯನ್ನು ಎರಡು ದಿನಗಳಲ್ಲಿ ತಲುಪಬಹುದು. ಈ ರಸ್ತೆಯ ಮೂಲಕ ವಿಮಾನ ಅಥವಾ ಹೆಲಿಕಾಪ್ಟರ್ ಪ್ರಯಾಣವನ್ನು ಸಂಪೂರ್ಣವಾಗಿ ತಪ್ಪಿಸಬಹುದು. ಬಾಕಿಯಿರುವ 5 ಕಿ.ಮೀ ಪೂರ್ಣಗೊಂಡರೆ ಇನ್ನೂ ವೇಗವಾಗಿ ಕೈಲಾಶ್ ಪರ್ವತಕ್ಕೆ ತೀರ್ಥಯಾತ್ರೆಗೆ ತೆರಳಬಹುದು.