ಕೈಲಾಶ ಯಾತ್ರೆಗೆ ಹೋಗುವವರೇ ಗಮನಿಸಿ, ಸಿದ್ದವಾಗಿದೆ ಹೊಸ ಮಾರ್ಗ..!
ಕೈಲಾಶ ಯಾತ್ರೆಗೆ ಅನುಕೂಲವಾಗುವಂತೆ ಚೀನಾದ ಗಡಿಯಲ್ಲಿ ಹೊಸ ರಸ್ತೆಯನ್ನು ನಿರ್ಮಿಸಲಾಗಿದೆ. ಈ ರಸ್ತೆಗಳು ಕೈಲಾಶ್ ತೀರ್ಥಯಾತ್ರೆಯ ಹೊರತಾಗಿ ಭಾರತದ ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಚೀನಾ ದೇಶವು ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯುವುದು ಸಾಮಾನ್ಯ ಸಂಗತಿಯಾಗಿದೆ.

ಈ ಕಾರಣಕ್ಕೆ ಗಡಿ ಭದ್ರತೆಯನ್ನು ಬಲಪಡಿಸಲು ಹಾಗೂ ಯುದ್ಧದ ಸಂದರ್ಭದಲ್ಲಿ ಸೈನ್ಯವನ್ನು ಗಡಿಗೆ ಕರೆತರಲು ಪ್ರಧಾನಿ ಮೋದಿರವರು ಗಡಿಯಲ್ಲಿನ ರಸ್ತೆ ಯೋಜನೆಗಳನ್ನು ತೀವ್ರಗೊಳಿಸಿದ್ದಾರೆ.ಚೀನಾದ ಗಡಿಯನ್ನು ಕೆಲವೇ ಗಂಟೆಗಳಲ್ಲಿ ತಲುಪುವಂತೆ ಈ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ನಿರ್ಮಿಸಲಾದ ಉದ್ದವಾದ ಸೇತುವೆಗಳು ಹಾಗೂ ರಸ್ತೆಗಳನ್ನು ತೆರೆಯಲಾಗುತ್ತಿದೆ.

ಚೀನಾದ ಗಡಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ರಸ್ತೆ ಭಾರತಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ಚೀನಾದ ಗಡಿಯೊಳಗಿರುವ ಕೈಲಾಶ್ ಪರ್ವತಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಈ ರಸ್ತೆ ಹೆಚ್ಚಿನ ಅನುಕೂಲವನ್ನು ಕಲ್ಪಿಸಲಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಗಡಿ ಭದ್ರತೆಗೆ ಹಾಗೂ ಯುದ್ಧದ ಪರಿಸ್ಥಿತಿಯಲ್ಲಿ ಈ ರಸ್ತೆ ಮಿಲಿಟರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಹೇಳಲಾಗಿದೆ. ಈ ಮೊದಲು ಸಿಕ್ಕಿಂ ಅಥವಾ ನೇಪಾಳ ಮೂಲಕ ಚೀನಾದ ಕೈಲಾಶ್ ಮಾನಸರೋವರ್ ತೀರ್ಥಯಾತ್ರೆಗೆ ತೆರಳಬೇಕಾಗಿತ್ತು. ಈ ಮಾರ್ಗಗಳು ಎತ್ತರದ ಪರ್ವತ ಶ್ರೇಣಿಗಳಾಗಿದ್ದವು. ಜೊತೆಗೆ ಯಾತ್ರಾರ್ಥಿಗಳಿಗೆ ಬಹಳ ಅಪಾಯಕಾರಿಯಾಗಿದ್ದವು.

ಹೊಸ ರಸ್ತೆ ಉತ್ತರಾಖಂಡದ ತಾರ್ಚುಲಾದಿಂದ ಚೀನಾದ ಗಡಿಯಲ್ಲಿರುವ ಲಿಪು ಲೇಕ್ ಪಾಸ್ವರೆಗೆ 80 ಕಿ.ಮೀ ದೂರದಲ್ಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ರವರು ಕಳೆದ ಶುಕ್ರವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಈ ರಸ್ತೆಯನ್ನು ಉದ್ಘಾಟಿಸಿದರು.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಹಿಂದೂಗಳು, ಬೌದ್ಧರು ಹಾಗೂ ಜೈನರು ಪ್ರತಿ ವರ್ಷ ಕೈಲಾಶ್-ಮಾನಸರೋವರ್ಗೆ ಯಾತ್ರೆ ಕೈಗೊಳ್ಳುತ್ತಾರೆ. ಸಿಕ್ಕಿಂ ಅಥವಾ ನೇಪಾಳದ ಮೂಲಕ ಸಾಗುತ್ತಿದ್ದ ಮಾರ್ಗವು 2 ರಿಂದ 3 ವಾರಗಳನ್ನು ತೆಗೆದುಕೊಳ್ಳುತ್ತಿತ್ತು. ಈ ಮಾರ್ಗದಲ್ಲಿ ವಯಸ್ಸಾದವರು ತಲುಪುವುದು ಕಷ್ಟಕರವಾಗಿತ್ತು.

ಈ ಹೊಸ ರಸ್ತೆಯು ಈ ಕಷ್ಟವನ್ನು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದೆ. ಹಲವು ಅಡೆತಡೆಗಳನ್ನು ನಿವಾರಿಸಿ ಈ ರಸ್ತೆಯನ್ನು ನಿರ್ಮಿಸಲಾಗಿದೆ. ರಸ್ತೆಯನ್ನು ಕೆಟ್ಟ ಹವಾಮಾನಕ್ಕೂ ಹೊಂದಿಕೊಳ್ಳುವಂತೆ ಕಡಿದಾದ ಬೆಟ್ಟ ಹಾಗೂ ಒರಟು ಬಂಡೆಗಳ ಮೇಲೆ ನಿರ್ಮಿಸಲಾಗಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಈ ಮೊದಲು ಕೈಲಾಶ್-ಮಾನಸರೋವರ್ಗೆ ಯಾತ್ರೆಗೆ ಹೋಗುವವರು 20% ಭಾರತದಲ್ಲಿ ಹಾಗೂ 80% ಚೀನಾದಲ್ಲಿ ಚಲಿಸಬೇಕಿತ್ತು. ಈಗ ಇದು ಉಲ್ಟಾ ಆಗಿದ್ದು, ಇನ್ನು ಮುಂದೆ ಭಾರತದಲ್ಲಿ 80% ಹಾಗೂ ಚೀನಾದಲ್ಲಿ 20% ಚಲಿಸಬೇಕಿದೆ.

ಕೈಲಾಶ್-ಮಾನಸರೋವರ್ ತೀರ್ಥಯಾತ್ರೆಗೆ ಹೋಗುವವರು ವೇಗವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ತಮ್ಮ ತೀರ್ಥಯಾತ್ರೆಯನ್ನು ಪೂರ್ಣಗೊಳಿಸಬಹುದು.
MOSTREAD: ನಟ ವಿಕ್ರಮ್ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಹೊಸ ರಸ್ತೆಯಲ್ಲಿ ವಾಹನಗಳು 75 ಕಿ.ಮೀವರೆಗೆ ಪ್ರಯಾಣಿಸಬಹುದು. ಉಳಿದ 5 ಕಿ.ಮೀ ಕಾಮಗಾರಿ ಪೂರ್ಣಗೊಂಡಿಲ್ಲದ ಕಾರಣಕ್ಕೆ ನಡೆದುಕೊಂಡು ಸಾಗಬೇಕು. ಈ ಹೊಸ ರಸ್ತೆಯಿಂದಾಗಿ ಸ್ಥಳೀಯ ಗ್ರಾಮಸ್ಥರಿಗೆ ಹೆಚ್ಚು ಅನುಕೂಲವಾಗಲಿದೆ. ಇದರಿಂದಾಗಿ ಗ್ರಾಮೀಣ ಆರ್ಥಿಕತೆ ಸುಧಾರಿಸುವ ಸಾಧ್ಯತೆಗಳಿವೆ.

ಲಿಪು ಸರೋವರದ ಮೂಲಕ ಭಾರತ ಮತ್ತು ಚೀನಾ ನಡುವೆ ವ್ಯಾಪಾರ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ರಸ್ತೆ ಎರಡೂ ದೇಶಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಚೀನಾದೊಂದಿಗೆ ವ್ಯಾಪಾರ ಮಾಡುವುದಾಗಿ ಹೇಳಿಕೊಂಡು ಕೇಂದ್ರ ಸರ್ಕಾರವು ಮಿಲಿಟರಿ ಬಳಕೆಗಾಗಿ ಈ ರಸ್ತೆಯನ್ನು ನಿರ್ಮಿಸಿದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಈ ರಸ್ತೆ ನಿರ್ಮಾಣಕ್ಕೆ ಚೀನಾವು ವಿರೋಧವನ್ನು ವ್ಯಕ್ತಪಡಿಸಿತ್ತು. ಈ ರಸ್ತೆ ನಿರ್ಮಾಣವು ಭಾರತಕ್ಕೆ ರಾಜತಾಂತ್ರಿಕವಾಗಿ ಭಾರತಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಈ ರಸ್ತೆ ನಿರ್ಮಾಣದ ಮೂಲಕ ಭಾರತವು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದಿದೆ.

ಈ ರಸ್ತೆಯಿಂದಾಗಿ ಭಾರತೀಯ ಸೈನಿಕರು ವೇಗವಾಗಿ ಚೀನಾದ ಗಡಿಯನ್ನು ತಲುಪಬಹುದು. ಲಿಪು ಲೇಕ್ ಪಾಸ್ ಭಾರತ, ಚೀನಾ ಮತ್ತು ನೇಪಾಳ ದೇಶಗಳ ನಡುವಿರುವ ಪ್ರಮುಖ ಗಡಿ ಭಾಗವಾಗಿದೆ. ಈ ರಸ್ತೆ ನಿರ್ಮಾಣಕ್ಕೆ ನೇಪಾಳ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.

ಆದರೆ ಭಾರತವು ಈಗಾಗಲೇ ಯಾತ್ರಾರ್ಥಿಗಳು ಬಳಸುತ್ತಿರುವ ಈ ಮಾರ್ಗವನ್ನು ಐತಿಹಾಸಿಕ ದಾಖಲೆಗಳನ್ನು ಆಧಾರದ ಮೇಲೆ ನವೀಕರಿಸಲಾಗಿದೆ ಎಂದು ಹೇಳಿದೆ. ಸಿಕ್ಕಿಂ ಮೂಲಕ ತಲುಪುವ ಮಾರ್ಗ ಸುಮಾರು 2,780 ಕಿ.ಮೀಗಳಾಗುತ್ತದೆ. ಈ ಪೈಕಿ ದೆಹಲಿಯಿಂದ 1,115 ಕಿ.ಮೀ ನಂತರ ರಸ್ತೆ ಮೂಲಕ 1,665 ಕಿ.ಮೀ ಚಲಿಸಬೇಕು. ನೇಪಾಳದ ಮೂಲಕ 1,940 ಕಿ.ಮೀ ಪ್ರಯಾಣಿಸಬೇಕು.

ಆದರೆ ಈಗ ದೆಹಲಿಯಿಂದ ಲಿಪುಲೆಕ್ಗೆ ಹೋಗುವ ರಸ್ತೆಯನ್ನು ಎರಡು ದಿನಗಳಲ್ಲಿ ತಲುಪಬಹುದು. ಈ ರಸ್ತೆಯ ಮೂಲಕ ವಿಮಾನ ಅಥವಾ ಹೆಲಿಕಾಪ್ಟರ್ ಪ್ರಯಾಣವನ್ನು ಸಂಪೂರ್ಣವಾಗಿ ತಪ್ಪಿಸಬಹುದು. ಬಾಕಿಯಿರುವ 5 ಕಿ.ಮೀ ಪೂರ್ಣಗೊಂಡರೆ ಇನ್ನೂ ವೇಗವಾಗಿ ಕೈಲಾಶ್ ಪರ್ವತಕ್ಕೆ ತೀರ್ಥಯಾತ್ರೆಗೆ ತೆರಳಬಹುದು.


Click it and Unblock the Notifications