Just In
- 12 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 13 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 14 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 14 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- Movies ಮಂಗಳ ಗ್ರಹದಿಂದ ಬಂದಿದ್ದಾರೆ ಎಂಬಷ್ಟು ವಿಚಿತ್ರ ವ್ಯಕ್ತಿ ರಾಹುಲ್ ಗಾಂಧಿ ; ಕಂಗನಾ ರಣಾವತ್..!
- Sports Hardik Pandya: ಹಾರ್ದಿಕ್ ಪಾಂಡ್ಯರಲ್ಲಿನ ನಾಯಕತ್ವದ ಗುಣಗಳು ಕಾಣೆಯಾಗಿವೆಯಾ?
- Finance ಕಳೆದ 5 ವರ್ಷಗಳಲ್ಲಿ ಸಂಸದ ಡಿಕೆ ಸುರೇಶ್ ಅವರ ಆಸ್ತಿ 75% ರಷ್ಟು ಹೆಚ್ಚಳ, ವಿವರ
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಲಸೆ ಕಾರ್ಮಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿರುವ ಖದೀಮರು
ನಿಮ್ಮ ಸೈಕಲ್ ಅನ್ನು 3,000 ಸಾವಿರ ರೂಪಾಯಿಗೆ ಮಾರಾಟ ಮಾಡಿ, ನೀವು ಸೈಕಲ್ನಲ್ಲಿಯೇ ಮುಂದೆ ಹೋದರೆ ಪೊಲೀಸರು ನಿಮ್ಮ ಸೈಕಲ್ ಅನ್ನು ವಶಪಡಿಸಿಕೊಳ್ಳುತ್ತಾರೆ. ಈ ರೀತಿ ಹೆದರಿಸಿ ವಲಸೆ ಕಾರ್ಮಿಕರನ್ನು ಸುಲಿಗೆ ಮಾಡಲಾಗುತ್ತಿದೆ.
ಅಂದ ಹಾಗೆ ಜಾರ್ಖಂಡ್ನಿಂದ ಆಂಧ್ರಪ್ರದೇಶದ ಕಡೆಗೆ ಸೈಕಲ್ನಲ್ಲಿ ಹೋಗುತ್ತಿರುವ ವಲಸೆ ಕಾರ್ಮಿಕರನ್ನು ಈ ರೀತಿ ಹೆದರಿಸುತ್ತಿರುವ ಖದೀಮರು ಅವರ ಬಳಿಯಿರುವ ಸೈಕಲ್ಗಳನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಗ್ರ್ಯಾಂಡ್ ನಾರ್ದರ್ನ್ ಟ್ರಂಕ್ (ಜಿಎನ್ಟಿ) ರಸ್ತೆಯಲ್ಲಿ ಹೋಗುವ ವಲಸೆ ಕಾರ್ಮಿಕರಿಗೆ ಈ ರೀತಿ ಬೆದರಿಸಿ ಅವರ ಬಳಿಯಿರುವ ಸೈಕಲ್ಗಳನ್ನು ಕೊಂಡುಕೊಳ್ಳುತ್ತಿದ್ದಾರೆ.
ಕೆಲವು ಮಾಹಿತಿಗಳ ಪ್ರಕಾರ, ಖದೀಮರ ಗುಂಪೊಂದು ಜಿಎನ್ಟಿ ರಸ್ತೆಯ ಪಂಜೆಟ್ಟಿ ಬಳಿ ಜಾರ್ಖಂಡ್ನಿಂದ ವಲಸೆ ಬಂದ ಕಾರ್ಮಿಕರೊಂದಿಗೆ ಈ ರೀತಿಯಾಗಿ ವ್ಯವಹಾರ ಕುದುರಿಸುತ್ತಿದೆ. ಈ ಬಗ್ಗೆ ಸಂಜಯ್ ಮಹತೋ ಎಂಬ ವಲಸೆ ಕಾರ್ಮಿಕ ಮಾಹಿತಿ ನೀಡಿದ್ದಾನೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!
ಈ ಬಗ್ಗೆ ಮಾತನಾಡಿರುವ ಆತ ನಮ್ಮ ಊರಿಗೆ ತಲುಪಲು ರೂ.5,000 ನೀಡಿ ಸೈಕಲ್ ಖರೀದಿಸಿದ್ದೇನೆ. ಆದರೆ ವ್ಯಕ್ತಿಯೊಬ್ಬ ನನ್ನನ್ನು ತಡೆದು ನನ್ನ ಸೈಕಲ್ ಅನ್ನು ರೂ.3,000ಕ್ಕೆ ಮಾರಾಟ ಮಾಡುವಂತೆ ಕೇಳಿದ ಎಂದು ಹೇಳಿದ್ದಾನೆ.
ಶೋಲವರಂನ ಸಬ್ ಇನ್ಸ್ಪೆಕ್ಟರ್ ನಮ್ಮ ಸೈಕಲ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬರುತ್ತಿದ್ದಾರೆ ಎಂದು ಹೇಳುವ ಆ ಗುಂಪು ಪೊಲೀಸರು ಬರುವ ಮೊದಲು ನಮ್ಮ ಸೈಕಲ್ಗಳನ್ನು ಮಾರಾಟ ಮಾಡಬೇಕೆಂದು ಹೇಳುತ್ತಾರೆ ಎಂದು ಆತ ಹೇಳಿದ್ದಾನೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದಿರುವ ತಿರುವಳ್ಳೂರು ಜಿಲ್ಲಾಡಳಿತವು ಕಾರ್ಮಿಕರನ್ನು ರಕ್ಷಿಸಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ
ಜಿಲ್ಲಾಡಳಿತವು ಈ ವಲಸೆ ಕಾರ್ಮಿಕರನ್ನು ಪಾಡಿಯಾನಲ್ಲೂರಿನಲ್ಲಿ ನಿರ್ಮಿಸಿರುವ ನಿರಾಶ್ರಿತ ಮನೆಗಳಿಗೆ ಕರೆದೊಯ್ಯಿದೆ. ಈ ಬಗ್ಗೆ ಮಾತನಾಡಿರುವ ಅಧಿಕಾರಿಯೊಬ್ಬರು ಈ ಕಾರ್ಮಿಕರನ್ನು ಶೀಘ್ರದಲ್ಲೇ ಅವರ ಮನೆಗಳಿಗೆ ತಲುಪಿಸಲಾಗುವುದು ಎಂದು ಹೇಳಿದರು.
ಪೊನ್ನರಿಯ ಎಎಸ್ಪಿ ಪವನ್ ಕುಮಾರ್ ರೆಡ್ಡಿರವರು ಮಾತನಾಡಿ, ಖದೀಮರು ಕಾರ್ಮಿಕರಿಗೆ ಮೋಸ ಮಾಡುವುದನ್ನು ತಪ್ಪಿಸಲು ಪೊಲೀಸ್ ಪಡೆಯು ಹೈವೇಯಲ್ಲಿ ಗಸ್ತು ತಿರುಗಲಿದೆ ಎಂದು ಹೇಳಿದರು.
ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ಗಾಗಿ ಬಳಸಲಾಗಿದೆ.