ಬೆಂಗಳೂರಿನಲ್ಲಿ ದೇಶದ ಚೊಚ್ಚಲ ಏರ್ ಆಂಬುಲೆನ್ಸ್ ಸೇವೆ
ದೇಶದಲ್ಲಿ ಇದೇ ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ ಏರ್ ಆಂಬುಲೆನ್ಸ್ ಸೇವೆಯನ್ನು ಆರಂಭಿಸಲಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಹಾಗೂ ಶಿಪ್ರ ಗತಿಯಲ್ಲಿ ಆಸ್ಪತ್ರೆಗೆ ಸಾಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಏರ್ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಚೊಚ್ಚಲ ಏರ್ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು.

ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಏರ್ ಅಂಬುಲೆನ್ಸ್ ಹೆಲಿಕಾಪ್ಟರನ್ನು ಸೇವೆಗೆ ಮುಕ್ತಗೊಳಿಸಲಾಯಿತು.

ಏವಿಯೇಟರ್ಸ್ ಏರ್ ರೆಸ್ಕ್ಯೂ ಲಿಮಿಟೆಡ್ ಸಂಸ್ಥೆಯು ಏರ್ ಆಂಬುಲೆನ್ಸ್ ಸೇವೆಯನ್ನು ನೀಡಲಿದೆ. ಇದು ದಕ್ಷಿಣ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ.

ಪ್ರಸ್ತುತ ಸಂಸ್ಥೆಯು ಬೆಂಗಳೂರು ಹೊರತಾಗಿ ಚೆನ್ನೈ ಹಾಗೂ ಹೈದರಾಬಾದ್ ನಗರಗಳಿಗೂ ತನ್ನ ವ್ಯಾಪ್ತಿಯನ್ನು ಹರಿಸಿದೆ.

ಇದಕ್ಕಾಗಿ ಏರ್ ಬಸ್ ಎಚ್130 ಹೆಲಿಕಾಪ್ಟರನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನು ಇಬ್ಬರು ಪೈಲಟ್ ಗಳು ನಿರ್ವಹಿಸಲಿದ್ದಾರೆ.

ಇದರ ಹೊರತಾಗಿ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಮೂವರು ಅರೆ ವೈದ್ಯಕೀಯ ಸಿಬ್ಬಂದಿ, ಒಂದು ಕೈಮಂಚ ಮತ್ತು ಐಸಿಯು ಸೌಲಭ್ಯಗಳು ಇರಲಿದೆ.

ಏರ್ ಆಂಬುಲೆನ್ಸ್ ಸೇವೆಗಳು ವಿಶ್ವದ್ಯಾಂತ ಜೀವ ರಕ್ಷಕ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದು ತುರ್ತು ಸಂದರ್ಭದಲ್ಲಿ ಬಹಳ ವೇಗವಾಗಿ ವೈದ್ಯಕೀಯ ತಂಡವು ರೋಗಿಗಳನ್ನು ತಲುಪಿ ಚಿಕಿತ್ಸೆ ಕೊಡಿಸಲು ನೆರವಾಗುತ್ತದೆ.

ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯ ವೈದ್ಯಕೀಯ ಪರಿಕರಗಳನ್ನು ಇದು ಹೊಂದಿರಲಿದೆ. ಬಳಿಕ ಅತಿ ಹತ್ತಿರದ ಆಸ್ಪತ್ರೆಗೆ ತಲುಪಿಸಲು ನೆರವಾಗಲಿದೆ.

ರಸ್ತೆಯಲ್ಲಿ ಸಂಚರಿಸುವ ಆಂಬುಲೆನ್ಸ್ ಗಿಂತಲೂ ಏರ್ ಆಂಬುಲೆನ್ಸ್ ಹೆಚ್ಚು ಸುರಕ್ಷಿತ ಹಾಗೂ ವೇಗವಾಗಿ ಆಸ್ಪತ್ರೆಯನ್ನು ತಲುಪುವ ಮೂಲಕ ಅಮೂಲ್ಯ ಜೀವವನ್ನು ಉಳಿಸಲಿದೆ.

ಏರ್ ಬಸ್ ಎಚ್130
ದೊಡ್ಡದಾದ ಕ್ಯಾಬಿನ್ ಜಾಗ
ವೈದಕೀಯ ಉಪಕರಣ
ಕಡಿಮೆ ಶಬ್ದ ಮಾಲಿನ್ಯ
ಅತ್ಯುತ್ತಮ ಗೋಚರತೆ - ಪೈಲಟ್ ಗಳಿಗೆ 180 ಡಿಗ್ರಿ

ಏರ್ ಬಸ್ ಎಚ್130
ಆಕ್ಟಿವ್ ವೈಬ್ರೇಷನ್ ಕಂಟ್ರೋಲ್ ಸಿಸ್ಟಂ
ಸುಲಭವಾಗಿ ಕ್ಯಾಬಿನ್ ನಿರ್ವಹಣೆ
ಕೈಮಂಚ ಸೌಲಭ್ಯ
ಕಡಿಮೆ ನಿರ್ವಹಣೆ ವೆಚ್ಚ
ಸುಸಜ್ಜಿತವಲ್ಲದ ಭೂಪ್ರದೇಶದಲ್ಲೂ ಲ್ಯಾಂಡಿಂಗ್


Click it and Unblock the Notifications