12ನೇ ತರಗತಿಯಲ್ಲಿ ಅನುತ್ತೀರ್ಣನಾದರೂ ಕಾಲೇಜಿಗೆ ಟಾಪರ್ ಆದ ಆಟೋ ಚಾಲಕನ ಯಶೋಗಾಥೆಯಿದು
ಕೇರಳದ ತ್ರಿಶೂರ್ ಮೂಲದ ಅಭಿಲಾಶ್ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದಾರೆ. ಅವರ ಪಕ್ಕದ ಮನೆಯವರು ಕೇರಳದ ವರ್ಮಾ ಕಾಲೇಜಿನಿಂದ ಅವರ ಮಗಳು ಪದವಿ ತರಗತಿಗೆ ಸೇರಲು ಅರ್ಜಿ ತರುವಂತೆ ಕೇಳಿಕೊಂಡರು.

ಆದರೆ ಆ ಹುಡುಗಿ ಹನ್ನೆರಡನೇ ತರಗತಿಯಲ್ಲಿ ಅನುತ್ತೀರ್ಣಳಾಗಿದ್ದಳು. ಆ ಅರ್ಜಿಯಿಂದ ಬೇರೆಯವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಆ ಅರ್ಜಿಯನ್ನು ಅಭಿಲಾಶ್'ರವರಿಗೆ ನೀಡಿದ್ದಾರೆ. ಅಭಿಲಾಶ್ ತಮಾಷೆಗಾಗಿ ಆ ಅರ್ಜಿಯನ್ನು ಭರ್ತಿ ಮಾಡಿ ಕಾಲೇಜಿಗೆ ಸಲ್ಲಿಸಿದ್ದರು.

ಇದು ಅವರ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಆಯಿತು. ಅವರು ಬಿಎ ಪದವಿಗೆ ಸೇರಿಕೊಂಡರು. ಬಿಎ ಫಿಲಾಸಫಿಯಲ್ಲಿ 88%ನಷ್ಟು ಅಂಕಗಳನ್ನು ಗಳಿಸಿ ಉತ್ತೀರ್ಣರಾದರು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅವರು 10 ಹಾಗೂ 12ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂಬುದು ಗಮನಾರ್ಹ. 88% ಅಂಕ ಗಳಿಸಿ ಅವರು ಇಡೀ ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದರು. ಈ ಸಾಧನೆಗಾಗಿ ಅವರು ಪ್ರೊಫೆಸರ್ ಶಂಕರನ್ ನಂಬಿಯಾರ್ ಪ್ರಶಸ್ತಿ ಹಾಗೂ ಶ್ಯಾಮ್ ಸ್ಮಾರಕ ಟಾಪರ್ ಎಂಡೋಮೆಂಟ್ ಪ್ರಶಸ್ತಿಗಳನ್ನು ಗೆದ್ದರು.

ಇದರ ಜೊತೆಗೆ ಅವರು ಬಿ.ಎಡ್ ಕೋರ್ಸ್'ನಲ್ಲಿ 100% ಹಾಜರಾತಿಯ ಮೂಲಕ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆದಾಯಕ್ಕಾಗಿ ರಾತ್ರಿ ವೇಳೆಯಲ್ಲಿ ಆಟೋ ಚಾಲನೆ ಮಾಡುತ್ತಿದ್ದ ಅವರು ಹಗಲಿನಲ್ಲಿ ಕಾಲೇಜಿಗೆ ಹೋಗುತ್ತಿದ್ದರು ಎಂಬುದು ಗಮನಾರ್ಹ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅವರು ಬೋಧನಾ ವೃತ್ತಿಯ ಜೊತೆಗೆ ಥೈಕ್ಕಟ್ಟುಸೇರಿ ಎಂಬ ಪ್ರದೇಶದಲ್ಲಿ ಆಟೋ ಚಾಲನೆ ಮಾಡುತ್ತಿದ್ದರು. ಕೋವಿಡ್ 19 ಹಿನ್ನೆಲೆಯಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳುಮುಚ್ಚಲ್ಪಟ್ಟಿರುವುದರಿಂದ ಅಭಿಲಾಶ್ ಈಗ ಪೂರ್ಣ ಪ್ರಮಾಣದ ಆಟೋ ಚಾಲಕರಾಗಿದ್ದಾರೆ.

ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಜಯಗಳಿಸಿದ್ದರು. ಈ ಮೂಲಕ ತಾವೊಬ್ಬ ಬಹುಮುಖ ಪ್ರತಿಭೆ ಎಂದು ಸಾಬೀತು ಪಡಿಸಿದ್ದಾರೆ. ಅಭಿಲಾಶ್ ಓಪನ್ ಸ್ಕೂಲ್ ಮೂಲಕ 22ನೇ ವಯಸ್ಸಿನಲ್ಲಿ 12ನೇ ತರಗತಿ ಪೂರ್ಣಗೊಳಿಸಿದರು ಎಂಬುದು ಗಮನಾರ್ಹ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬಡ ಕುಟುಂಬದ ಹಿನ್ನೆಲೆಯಿಂದಾಗಿ ಅವರು ಆಟೋ ಚಾಲಕರಾದರು. ಆದರೂ ಅವರು ತಮ್ಮ ಅಧ್ಯಯನವನ್ನು ನಿಲ್ಲಿಸದೆ ಮುಂದುವರಿಸಿದರು. ಅಭಿಲಾಶ್ ವಿವಿಧ ವೃತ್ತಿಗಳನ್ನು ನಿರ್ವಹಿಸಿದ್ದಾರೆ.

ಅವರು ಜಾನಪದ ಗಾಯನ, ಸಂಗೀತ ವಾದ್ಯ, ಪಾದ್ರಿ, ಫುಟ್ಬಾಲ್, ಬಸ್ ಶುಚಿಗೊಳಿಸುವಿಕೆ, ರಾತ್ರಿ ಶಾಲೆ ಹಾಗೂ ಕ್ರೇನ್ ಆಪರೇಟರ್ ಕೆಲಸಗಳನ್ನು ಮಾಡಿ ಆದಾಯ ಗಳಿಸುತ್ತಿದ್ದಾರೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈಗ ಪೂರ್ಣ ಪ್ರಮಾಣದ ಆಟೋ ಚಾಲಕರಾಗಿದ್ದಾರೆ. ಅವರು ಸದ್ಯಕ್ಕೆ ತ್ರಿಶೂರಿನಲ್ಲಿರುವ ಕೇಂದ್ರದಲ್ಲಿ ಪಿಜಿಡಿಸಿಎ ಅರೆಕಾಲಿಕ ಅಧ್ಯಯನ ನಡೆಸುತ್ತಿದ್ದಾರೆ ಎಂಬುದು ಗಮನಾರ್ಹ. ಈ ಬಗ್ಗೆ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.


Click it and Unblock the Notifications