Just In
- 21 min ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- 1 hr ago ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- 2 hrs ago Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- 3 hrs ago ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
Don't Miss!
- News ಮೋದಿ, ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬರುತ್ತಾರೆ: ಸಿದ್ದರಾಮಯ್ಯ ಗರಂ
- Lifestyle ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Movies Sathya : ತಾಜ್ ಮಹಲ್ ಎದುರು ನಿಂತ ಸತ್ಯಾ, ಪತಿ ಜೊತೆ ಗೌತಮಿ ಪ್ರವಾಸ...!
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟೋಲ್ ಪ್ಲಾಜಾಗೆ ಲಾರಿ ಡಿಕ್ಕಿ: ಜೀವದ ಹಂಗು ತೊರೆದು ಸಿಬ್ಬಂದಿಯನ್ನು ರಕ್ಷಿಸಿದ ಮಹಿಳೆ
ಕಳೆದ ವಾರ ಉತ್ತರಾಖಂಡದ ಡೆಹ್ರಾಡೂನ್ನ ಟೋಲ್ ಬೂತ್ಗೆ ವೇಗವಾಗಿ ಬಂದ ಟ್ರಕ್ವೊಂದು ಡಿಕ್ಕಿ ಹೊಡೆದಿದ್ದು, ಟೋಲ್ ಬೂತ್ ಒಳಗಿದ್ದ ವ್ಯಕ್ತಿಯನ್ನು ಮಹಿಳೆಯೊಬ್ಬರು ರಕ್ಷಿಸಿದ್ದಾರೆ. ಈ ಘಟನೆ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಟೋಲ್ ಗೇಟ್ ದಾಟಲು ಕಾಯುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಲಾರಿ ಟೋಲ್ ಬೂತ್ಗೆ ಅಪ್ಪಳಿಸಿದೆ. ಅಪಘಾತವಾದ ಕೆಲವು ಸೆಕೆಂಡುಗಳ ನಂತರ, ಮಹಿಳೆಯೊಬ್ಬರು ಟೋಲ್ ಬೂತ್ ಕೆಲಸಗಾರನನ್ನು ಸುರಕ್ಷಿತವಾಗಿ ಹೊರ ಕರೆತರಲು ಬೂತ್ ಕಡೆಗೆ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಶನಿವಾರ ಮಧ್ಯಾಹ್ನ 2:36 ಗಂಟೆಗೆ ದೋಯಿವಾಲಾದ ಲಾಚಿವಾಲಾ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಸಿಮೆಂಟ್ ತುಂಬಿದ್ದ ಟ್ರಕ್ ಟೋಲ್ ಪ್ಲಾಜಾಕ್ಕೆ ಡಿಕ್ಕಿ ಹೊಡೆದು ಉರುಳಿದ ನಂತರ ಗಾಯಗೊಂಡ ಟೋಲ್ ಬೂತ್ನಲ್ಲಿದ್ದ ವ್ಯಕ್ತಿಯನ್ನು ಮಹಿಳೆ ರಕ್ಷಿಸಿದ್ದಾಳೆ. ಬಳಿಕೆ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.
ध्यान से देखें. देहरादून के टोल प्लाजा दुर्घटना में एक युवती ने अपनी जान की परवाह किये बगैर बूथ के अंदर मौजूद कर्मी को दौड़कर बचाया. pic.twitter.com/qZmn5BJZwu
— Awanish Sharan (AwanishSharan) July 24, 2022
ಭಾನುವಾರ ಹಂಚಿಕೊಂಡ 19 ಸೆಕೆಂಡುಗಳ ಈ ವಿಡಿಯೋ ಟ್ವಿಟರ್ನಲ್ಲಿ 2,97,600 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. "ಎಚ್ಚರಿಕೆಯಿಂದ ನೋಡಿ, ಡೆಹ್ರಾಡೂನ್ನ ಟೋಲ್ ಪ್ಲಾಜಾ ಅಪಘಾತದಲ್ಲಿ ಯುವತಿಯೊಬ್ಬಳು ತನ್ನ ಪ್ರಾಣವನ್ನು ಲೆಕ್ಕಿಸದೆ ಬೂತ್ನೊಳಗೆ ಧಾವಿಸಿ ಟೋಲ್ ಪ್ಲಾಜಾ ಕೆಲಸಗಾರನನ್ನು ಉಳಿಸಿದ್ದಾಳೆ "ಎಂದು ಶರಣ್ ಕ್ಲಿಪ್ಗೆ ಹಿಂದಿಯಲ್ಲಿ ಶೀರ್ಷಿಕೆ ನೀಡಿದ್ದಾರೆ.
ಮಹಿಳೆ ತನ್ನ ತ್ವರಿತ ಪ್ರತಿಕ್ರಿಯೆಗೆ ಟ್ವಿಟರ್ನಲ್ಲಿ ಪ್ರಶಂಸೆಗಳ ಸುರಿಮಳೆ ವ್ಯಕ್ತವಾಗುತ್ತಿದೆ. ಟ್ವಿಟ್ಟರ್ ಬಳಕೆದಾರರು ಮಹಿಳೆಯ ಸಾಹಸಕ್ಕೆ ಮೆಚ್ಚಿ ಆಕೆಯ ಸಮಯ ಸ್ಪೂರ್ತಿಯನ್ನು ಹೊಗಳುತ್ತಿದ್ದಾರೆ. "ನಿಜವಾಗಿಯೂ ತ್ವರಿತ ಪ್ರತಿಕ್ರಿಯೆ ಮತ್ತು ಕೆಚ್ಚೆದೆಯ ಧೈರ್ಯಕ್ಕೆ ಆಕೆಗೆ ಬಹುಮಾನ ನೀಡಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ.
ಅಪಘಾತಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ, ಆದರೆ ವಿಡಿಯೋವನ್ನು ಗಮನಿಸಿದರೆ ಲಾರಿ ಚಾಲಕ ಕಾರನ್ನು ಉಳಿಸಲು ಪ್ರಯತ್ನಿಸುವ ಬರದಲ್ಲಿ ಟೋಲ್ ಬೂತ್ಗೆ ಡಿಕ್ಕಿ ಹೊಡೆದಿದ್ದಾನೆ ಎಂಬುದು ಗೊತ್ತಾಗುತ್ತಿದೆ. ಕಾರಿಗೆ ಡಿಕ್ಕಿ ಹೊಡೆದಿದ್ದರೆ ಕಾರಿನಲ್ಲಿದ್ದ ಕುಟುಂಬಕ್ಕೆ ಭಾರೀ ಹಾನಿಯಾಗುತ್ತಿತ್ತು. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಹಾನಿಯಾಗಿಲ್ಲ.
ಉಡುಪಿಯಲ್ಲಿ ಟೋಲ್ಪ್ಲಾಜಾಗೆ ಆ್ಯಂಬುಲನ್ಸ್ ಡಿಕ್ಕಿ
ಕಳೆದ ಬುಧವಾರ ಉಡುಪಿ ಜಿಲ್ಲೆಯ ಬೈಂದೂರು-ಶಿರೂರು ಟೋಲ್ ಪ್ಲಾಜಾ ಬಳಿ ಆ್ಯಂಬುಲೆನ್ಸ್ ಚಾಲಕ ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಟೋಲ್ ಪ್ಲಾಜಾಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿದ್ದರು.
ಟೋಲ್ ಪ್ಲಾಜಾ ರಸ್ತೆಯ ಮಧ್ಯದಲ್ಲಿ ಹಸುವೊಂದು ಮಲಗಿತ್ತು, ಇದೇ ವೇಳೆ ಆ್ಯಂಬುಲನ್ಸ್ ಟೋಲ್ ಪ್ಲಾಜಾಗೆ ಸಮೀಪಿಸುತ್ತಿದ್ದಂತೆ ಅಲ್ಲಿನ ಟೋಲ್ ಸಿಬ್ಬಂದಿ ಹಸುವನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಾರೆ. ಮತ್ತೊಬ್ಬ ಸಿಬ್ಬಂದಿ ಆಂಬ್ಯುಲೆನ್ಸ್ನ ಸುಗಮ ಮಾರ್ಗಕ್ಕಾಗಿ ಲೇನ್ನ ಒಂದು ಬದಿಯಲ್ಲಿ ಹಾಕಲಾದ ಬ್ಯಾರಿಕೇಡ್ ಅನ್ನು ತೆಗೆದುಹಾಕಲು ಪ್ರಯತ್ನಿಸುತ್ತಾನೆ.
ಆದರೆ ಮಳೆಯಿಂದ ಒದ್ದೆಯಾಗಿದ್ದ ರಸ್ತೆಯಿಂದ ಆಂಬ್ಯುಲೆನ್ಸ್ ನಿಯಂತ್ರಣ ಕಳೆದುಕೊಂಡು ಬ್ರೇಕ್ಸ್ ಕೂಡ ಕೆಲಸ ಮಾಡದ ಕಾರಣ ಹಸುವಿಗೆ ಡಿಕ್ಕಿಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಟೋಲ್ಗೆ ಡಿಕ್ಕಿಹೊಡೆದಿದೆ. ಅಪಘಾತದ ರಭಸಕ್ಕೆ ಮೂರು ಜನರು ವಾಹನದಿಂದ ಹೊರಗೆ ಎಸೆಯಲ್ಪಟ್ಟಿದ್ದಾರೆ, ದೃಶ್ಯದ ಪ್ರಕಾರ ಹಸು ಕೂಡ ಪವಾಡಸದೃಶವಾಗಿ ಪಾರಾಗಿ ಅಪಘಾತದ ಸ್ಥಳದಿಂದ ದೂರ ಹೋಗುತ್ತದೆ.
ಅಂಬ್ಯುಲೆನ್ಸ್ನಂತಹ ತುರ್ತು ವಾಹನಗಳಿಗೆ ಗೇಟ್ಗಳಿರುತ್ತವೆ, ನಾನು ಎದುರಿಗೆ ಬಂದಾಗ ಸಿಬ್ಬಂದಿ ಬ್ಯಾರಿಕೇಡ್ಗಳನ್ನು ತೆಗೆದರಾದರೂ ರಸ್ತೆಯ ಮಧ್ಯದಲ್ಲಿದ್ದ ಹಸುವನ್ನು ನೋಡಿ ಬ್ರೇಕ್ ಹಾಕಿದೆ. ಆದರೆ ವಾಹನ ಸ್ಕಿಡ್ ಆಗಿ ಉರುಳಿತು ಎಂದು ಗಾಯಗೊಂಡಿರುವ ಆಂಬ್ಯುಲೆನ್ಸ್ ಚಾಲಕ ರೋಶನ್ ರೋಡ್ರಿಗಸ್ ಹೇಳಿದ್ದಾನೆ.
ಗಜಾನನ ನಾಯಕ್ (55) ಎಂಬ ರೋಗಿಯನ್ನು ತನ್ನ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಹೊನ್ನಾವರದಿಂದ ಕುಂದಾಪುರ ಆಸ್ಪತ್ರೆಗೆ ಅಂಬ್ಯುಲೆನ್ಸ್ನಲ್ಲಿ ಸಾಗಿಸುವಾಗ ಸಂಜೆ 4.07 ರ ಸುಮಾರಿಗೆ ಶಿರೂರು ಟೋಲ್ ಗೇಟ್ ಬಳಿ ಈ ಘಟನೆ ಸಂಭವಿಸಿದೆ. ನಾಯಕ್ ಮತ್ತು ಆಂಬುಲೆನ್ಸ್ನಲ್ಲಿದ್ದ ಇತರ ಮೂವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಹೈವೇಗಳಲ್ಲಿ ಟೋಲ್ ಪ್ಲಾಜಾ ಸಮೀಸುತ್ತಿದೆ ಎಂದು ಬೋರ್ಡ್ಗಳು ಕಂಡರೂ ಹಲವರು ವಾಹನಗಳ ವೇಗವನ್ನು ಕಡಿಮೆ ಮಾಡುವುದಿಲ್ಲ. ಇದರಿಂದಾಗಿ ಹಲವು ಅಪಘಾತಗಳು ಟೋಲ್ ಪ್ಲಾಜಾ ಬಳಿ ನಡಿಯುತ್ತಿವೆ. ಅಲ್ಲದೇ ಪ್ರಾಣಿಗಳು ಟೋಲ್ ಪ್ಲಾಜಾಗಳ ಸುತ್ತಮುತ್ತ ಸುಳಿಯದಂತೆ ನೋಡಿಕೊಳ್ಳಬೇಕು. ಈ ಹಿಂದೆಯೂ ಇಂತಹ ಅಪಘಾತಗಳಲ್ಲಿ ಟೋಲ್ ಪ್ಲಾಜಾಗಳ ಸಿಬ್ಬಂದಿ ಗಾಯಗೊಂಡಿದ್ದಾರೆ. ಕೇಂದ್ರ ರಸ್ತೆ, ಸಾರಿಗೆ ಇಲಾಖೆ ಈ ಕುರಿತು ಕಟ್ಟುನಿಟ್ಟಾದ ಕ್ರಮ ಕೈಗಳ್ಳಬೇಕಿದೆ.