Just In
- 3 hrs ago ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- 4 hrs ago Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
- 5 hrs ago Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 7 hrs ago 150KM ರೇಂಜ್, ಸುರಕ್ಷತೆಯ ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ: ಹೆಚ್ಚು ಲಾಭ
Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Movies Amruthadhaare ; ಅತ್ತೆ ಉಲ್ಟಾ ಸೀರೆ ಉಡುತ್ತಿರುವುದು ಸೊಸೆಗೆ ಗೊತ್ತಾಗುತ್ತಿಲ್ವಾ..? ವೀಕ್ಷಕರಲ್ಲಿ ಹೆಚ್ಚಿದ ಗೊಂದಲ
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರು ಮಾಲೀಕ ಮಾಡಿದ ತಪ್ಪಿನಿಂದಾಗಿ ಮಗುವಿನ ಪ್ರಾಣವೇ ಹೋಗುತ್ತಿತ್ತು..!
ಹಿಂದಿನ ತಲೆಮಾರಿನಲ್ಲಿ ತಂದೆ ತಾಯಂದಿರು ತಮ್ಮ ಮಕ್ಕಳ ಪಾಲಯನ್ನೆ ದೊಡ್ಡ ವಿಷಯವನ್ನಾಗಿ ಇಟ್ಟುಕೊಂಡು, ಜೋಪಾನವಾಗಿ ತಮ್ಮ ಮಕ್ಕಳನು ಬೇಳೆಸುತ್ತಿದ್ದರು. ಆದರೆ ಈಗಿನ ತಲೆಮಾರಿನ ಕೆಲ ಪೋಷಕರಿಗೆ ಮಗುವಿನ ಪಾಲನೆಯ ಬಗ್ಗೆ ಅರಿವೆ ಇಲ್ಲದಂತಾಗಿ ಹೋಗಿದೆ.
ಇದಕ್ಕೆ ಕಾರಣ ಹಿಂದಿನ ತಲೆಮಾರಿನಲ್ಲಿದ್ದ ಪೋಷಕರು ತಮ್ಮ ಮಕ್ಕಳಿಗೆ ಮಗುವಾದ ನಂತರ ಅವರನ್ನು ಹೇಗೆ ನೋಡಿಕೊಳ್ಳಬೇಕು ಎಂಬ ವಿಚಾರವನ್ನು ಕಲಿಸಿಕೊಡದೆಯೆ ಸುಮ್ಮನಾಗಿದ್ದಾರೆ. ಈ ನಿಟ್ಟಿನಲ್ಲಿ ದೇಶದಲ್ಲಿನ ಹಲವಾರು ನಗರಗಳಲ್ಲಿ ಮಕ್ಕಳ ಪೋಷಣೆಯನ್ನು ಹೇಗೆ ಮಾಡಬೇಕು ಎಂದು ತಿಳಿಸಲು ತರಬೇತಿ ಸಂಸ್ಥೆಗಳು ಕೂಡಾ ಆರಂಭಿಸಿ ಅವರ ವ್ಯವಹಾರವನ್ನು ಕೂಡಾ ಶುರು ಮಾಡಿಕೊಂಡಿದ್ದಾರೆ.
ಹಬ್ಬದ ಋತುವಿನಲ್ಲಿ ಕುಟುಂಬದೊಡನೆ ಶಾಪಿಂಗ್ಗೆ ಹೋಗಲು ಎಲ್ಲರಿಗು ಆಸಕ್ತಿ ಇರುತ್ತದೆ. ಆದರೆ ಶಿಶುವಿನೊಡನೆ ಶಾಪಿಂಗ್ಗೆ ಹೋಗಲು ಈಗಲೂ ಸಹ ಹಲವರು ಚಿಂತಿಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ತುಂಬಿರುವ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಮಗುವನ್ನು ಸಂಬಾಳಿಸುವು ಕಷ್ಟಕರವೆಂದು.
ಹೀಗಾಗಿ ಬಹಳಷ್ಟು ಜನ ಪೋಷಕರು ತಮ್ಮ ಮಕ್ಕಳನ್ನು ನೋಡಿಕೊಳ್ಳುವುದ್ದಕೆಂದೆ ಇನ್ನೊಬ್ಬರನ್ನು ಕೆಲಸಕ್ಕೆ ಇಟ್ಟುಕೊಂಡಿರುತ್ತಾರೆ. ಶಾಪಿಂಗ್ಗಾಗಲಿ ಪೋಷಕರು ಕೆಲಸಕ್ಕೆ ತೆರಳಿದಾಗಾಗಲಿ ಮಗುವನ್ನು ನೋಡಿಕೊಳ್ಳಲು ಒಬ್ಬರನ್ನು ನೇಮಿಸಿಕೊಂಡಿರುತ್ತಾರೆ ಅಥವಾ ಮನೆಯಲ್ಲಿ ವಯಸ್ಕರಿದ್ದರೆ ಮಕ್ಕಳನ್ನು ಅವರ ಹತ್ತಿರ ಬಿಟ್ಟು ಪೋಷಕರು ಮನೆ ಇಂದ ಹೊರಗೆ ಸುತ್ತಾಡಲು ತೆರಳುತ್ತಾರೆ.
|
ದೇಶದಲ್ಲಿನ ಹಲವಾರು ಪ್ರದೇಶಗಳಲ್ಲಿ ದೀಪಾವಳಿ ಹಬ್ಬದ ಸಂಭ್ರಮವನ್ನು ಬಹಳ ಆದ್ದೂರಿಯಾಗಿ ಆಚರಿಸುತ್ತಾರೆ. ಹಬ್ಬ ಬರುವ ಮುನ್ನವೇ ಬೇಕಾದ ಉಡುಪುಗಳನ್ನು ಮತ್ತು ವಸ್ತುಗಳನ್ನು ಖರೀದಿಸಲು ಶಾಪಿಂಗ್ಗಾಗಿ ತೆರಳುತ್ತಾರೆ. ಆದರೆ ಹಲವಾರು ಜನರು ತುಂಬಿಕೊಂಡಿರುವ ಮಾರುಕಟ್ಟೆಯಲ್ಲಿ ಮಗುವನ್ನು ಕರೆದುಕೊಂಡು ಹೋದರೆ ಅವರನ್ನು ಸಂಭಾಳಿಸುವುದೇ ಪೋಷಕರಿಗೆ ತಲೆನೋವಾಗಿ ಹೋಗಿರುತ್ತದೆ.
ಆದ್ದರಿಂದ ಮಕ್ಕಳನ್ನು ಕರೆದುಕೊಂಡು ಶಾಪಿಂಗ್ಗೆಂದು ಹೋದಾಗ ಕೆಲವರು ಮಕ್ಕಳನ್ನು ಕಾರಿನಲ್ಲಿಯೆ ಬಿಟ್ಟು ಗಂಟೆಗಳ ಕಾಲ ಶಾಪಿಂಗ್ಗಾಗಿ ತೆರಳುತ್ತಾರೆ. ಇಂತಹ ಘಟನೆಯೆ ಮೀರತ್ನಲ್ಲಿ ಸಹ ನಡೆದಿದ್ದು, ಜನರು ತುಂಬಿರುವ ಮಾರುಕಟ್ಟೆಯಲ್ಲಿ ಮಗುವನ್ನು ನಿಭಾಯಿಸಲು ಆಗದೆ ಶಾಪಿಂಗ್ ಮಾಡಲು ತಮ್ಮ ಮಗುವನ್ನು ಕಾರಿನಲ್ಲಿಯೆ ಬಿಟ್ಟು ಹೋಗಿದ್ದು, ಇದರಿಂದ ಆದ ಪರಿಣಾಮದಿಂದ ಆ ಪೋಷಕರು ಜನರ ಕೈಲಿ ಚೀಮಾರಿ ಹಾಕಿಸಿಕೊಂಡಿದ್ದಾರೆ.
ನವೆಂಬರ್ 5ರಂದು ದಂಪತಿಗಳು ತಮ್ಮ ಮಗುವಿನೊಂದಿಗೆ ಶಾಪಿಂಗ್ ಮಾಡಲು ಕಾರಿನಲ್ಲಿ ತೆರಳುತ್ತಾರೆ. ಮಾರುಕಟ್ಟೆಗೆ ಬಂದ ನಂತರ ಅಲ್ಲಿನ ಜನಸಂದವನ್ನು ಕಂಡು ಮಗುವನ್ನು ಕರೆದುಕೊಂಡು ಹೋಗುವುದು ತೊಂಬಾನೆ ಕಷ್ಟವೆಂದು ಮಗುವನ್ನು ತಮ್ಮ ಕಾರಿನಲ್ಲಿಯೆ ಬಿಟ್ಟು ಹೋಗುತ್ತಾರೆ.
ಕಾರಿನಲ್ಲಿ ಬಿಟ್ಟು ಕಾರಿನ ಕಿಟಕಿಗಳನ್ನು ಕೊಂಚವಾದರೂ ತೆರೆದಿದ್ದರೆ ಸರಿಹೋಗಿರುತ್ತಿತ್ತು ಎಂದು ಹೇಳಬಹುದು, ಆದರೆ ಈ ಬುದ್ಧಿವಂತ ದಂಪತಿಗಳು ಸಂಪೂರ್ಣವಾಗಿ ಕಿಟಕಿಗಳನ್ನು ಮುಚ್ಚಿ ಕಾರನ್ನು ಆಫ್ ಮಾಡಿ ಎಸಿಯನ್ನು ಸಹ ಆನ್ ಮಾಡದೆ ತೆರಳಿದ್ದಾರೆ.
ದಂಪತಿಗಳು ಶಾಪಿಂಗ್ಗೆಂದು ಹೋಗಿ ಬಹಳ ಹೊತ್ತು ಆಗಿದ್ದುದ್ದರಿಂದ ಮತ್ತು ಕಾರಿನ ಒಳಗೆ ಗಾಳಿಯಾಡದೆ ಮಗುವು ಒದ್ದಾಡಲು ಶುರು ಮಾಡಿತು. ಇದನ್ನು ಕಂಡ ಸ್ಥಳೀಯರು ಕೂಡಲೇ ದಂಪತಿಗಳನ್ನು ಹುಡುಕಲು ಶುರು ಮಾಡಿದ್ದರು.
ಎಷ್ಟು ಹುಡುಕಿದರೂ ಮಗುವಿನ ತಂದೆ ತಾಯಿಯನ್ನು ಕಾಣದ ಆ ಜನರುಕೂಡಲೆ ಸ್ಥಳದಲ್ಲಿದ್ದ ಪೊಲೀಸರನ್ನು ಕರೆಸಿ, ಅವರಿಂದ ಕಾರಿನ ಕಿಟಕಿಯ ಗಾಜುಗಳನ್ನು ಮತ್ತು ಬಾಗಿಲುಗಳನ್ನು ಒಡೆದು ಹಾಕಿ ಆ ಮಗುವನ್ನು ಕಾಪಾಡಿದ್ದಾರೆ.
ತಂದೆ ತಾಯಿ ಇನ್ನೂ ಬರಲಿಲ್ಲವೆಂದು ಭಯಗೊಂಡಿದ್ದ ಆ ಮಗುವು ಸಹಾಯಕ್ಕಾಗಿ ಕಾರಿನಲ್ಲಿಯೆ ಅಳಲು ಶುರು ಮಾಡಿತು. ಪಾಪ ಕಾರಿನಲ್ಲಿ ಎಸಿ ಕೂಡಾ ಆನ್ ಆಗಿರದುದರಿಂದ ಮತ್ತು ಗಾಳಿಯೂ ಒಳಗೆ ಹೋಗದ ಹಾಗೆ ಕಿಟಕಿಗಳನ್ನು ಮುಚ್ಚಿದ್ದರಿಂದ ಮಗುವು ಬಹಳ ಕಷ್ಟ ಪಟ್ಟಿತು.
ಸ್ಥಳೀಯರು ಕಾರಿನ ಕಿಟಕಿಗಳನ್ನು ಹೊಡೆದುಹಾಕಿ ಮಗುವನ್ನು ಹೊರಗೆ ತಂದು, ಪರಮಶಿಸುತ್ತುರ್ರುವ ಸಮಯಕ್ಕೆ ಸರಿಯಾಗಿ ಮಗುವಿನ ಪೋಷಕರು ಬಂದರು. ಬಂದ ಕೂಡಲೇ ಅವರನ್ನು ಕಂಡು ಕೋಪಗೊಂಡ ಆ ಸ್ಥಳೀಯರು ಮತ್ತು ಪೊಲೀಸರು ಅವರಿಗೆ ಬಾಯಿಗೆ ಬಂದ ಹಾಗೆ ಬೈದು ಚೀಮಾರಿ ಹಾಕಿ ವಾರ್ನ್ ಮಾಡಿ ಕಳುಹಿಸಿದ್ದಾರೆ.
ಇಂತಹ ಘಟನೆಗಳು ದೇಶದಲ್ಲಿನ್ನ ಕೆಲವು ಪ್ರದೇಶಗಳಲಿ ಕಾಣಿಸಿಕೊಂಡರು ಪಾಶ್ಚ್ಯಾತ್ಯ ದೇಶಗಳಲ್ಲಿ ಇದು ಕಾಮನ್ ಆಗಿ ಹೋಗಿದೆ. ಮಗುವನ್ನು ಮಾತ್ರವಲ್ಲದೇ ಕೆಲವರು ಕಾರಿನಲ್ಲಿ ನಾಯಿ ಮತ್ತು ಬೆಕ್ಕುಗಳನ್ನು ಕರೆತಂದು ಕಾರಿನಲ್ಲಿಯೆ ಬಿಟ್ಟು ಹೋಗಿರುವ ಘಟನೆಗಳು ಹಲವಾರಿದೆ.
ನೆನಪಿರಲಿ ವಯ್ಸ್ಕರಿಗಂತಾ ಮಕ್ಕಳ ದೇಹದ ಟೆಂಪ್ರೇಚುರ್ ಬಹುಬೇಗ ಬದಲಾವಣೆಯಾಗುತ್ತದೆ. ಅವರಿಗೆ ವಾತಾವರಣಕ್ಕೆ ತಕ್ಕಹಾಗೆ ಸರಿಹೊಂದುವುದು ಕಷ್ಟಕರವಾಗುರುತ್ತದೆ. ಇದರಿಂದ ಗಾಳಿಯಾಡದ ಕಾರಿನಲ್ಲಿ ಮಗುವನ್ನು ಬಿಟ್ತು ಹೋದರೆ ಕೆಲವೊಮ್ಮೆ ಅವು ಮಗುವಿನ ಪ್ರಾಣಕ್ಕೆ ಹಾನಿಯನ್ನುಂಟು ಮಾಡುತ್ತದೆ.
ಅಲ್ಲದೆ, ಕಾರಿನಲ್ಲಿ ಗಮನಿಸಲಾಗದ ಹಾಗೆ ಮಗುವನ್ನು ಬಿಟ್ಟರೆ ಬೇರೆ ರೀತಿಯಲ್ಲಿ ಹಾನಿಗೊಳಗಾಗಬಹುದು. ಸೀಟಿನಿಂದ ಬೀಳುವ ಮೂಲಕ ಮಗುವಿಗೆ ಗಾಯವಾಗಬಹುದು. ಅಥವಾ ಏಕಾಂತತೆಯಿಂದ ಅನಿಯಂತ್ರಿತವಾಗಿ ಅಳುವುದು ಪ್ರಾರಂಭಿಸಬಹುದು.
ಇಂತಹ ವಿಷಯಗಳನ್ನು ನಿಲ್ಲಿಸಲು ಭಾರತದಲ್ಲಿ ಯಾವುದೇ ನಿಯಮಗಳಿಲ್ಲವಾದರೂ, ಮಗುವನ್ನು ನೋಯಿಸದ ಕಾರಣದಿಂದ ಪೋಷಕರ ಮೇಲೆ ಕೇಸ್ ಹಾಕಬಹುದಂತೆ. ಮೀರತ್ ಪ್ರಕರಣದಲ್ಲಿ, ಪೊಲೀಸರು ಪೋಷಕರಿಗೆ ಕಟ್ಟುನಿಟ್ಟಾದ ಎಚ್ಚರಿಕೆಯನ್ನು ನೀಡಿದರು ಅವರನ್ನು ಹೋಗಲು ಬಿಟ್ಟಿದ್ದಾರೆ.
ಕಾರು ಪಾರ್ಕ್ ಮಾಡಿದ ನಂತರ ಕಾರಿನ ವಿಂಡೊಗಳನ್ನು ಪೂರ್ತಿಯಾಗಿ ಮುಚ್ಚಿಬಿಡುತ್ತಾರೆ. ಇದು ತುಂಬಾ ತಪ್ಪು. ಹೀಗೆ ಮಾಡುವುದರಿಂದ ಕಾರಿನಲ್ಲಿರುವ ಗಾಳಿಯು ಅಧಿಕವಾಗಿ ಬಿಸಿಯಾಗಲು ಸುರುವಾಗುತ್ತದೆ. ಆದರೇ ವಿಂಡೊಗಳನ್ನು ಮುಚ್ಚುವುದರಿಂದಾ ಆ ಗಾಳಿಯು ಹೊರಗೆ ಹೋಗಲಾಗುವುದಿಲ್ಲ.
ಇದರಿಂದ ಬಿಸಿಯು ಕಾರಿನ ಇಂಟೀರಿಯರ್ ಅನ್ನು ಸಂಪೂರ್ಣವಾಗಿ ಬಿಸಿ ಮಾಡುತ್ತದೆ. ಅದೇ ಸ್ವಲ್ಪವಾದರೂ ಕಾರಿನ ವಿಂಡೋವನ್ನು ತೆರೆದಿದ್ದಲ್ಲಿ ಗಾಳಿಯ ಪ್ರಸರಣೆಯು ಇರುತ್ತದೆ. ಇದರಿಂದಾ ಕಾರಿನಲ್ಲಿರುವ ಬಿಸಿ ಗಾಳಿಯು ಹೊರಗಿನ ವಾತವರಣದಲ್ಲಿ ಮಿಶ್ರಿತವಾಗುತ್ತದೆ.
ಎಸಿ ಆನ್ ಮಾಡುವ ಮುನ್ನ ವಿಂಡೋಗಳನ್ನು ಪೂರ್ತಿಯಾಗಿ ಕೆಳಗಿಳಿಸಿರಿ ಹೆಚ್ಚು ಸಮಯ ಬಿಸಿಲಿನಲ್ಲಿ ಪಾರ್ಕ್ ಮಾಡಿದ ನಂತರ ಇದನ್ನು ತಪ್ಪದೇ ಅನುಸರಿಸಿರಿ. ಹೆಚ್ಚು ಕಾಲ ಬಿಸಿಲಿನಲ್ಲಿ ಪಾರ್ಕ್ ಮಾದುವುದರಿಂದ ಇಂಟೀರಿಯರ್ ಪೂರ್ಣವಾಗಿ ಬಿಸಿಯಾಗಿರುತ್ತದೆ. ತಕ್ಷಣವೇ ಡ್ರೈವಿಂಗ್ ಸ್ಟಾರ್ಟ್ ಮಾಡಿ ಎಸಿ ಆನ್ ಮಾಡಿದರೆ ಒಳಭಾಗವನ್ನು ತಣ್ಣಗಾಗಿಸಲು ಎಸಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಆದ್ದರಿಂದ, ಪ್ರಯಾಣಕ್ಕು ಮುನ್ನವೇ ವಿಂಡೋಗಳನ್ನು ಪೂರ್ತಿಯಾಗಿ ಕೆಳಕ್ಕಿಳಿಸಿರಿ, ಹೊರಗಿನ ವಾತಾವರಣದಲ್ಲಿ ಗಾಳಿಯಲ್ಲಿ ಕಾರು ಒಳಗಡೆ ಹೋಗಿ ಅದರಲ್ಲಿ ಗಾಳಿಯೊಂದಿಗೆ ಸೇರಿಹೋಗುತ್ತದೆ. ಇದರಿಂದ ಇಂಟೀರಿಯರ್ ಕೊಂಚ ತಣ್ಣಗಾಗುತ್ತದೆ. ಹೀಗೆ ಮಾಡಿದ ನಂತರ ವಿಂಡೋಗಳನ್ನು ಮೇಲಕ್ಕೆರಿಸಿ 'ಎಸಿ'ಯನ್ನು ಆನ್ ಮಾಡಿರಿ.