ಆರಂಭವಾದ ಆರನೇ ದಿನಕ್ಕೆ ಅಪಘಾತ: ಕರುವಿಗೆ ಡಿಕ್ಕಿ ಹೊಡೆದ ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್
ಮೈಸೂರಿನಿಂದ ಚೆನ್ನೈಗೆ ಹೊರಟಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ಅರಕ್ಕೋಣಂ ಬಳಿ ಕರುವಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕರು ಸಾವನ್ನಪ್ಪಿದ್ದು ರೈಲಿಗೆ ಸಣ್ಣ ಡೆಂಟ್ ಆಗಿದೆ.
ದೇಶದ 5 ನೇ ವಂದೇ ಭಾರತ್ ರೈಲು ಮತ್ತು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಾಗಿರುವ ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಪ್ರಧಾನಿ ಮೋದಿ ಅವರು ಇದೇ ನವೆಂಬರ್ 12 ರಂದು ಉದ್ಘಾಟಿಸಿದ್ದರು.

ಇದು ಇತರ ವಂದೇ ಭಾರತ್ ರೈಲುಗಳಿಗಿಂತ ಹೆಚ್ಚು ಆಧುನಿಕವಾಗಿದೆ. ಈ ರೈಲು ಗಂಟೆಗೆ ಗರಿಷ್ಠ 180 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಆದರೆ ಚೆನ್ನೈ-ಮೈಸೂರು ಮಾರ್ಗದಲ್ಲಿ ಆ ಮಟ್ಟದ ವೇಗದಲ್ಲಿ ಪ್ರಯಾಣಿಸಲು ಸರಿಯಾದ ಮೂಲಸೌಕರ್ಯವಿಲ್ಲದ ಕಾರಣ, ಅದರ ವೇಗವನ್ನು ಗಂಟೆಗೆ 130 ಕಿ.ಮೀಗೆ ಸೀಮಿತಗೊಳಿಸಲಾಗಿದೆ.
ಆದರೂ ಮೈಸೂರಿನಿಂದ ಚೆನ್ನೈಗೆ ಬರುತ್ತಿದ್ದ ವಂದೇ ಭಾರತ್ ರೈಲು ಅರಕ್ಕೋಣಂ ಬಳಿ ಗಂಟೆಗೆ 90 ಕಿ.ಮೀ ವೇಗದಲ್ಲಿ ಕರುವಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕರುವಿನ ದೇಹ ನಜ್ಜುಗುಜ್ಜಾಗಿದ್ದು, ರಕ್ತಸ್ರಾವವಾಗಿ ಸಾವನ್ನಪ್ಪಿದೆ. ಇದರಿಂದ ವಂದೇ ಭಾರತ್ ರೈಲು ಅರ್ಧ ದಾರಿಯಲ್ಲಿ ಸ್ವಲ್ಪ ಹೊತ್ತು ನಿಂತಿತು. ಸ್ವಲ್ಪ ಹೊತ್ತು ರೈಲನ್ನು ನಿಲ್ಲಿಸಿ ಮತ್ತೆ ಚೆನ್ನೈ ಕಡೆಗೆ ನಿರ್ದೇಶಿಸಲಾಯಿತು.

ರೈಲಿನ ಕಾರ್ಯಾಚರಣೆ ಆರಂಭವಾದ ಸುಮಾರು ಒಂದು ವಾರದ ನಂತರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಚೆನ್ನೈ-ಮೈಸೂರು-ಬೆಂಗಳೂರು ಮಾರ್ಗದಲ್ಲಿ ಜಾನುವಾರು ಘಟನೆಯನ್ನು ಎದುರಿಸಿದೆ ಎಂದು ವರದಿಯಾಗಿದೆ. ಇದು ಗುರುವಾರ ತಮಿಳುನಾಡಿನ ಅರಕ್ಕೋಣಂನಲ್ಲಿ ವರದಿಯಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ತನ್ನ ಮಾರ್ಗದಲ್ಲಿ ಒಂದು ನಿಲುಗಡೆಯನ್ನು ತೆಗೆದುಕೊಳ್ಳುವ ಸೆಮಿ-ಹೈ-ಸ್ಪೀಡ್ ರೈಲಿಗೆ ಅಪಘಾತದಿಂದ ಸಣ್ಣ ಡೆಂಟ್ ಆಗಿದೆ. ಅಪಘಾತ ಸಂಭವಿಸಿದಾಗ ರೈಲು ಗಂಟೆಗೆ 90 ಕಿ.ಮೀ ವೇಗದಲ್ಲಿ ಹೋಗುತ್ತಿತ್ತು ಎಂದು ವರದಿ ತಿಳಿಸಿದ್ದು, ಸ್ಥಳದಲ್ಲೇ ಕರು ನುಜ್ಜುಗುಜ್ಜಾಗಿದೆ.
ಜಾನುವಾರು ಅಪಘಾತ ಇದೇ ಮೊದಲಲ್ಲ
ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕಳೆದ ಸೆಪ್ಟೆಂಬರ್ 6 ರಂದು ಎಮ್ಮೆಗಳಿಗೆ ಡಿಕ್ಕಿ ಹೊಡೆದಿತ್ತು. ಇದಾದ ಒಂದೇ ದಿನದ ಅಂತರದಲ್ಲಿ ಹೊಸದಾಗಿ ಪ್ರಾರಂಭಿಸಲಾದ ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೆಪ್ಟೆಂಬರ್ 7 ರಂದು ಗುಜರಾತ್ನ ಕಂಜಾರಿ ಮತ್ತು ಆನಂದ್ ನಿಲ್ದಾಣಗಳ ನಡುವೆ ಹಸುವಿಗೆ ಡಿಕ್ಕಿ ಹೊಡೆದು ರೈಲಿನ ಮುಂಭಾಗದ ಫಲಕಕ್ಕೆ ಹಾನಿಯಾಗಿತ್ತು.
ಈ ರೈಲುಗಳು ಸಾಮಾನ್ಯವಾಗಿ ಹೈ ಸ್ಪೀಡ್ ಅನ್ನು ಹೊಂದಿರುವುದರಿಂದ ಕೂಡಲೇ ಎದುರಾಗುವ ಅಪಘಾತವನ್ನು ತಪ್ಪಿಸುವುದು ಸಾಧ್ಯವಿಲ್ಲ. ಆದರೆ ಸಾಮಾನ್ಯ ರೈಲುಗಳಿಗೆ ಹೋಲಿಸಿಕೊಂಡರೆ ಬ್ರೇಕಿಂಗ್ ವ್ಯವಸ್ತೆಯು ಅತ್ಯುತ್ತಮವಾಗಿದೆ. ಆದರೂ ವೇಗ ಹೆಚ್ಚಾಗಿರುವುದರಿಂದ ಬೃಹತ್ ರೈಲು ಕೂಡಲೇ ನಿಯಂತ್ರಣಕ್ಕೆ ಬರುವುದಿಲ್ಲ.
ಹಾಗಾಗಿ ಈ ಅಪಘಾತಗಳನ್ನು ನಿಯಂತ್ರಿಸಲು ರೈಲ್ವೇ ಇಲಾಖೆಯು ಈ ರೈಲುಗಳ ಬದಿಗಳಲ್ಲಿ ಫೆನ್ಸಿಂಗ್ ನಿರ್ಮಾಣ ಮಾಡಲು ಯೋಜಿಸುತ್ತಿರುವುದಾಗಿ ತಿಳಿದುಬಂದಿದೆ. ಒಂದು ವೇಳೆ ಇದನ್ನು ನಿರ್ಮಾಣ ಮಾಡುವುದಾದರೆ ಸಾವಿರಾರು ಕಿ.ಮೀಗಳ ಉದ್ದಕ್ಕೂ ನಿರ್ಮಿಸಬೇಕಾಗಿರುವುದರಿಂದ ಇಲಾಖೆಗೆ ಇದೊಂದು ದೊಡ್ಡ ಸವಾಲಾಗಿರುತ್ತದೆ.


Click it and Unblock the Notifications