ಶಾಕಿಂಗ್; ದೇಶದಲ್ಲಿ ರಸ್ತೆ ಅಪಘಾತಕ್ಕೆ ದಿನವೊಂದರಲ್ಲಿ 400 ಬಲಿ
ಮಗದೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದ್ದು, ಭಾರತೀಯ ರಸ್ತೆಗಳಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳಲ್ಲಿ ದಿನವೊಂದರಲ್ಲಿ 400 ಮಂದಿ ಬಲಿಯಾಗುತ್ತಿರುವುದಾಗಿ ದಾಖಲೆಗಳು ತಿಳಿಸಿವೆ.
ಬೈಕ್ ಅಪಘಾತಕ್ಕೆ ದೇಶದ ಅಗ್ರ ಮಹಿಳಾ ರೈಡರ್ ಬಲಿ
ಇದರೊಂದಿಗೆ ಕಳೆದ ಸಾಲಿಗೆ ಹೋಲಿಸಿದಾಗ 2015ರಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಶೇಕಡಾ 5ರಷ್ಟು ಏರಿಕೆಯಾಗಿದೆ. ಇದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಇಡೀ ವಿಶ್ವದಲ್ಲೇ ರಸ್ತೆ ಅಪಘಾತಕ್ಕೆ ಸಾವನ್ನಪ್ಪುತ್ತಿರುವ ಪ್ರಮಾಣ ಭಾರತದಲ್ಲಿ ಗಣನೀಯವಾಗಿ ಏರಿಕೆ ಕಂಡುಬಂದಿದೆ.

2014ನೇ ಸಾಲಿನಲ್ಲಿ ರಸ್ತೆ ಅಪಘಾತದಲ್ಲಿ ಸಾವಿನ ಸಂಖ್ಯೆ 4.89 ಲಕ್ಷದಷ್ಟಿದ್ದು, 2015ರಲ್ಲಿ ಇದು ಐದು ಲಕ್ಷವನ್ನು ಮೀರಿ ನಿಂತಿದೆ. ಅಂದರೆ ಸಾವಿನ ಸಂಖ್ಯೆಯಲ್ಲಿ 1.46 ಲಕ್ಷದಷ್ಟು ಏರಿಕೆಯುಂಟಾಗಿದೆ.

ಅಂದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಅಭಿಯಾನಗಳು ಸಂಪೂರ್ಣ ವಿಫಲವಾಗಿದೆ ಎಂಬುದು ಸಾಬೀತಾಗಿದೆ.

ಮತ್ತಷ್ಟು ಸೂಕ್ಷ್ಮವಾಗಿ ಗಮನ ಹರಿಸಿದಾಗ ಪ್ರತಿ 3.6 ನಿಮಿಷಕ್ಕೊಂದು ನಡೆಯುತ್ತಿರುವ ರಸ್ತೆ ಅಪಘಾತದಲ್ಲಿ ಭಾರತೀಯನೋರ್ವ ತಮ್ಮ ಜೀವವನ್ನೇ ಕಳೆದು ಕೊಳ್ಳುತ್ತಿರುವ ಆಂತಕದ ವಿಷಯ ಬಹಿರಂಗವಾಗಿದೆ.

ಈ ನಡುವೆ ರಸ್ತೆ ಅಪಘಾತ ಪ್ರಮಾಣವನ್ನು ತಡೆಯುವುದಕ್ಕೆ ಮುಂದಾಗಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, 2020ರ ವೇಳೆಯಾಗುವಾಗ ರಸ್ತೆ ಅವಘಡವನ್ನು ಶೇಕಡಾ 50ರಷ್ಟು ಇಳಿಸುವ ಗುರಿಯನ್ನು ಹೊಂದಿದ್ದಾರೆ.

ರಾಜ್ಯಗಳು ಒದಗಿಸಿರುವ ಪೊಲೀಸ್ ದಾಖಲೆಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ರಸ್ತೆ ಅಪಘಾತಕ್ಕೆ ಅತಿ ಹಚ್ಚು ಅಂದರೆ 17,666 ಮಂದಿ ಮೃತಪಟ್ಟಿದ್ದಾರೆ.

ಇದನ್ನು ತಮಿಳುನಾಡು (15,642), ಮಹಾರಾಷ್ಟ್ರ(13,212), ಕರ್ನಾಟಕ (10,856) ಮತ್ತು ರಾಜಸ್ತಾನ (10,510) ಹಿಂಬಾಲಿಸಿದೆ. ಕರ್ನಾಟದ ಮೊದಲ ಮೂರರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಆಘಾತಕಾರೆಯೆನಿಸಿದೆ.

ದೊಡ್ಡ ರಾಜ್ಯಗಳಲ್ಲಿ ರಸ್ತೆ ಅಪಘಾತಕ್ಕೆ ಸಾವನ್ನಪ್ಪುವ ಪ್ರಮಾಣ ಏರಿಕೆಯಾಗಿದ್ದು, ದೆಹಲಿಯಂತಹ ಸಣ್ಣ ರಾಜ್ಯಗಳಲ್ಲಿ ಇದರ ಪ್ರಮಾಣ ಇಳಿಕೆಯಾಗಿದೆ. ಈ ಪೈಕಿ 2015ರಲ್ಲಿ ಅಸ್ಸಾಂನಲ್ಲಿ ಸಾವಿನ ಸಂಖ್ಯೆ 115 ರಷ್ಟು ಇಳಿಕೆಯಾಗಿದೆ. ದೆಹಲಿಯಲ್ಲೂ 49ರಷ್ಟು ಇಳಿಕೆಯಾಗಿದೆ.

ಹಾಗಿದ್ದರೆ ರಸ್ತೆ ಅಪಘಾತ ತಡೆಯಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ? ಈ ಸಂಬಂಧ ನಿಮ್ಮ ಬಹುಮೂಲ್ಯ ಸಲಹೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಿರಿ.

ಇಂದು ಅವರು, ನಾಳೆ ನೀವು, ನಾಳಿದ್ದು ಇನ್ಯಾರೊ..! ಮುಂದಕ್ಕೆ ಓದಿ
ಕಾರು ಅಪಘಾತಕ್ಕೆ 25 ಕಾರಣ ಹಾಗೂ ಅವುಗಳನ್ನು ತಡೆಗಟ್ಟುವ ವಿಧಾನ!


Click it and Unblock the Notifications








