ತಾತನ ಕೃಷಿ ಕಾರ್ಯಕ್ಕೆ ನೆರವಾಗಲು ಹೊಸ ವಾಹನ ಅಭಿವೃದ್ಧಿಪಡಿಸಿದ ಶಾಲಾ ಬಾಲಕ

ಕರೋನಾ ವೈರಸ್ ಹರಡಬಹುದೆಂಬ ಕಾರಣಕ್ಕೆ ಶಾಲೆ ಹಾಗೂ ಕಾಲೇಜುಗಳನ್ನು ಮುಚ್ಚಲಾಗಿದೆ. ವಿದ್ಯಾರ್ಥಿಗಳು ಮನೆಯೊಳಗೆ ಬಂಧಿಯಾಗಿದ್ದಾರೆ. ಕೆಲವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ.

ತಾತನ ಕೃಷಿ ಕಾರ್ಯಕ್ಕೆ ನೆರವಾಗಲು ಹೊಸ ವಾಹನ ಅಭಿವೃದ್ಧಿಪಡಿಸಿದ ಶಾಲಾ ಬಾಲಕ

ಕೆಲ ವಿದ್ಯಾರ್ಥಿಗಳು ತಮ್ಮಲ್ಲಿರುವ ಕ್ರಿಯಾಶೀಲತೆಯನ್ನು ಹೊರ ಹಾಕಿದ್ದಾರೆ. ಹಳೆಯ ವಾಹನಗಳ ಬಿಡಿ ಭಾಗಗಳೊಂದಿಗೆ ವಿದ್ಯಾರ್ಥಿಗಳು ಹೊಸ ಬೈಕ್‌ ಹಾಗೂ ಸೈಕಲ್‌ಗಳನ್ನು ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ವರದಿಗಳಾಗಿವೆ. ಈಗ ಕೇರಳದ ಕೋಝಿಕೋಡ್ ಬಳಿಯ ಕೊಯಿಲಾಂಡಿ ಪ್ರದೇಶದ ಅದ್ವೈತ್ ಎಂಬ ವಿದ್ಯಾರ್ಥಿ ಹೊಸ ಸೇರ್ಪಡೆಯಾಗಿದ್ದಾನೆ.

ತಾತನ ಕೃಷಿ ಕಾರ್ಯಕ್ಕೆ ನೆರವಾಗಲು ಹೊಸ ವಾಹನ ಅಭಿವೃದ್ಧಿಪಡಿಸಿದ ಶಾಲಾ ಬಾಲಕ

ಆತ ಹೊಸ ಹೊಸ ಯಂತ್ರಗಳನ್ನು ರಚಿಸಲು ಆಸಕ್ತಿ ಹೊಂದಿದ್ದಾನೆ. ಶಾಲೆಗಳು ಮುಚ್ಚಿರುವ ಈ ಸಂದರ್ಭದಲ್ಲಿ ಆತ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಹೊಸ ವಾಹನವನ್ನು ಅಭಿವೃದ್ಧಿಪಡಿಸಿದ್ದಾನೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ತಾತನ ಕೃಷಿ ಕಾರ್ಯಕ್ಕೆ ನೆರವಾಗಲು ಹೊಸ ವಾಹನ ಅಭಿವೃದ್ಧಿಪಡಿಸಿದ ಶಾಲಾ ಬಾಲಕ

ಈ ವಾಹನವನ್ನು ಅಭಿವೃದ್ಧಿಪಡಿಸಲು ಅದ್ವೈತ್ ಹಳೆಯ ಬೈಕ್ ಬಳಸಿದ್ದಾನೆ. ಈ ವಾಹನವನ್ನು ವಿವಿಧ ಕೃಷಿ ಕಾರ್ಯಗಳಿಗೆ ಬಳಸಬಹುದು. ಈ ವಾಹನವನ್ನು ಹುಲ್ಲು ಕೊಯ್ಯಲು ಹಾಗೂ ಕೃಷಿ ಭೂಮಿಯನ್ನು ಉಳುಮೆ ಮಾಡಲು ಬಳಸಬಹುದು.

ತಾತನ ಕೃಷಿ ಕಾರ್ಯಕ್ಕೆ ನೆರವಾಗಲು ಹೊಸ ವಾಹನ ಅಭಿವೃದ್ಧಿಪಡಿಸಿದ ಶಾಲಾ ಬಾಲಕ

ಈ ವಾಹನವನ್ನು ಬಿತ್ತನೆ ಬೀಜಗಳನ್ನು ಬಿತ್ತಲು ಹಾಗೂ ನೀರು ಹಾಕಲು ಸಹ ಬಳಸಬಹುದು. ಅದ್ವೈತ್ ಈ ವಾಹನವನ್ನು ಚಾಲನೆ ಮಾಡುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ತಾತನ ಕೃಷಿ ಕಾರ್ಯಕ್ಕೆ ನೆರವಾಗಲು ಹೊಸ ವಾಹನ ಅಭಿವೃದ್ಧಿಪಡಿಸಿದ ಶಾಲಾ ಬಾಲಕ

ಅದ್ವೈತ್ ನ ಅಜ್ಜ ಕೃಷಿಕರಾಗಿದ್ದು, ಭೂಮಿ ಉಳುಮೆ ಮಾಡುವಾಗ ಹಾಗೂ ಬೀಜಗಳನ್ನು ಬಿತ್ತನೆ ಮಾಡುವಾಗ ಅವರು ಎದುರಿಸಿದ ತೊಂದರೆಗಳನ್ನು ಗಮನಿಸಿದ ಅದ್ವೈತ್ ಕೃಷಿ ಕೆಲಸಕ್ಕೆ ಬಳಸುವ ವಾಹನವನ್ನು ತಯಾರಿಸಲು ಮುಂದಾಗಿದ್ದಾನೆ.

ತಾತನ ಕೃಷಿ ಕಾರ್ಯಕ್ಕೆ ನೆರವಾಗಲು ಹೊಸ ವಾಹನ ಅಭಿವೃದ್ಧಿಪಡಿಸಿದ ಶಾಲಾ ಬಾಲಕ

ಹೊಸ ಯಂತ್ರದ ಬಗ್ಗೆ ಮಾತನಾಡಿರುವ ಅದ್ವೈತ್ ಈ ಯಂತ್ರವನ್ನು ಅಭಿವೃದ್ಧಿಪಡಿಸಿ, ಪರೀಕ್ಷಿಸಲು ನನಗೆ ಸುಮಾರು 6 ತಿಂಗಳು ಬೇಕಾಯಿತು. ಈ ವಾಹನದಲ್ಲಿ ಬಳಸಲಾಗಿರುವ 80%ಗಿಂತ ಹೆಚ್ಚು ಬಿಡಿಭಾಗಗಳು ಬಳಕೆಯಲ್ಲಿಲ್ಲದ ಹಳೆಯ ವಸ್ತುಗಳಾಗಿವೆ. ಈ ವಾಹನದಲ್ಲಿ ಹೀರೋ ಹೋಂಡಾ ಸ್ಪ್ಲೆಂಡರ್ ಎಂಜಿನ್ ಅಳವಡಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ತಾತನ ಕೃಷಿ ಕಾರ್ಯಕ್ಕೆ ನೆರವಾಗಲು ಹೊಸ ವಾಹನ ಅಭಿವೃದ್ಧಿಪಡಿಸಿದ ಶಾಲಾ ಬಾಲಕ

ನಮ್ಮ ಚಿಕ್ಕಪ್ಪನ ಬೈಕಿನಲ್ಲಿದ ಎಂಜಿನ್ ಅನ್ನು ಈ ವಾಹನದಲ್ಲಿ ಅಳವಡಿಸಲಾಗಿದೆ. ಈ ವಾಹನವು ಪೆಟ್ರೋಲ್ ಮೂಲಕ ಚಲಿಸುತ್ತದೆ. ಎಂಜಿನ್ ಹೊರತು ಪಡಿಸಿ ಬೇರೆ ಭಾಗಗಳು ಸೌರಶಕ್ತಿಯಿಂದ ಚಾಲನೆಯಾಗುತ್ತವೆ ಎಂದು ಹೇಳಿದ್ದಾನೆ. ಈ ವಾಹನದಲ್ಲಿ ವಾಟರ್ ಟ್ಯಾಂಕ್ ಸಹ ಅಳವಡಿಸಲಾಗಿದೆ. ಇದರಿಂದ ಬಿತ್ತನೆ ಬೀಜಗಳ ಮೇಲೆ ನೀರು ಸಿಂಪಡಿಸಲು ಅನುಕೂಲವಾಗಲಿದೆ.

ತಾತನ ಕೃಷಿ ಕಾರ್ಯಕ್ಕೆ ನೆರವಾಗಲು ಹೊಸ ವಾಹನ ಅಭಿವೃದ್ಧಿಪಡಿಸಿದ ಶಾಲಾ ಬಾಲಕ

ಹುಲ್ಲು ಕತ್ತರಿಸಲು ಈ ವಾಹನದಲ್ಲಿ ಕಟರ್ ಜೋಡಿಸಲಾಗಿದೆ. ಲಾಕ್ ಡೌನ್ ಅವಧಿಯನ್ನು ಸರಿಯಾಗಿ ಬಳಸಿಕೊಂಡು, ವಿವಿಧ ಕೃಷಿ ಕಾರ್ಯಗಳಿಗೆ ಬಳಸಬಹುದಾದ ವಾಹನವನ್ನು ಅಭಿವೃದ್ಧಿಪಡಿಸಿದ ಅದ್ವೈತನ ಕಾರ್ಯ ಶ್ಲಾಘನೀಯ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಸೂಚನೆ: ಕೆಲವು ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Article Published On: Saturday, October 24, 2020, 10:01 [IST]
English summary
School student from Kerala develops multipurpose agricultural vehicle. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+