ಫೇಸ್‌ಮಾಸ್ಕ್ ಧರಿಸಿದರೇ ಉಸಿರುಗಟ್ಟುವುದಂತೆ ಈ ಸ್ವಾಮೀಜಿಗಳಿಗೆ

ಕರೋನಾ ವೈರಸ್ ಎರಡನೇ ಅಲೆ ಭಾರತದಲ್ಲಿ ಹೆಚ್ಚು ಹಾನಿಯನ್ನುಂಟು ಮಾಡುತ್ತಿದೆ. ಕರೋನಾ ವೈರಸ್ ಹರಡುವುದನ್ನು ತಡೆಯಲು ಜನರಿಗೆ ಫೇಸ್‌ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ. ಜನರು ಮನೆಯಿಂದ ಹೊರ ಬಂದಾಗ ಕಡ್ಡಾಯವಾಗಿ ಫೇಸ್‌ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ.

ಫೇಸ್‌ಮಾಸ್ಕ್ ಧರಿಸಿದರೇ ಉಸಿರುಗಟ್ಟುವುದಂತೆ ಈ ಸ್ವಾಮೀಜಿಗಳಿಗೆ

ವಾಹನಗಳಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗಲೂ ಫೇಸ್‌ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೂ ಹಲವಾರು ಜನರು ಫೇಸ್‌ಮಾಸ್ಕ್ ಧರಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಕರೋನಾ ವೈರಸ್ ಸೋಂಕು ಹಿಂದಿಗಿಂತ ಹೆಚ್ಚು ವೇಗವಾಗಿ ಹರಡುತ್ತಿದೆ.

ಫೇಸ್‌ಮಾಸ್ಕ್ ಧರಿಸಿದರೇ ಉಸಿರುಗಟ್ಟುವುದಂತೆ ಈ ಸ್ವಾಮೀಜಿಗಳಿಗೆ

ಇದೇ ಪರಿಸ್ಥಿತಿ ಮುಂದುವರೆದರೆ ಭಾರತದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂಬ ಆತಂಕ ಎದುರಾಗಿದೆ. ಕರೋನಾ ವೈರಸ್ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರಗಳು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಫೇಸ್‌ಮಾಸ್ಕ್ ಧರಿಸಿದರೇ ಉಸಿರುಗಟ್ಟುವುದಂತೆ ಈ ಸ್ವಾಮೀಜಿಗಳಿಗೆ

ಫೇಸ್‌ಮಾಸ್ಕ್ ಧರಿಸದೇ ಮನೆಯಿಂದ ಹೊರ ಬರುವವರಿಗೆ ದಂಡ ವಿಧಿಸಲಾಗುತ್ತಿದೆ. ಜನರು ಮನೆಯಿಂದ ಹೊರ ಬರುವಾಗ ಸರಿಯಾದ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಫೇಸ್‌ಮಾಸ್ಕ್ ಧರಿಸಿದರೇ ಉಸಿರುಗಟ್ಟುವುದಂತೆ ಈ ಸ್ವಾಮೀಜಿಗಳಿಗೆ

ಸರ್ಕಾರದಲ್ಲಿ ಉನ್ನತ ಸ್ಥಾನಗಳಲ್ಲಿ ಇರುವ ಅಧಿಕಾರಿಗಳಿಂದ ಹಿಡಿದು ಕೆಳ ಹಂತದ ಸಿಬ್ಬಂದಿಯವರೆಗೆ ಹಲವಾರು ಜನರು ಕರೋನಾ ವೈರಸ್ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂಬುದು ಅಧ್ಯಯನದಲ್ಲಿ ಕಂಡು ಬಂದಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಫೇಸ್‌ಮಾಸ್ಕ್ ಧರಿಸಿದರೇ ಉಸಿರುಗಟ್ಟುವುದಂತೆ ಈ ಸ್ವಾಮೀಜಿಗಳಿಗೆ

ಫೇಸ್‌ಮಾಸ್ಕ್ ಧರಿಸದ ಪ್ರತಿಯೊಬ್ಬರಿಗೂ ದಂಡ ವಿಧಿಸಲಾಗುತ್ತಿದೆ. ಫೇಸ್‌ಮಾಸ್ಕ್ ಧರಿಸದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸ್ವಾಮೀಜಿಯೊಬ್ಬರು ತಮ್ಮನ್ನು ಪ್ರಶ್ನಿಸಿದಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫೇಸ್‌ಮಾಸ್ಕ್ ಧರಿಸಿದರೇ ಉಸಿರುಗಟ್ಟುವುದಂತೆ ಈ ಸ್ವಾಮೀಜಿಗಳಿಗೆ

ಪೊಲೀಸರೊಂದಿಗೆ ವಾಗ್ವಾದದಲ್ಲಿ ತೊಡಗಿದ್ದ ಸ್ವಾಮೀಜಿಗಳು ಮಧ್ಯಪ್ರದೇಶದ ತಮೋ ಮೂಲದ ಅಯೋಧ್ಯಾ ರಾಮ್ ಗೆನ್ಬುಮಿ ನಿರ್ಮನ್ ಟ್ರಸ್ಟ್‌ನ ರಾಷ್ಟ್ರೀಯಉಪಾಧ್ಯಕ್ಷ ಸ್ವಾಮಿ ಆತ್ಮಾನಂದ ಸರಸ್ವತಿ ಎಂದು ತಿಳಿದು ಬಂದಿದೆ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಫೇಸ್‌ಮಾಸ್ಕ್ ಧರಿಸಿದರೇ ಉಸಿರುಗಟ್ಟುವುದಂತೆ ಈ ಸ್ವಾಮೀಜಿಗಳಿಗೆ

ಅವರು ಫೇಸ್‌ಮಾಸ್ಕ್ ಧರಿಸದೆ ಸಾರ್ವಜನಿಕ ರಸ್ತೆಯಲ್ಲಿ ಮಹೀಂದ್ರಾ ಎಕ್ಸ್‌ವಿ 500 ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ವಾಹನವನ್ನು ತಡೆದ ಪೊಲೀಸರು ಫೇಸ್‌ಮಾಸ್ಕ್ ಧರಿಸುವಂತೆ ಹೇಳಿದ್ದಾರೆ. ಫೇಸ್‌ಮಾಸ್ಕ್ ಧರಿಸಲು ನಿರಾಕರಿಸಿದ ಅವರು ವಿಲಕ್ಷಣ ಉತ್ತರ ನೀಡಿದ್ದಾರೆ.

ಫೇಸ್‌ಮಾಸ್ಕ್ ಧರಿಸಿದರೇ ಉಸಿರುಗಟ್ಟುವುದಂತೆ ಈ ಸ್ವಾಮೀಜಿಗಳಿಗೆ

ಪ್ರಧಾನಿ ಮೋದಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವಂತೆ ಹೇಳಿದ್ದಾರೆ. ಅದನ್ನೇ ನಾನು ಮಾಡುತ್ತಿದ್ದೇನೆ. ಫೇಸ್‌ಮಾಸ್ಕ್ ಧರಿಸಿದರೇ ನನಗೆ ಉಸಿರುಗಟ್ಟುತ್ತದೆ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ. ಈ ಕಾರಣಕ್ಕೆ ನಾನು ಫೇಸ್‌ಮಾಸ್ಕ್ ಧರಿಸುವುದಿಲ್ಲವೆಂದು ಹೇಳಿದ್ದಾರೆ.

MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಫೇಸ್‌ಮಾಸ್ಕ್ ಧರಿಸಿದರೇ ಉಸಿರುಗಟ್ಟುವುದಂತೆ ಈ ಸ್ವಾಮೀಜಿಗಳಿಗೆ

ಪೊಲೀಸರು ಅವರಿಗೆ ಫೇಸ್‌ಮಾಸ್ಕ್ ಧರಿಸುವಂತೆ ಪದೇ ಪದೇ ಕೇಳಿಕೊಂಡಿದ್ದಾರೆ. ಆದರೆ ಅವರು ತಮ್ಮ ಹಠವನ್ನು ಬಿಟ್ಟಿಲ್ಲ. ಈ ಕಾರಣಕ್ಕೆ ಪೊಲೀಸರು ಅವರಿಗೆ ದಂಡ ವಿಧಿಸಿದ್ದಾರೆ. ಭಾರತದಲ್ಲಿ ಕೋವಿಡ್ 19 ವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿದಿನ ಮೂರು ಲಕ್ಷ ಹೊಸ ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ.

ಜೊತೆಗೆ ವೈರಸ್‌ನಿಂದ ಸಾವನ್ನಪ್ಪುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಅಗತ್ಯವೆಂದು ಭಾವಿಸುದ್ದಾರೆ. ಆದರೆ ಕೆಲವರು ಫೇಸ್‌ಮಾಸ್ಕ್ ಧರಿಸುವುದನ್ನು ಅಡ್ಡಿ ಎಂದು ಪರಿಗಣಿಸುತ್ತಾರೆ. ಆದರೆ ಫೇಸ್‌ಮಾಸ್ಕ್ ಧರಿಸುವುದು ಹಿಂದೆಂದಿಗಿಂತ ಈಗ ಹೆಚ್ಚು ಅಗತ್ಯವಾಗಿದೆ.

MOSTREAD: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಫೇಸ್‌ಮಾಸ್ಕ್ ಧರಿಸಿದರೇ ಉಸಿರುಗಟ್ಟುವುದಂತೆ ಈ ಸ್ವಾಮೀಜಿಗಳಿಗೆ

ವಾಹನದಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗಲೂ ಫೇಸ್‌ಮಾಸ್ಕ್ ಧರಿಸುವುದರಿಂದ ಪೊಲೀಸರು ದಂಡ ವಿಧಿಸುವುದರಿಂದ ಪಾರಾಗಬಹುದು. ಜೊತೆಗೆ ಮಹಾಮಾರಿ ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಬಹುದು.

ಚಿತ್ರಕೃಪೆ: ಕೋಬ್ರಾಪೋಸ್ಟ್

Most Read Articles

Kannada
English summary
Swami Atmanand Saraswati refuses to wear mask argues with cops. Read in Kannada.
Story first published: Monday, May 3, 2021, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X