ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗೆ ಬೆಂಕಿ ಹಚ್ಚಿ ಪರಾರಿಯಾದ ಮಹಿಳೆ! ವಿಡಿಯೋ ವೈರಲ್!
ಮನೆ ಮುಂದೆ ನಿಲ್ಲಿಸಿರುವ ವಾಹನಗಳಿಗೆ ಬೆಂಕಿ ಹಚ್ಚುವುದು, ಕಲ್ಲು ಹೊಡೆದು ಹಾನಿ ಮಾಡಿರುವ ಪ್ರಕರಣಗಳು ವರದಿಯಾಗುತ್ತಲೇ ಇದೆ. ಅಂತಹದ್ದೆ ಪ್ರಕರಣ ಇದೀಗ ದೆಹಲಿಯಲ್ಲಿ ನಡೆದಿದ್ದು, ಮಹಿಳೆಯೊಬ್ಬರು ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವೀಡಿಯೊ ಸೊಶೀಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಹೌದು, ದ್ವಿಚಕ್ರ ವಾಹನಕ್ಕೆ ಮಹಿಳೆಯೊಬ್ಬರು ಬೆಂಕಿ ಹಚ್ಚುತ್ತಿರುವ ವೀಡಿಯೊ ಭಾರಿ ವೈರಲ್ ಆಗಿದೆ. ಈ ಘಟನೆ ಆಗ್ನೇಯ ದೆಹಲಿಯ ಜೈತ್ಪುರ ಪ್ರದೇಶದಲ್ಲಿ ನಡೆದಿದೆ. ಮನೆ ಮುಂದೆ ನಿಲ್ಲಿಸಿರುವ ಮೋಟಾರ್ ಸೈಕಲ್ ಬಳಿ ಬಂದಿ ಬೆಂಕಿ ಹಚ್ಚಿಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಗಾದ್ರೆ ಮಹಿಳೆ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆಗೆ ಕಾರಣ ಏನು? ಇದೆಲ್ಲದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಮನೆಗಳ ಮುಂದೆ ನಿಲ್ಲಿಸಿರುವ ವಾಹನಗಳಿಗೆ ಬೆಂಕಿ ಹಂಚಿ ವಿಕೃತಿ ಮೆರೆಯುವ ಘಟನೆಗಳು ಆಗಾಗ ವರದಿಯಾಗುತ್ತಿವೆ. ಇದೇ ಮಾದರಿಯ ಘಟನೆ ದೆಹಲಿಯಲ್ಲಿ ಕೂಡ ನಡೆದಿದೆ. ಆದರೆ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೊ ಎಲ್ಲೆಡೆ ವೈರಲ್ ಆಗಿದೆ. ಇನ್ನು ಬೈಕ್ಗೆ ಬೆಂಕಿ ಹಚ್ಚಿದ ಮಹಿಳೆ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾಳೆ. ಆದರೆ ನಂತರ ಮತ್ತೊಂದು ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸುವಾಗ ಸ್ಥಳೀಯರು ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನು ಬೈಕ್ಗೆ ಬೆಂಕಿ ಹಚ್ಚುವುದಕ್ಕೆ ಕಾರಣ ಏನು ಅನ್ನೊದು ತಿಳಿದುಬಂದಿಲ್ಲ. ಈ ವಿಷಯವಾಗಿ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಮುಂದಿನ ದಿನಗಳ ಕಾರಣವೇನು ಅನ್ನೊದು ಬಹಿರಂಗವಾಗುವ ಸಾಧ್ಯತೆಯಿದೆ. ಇನ್ನು ಈ ಮಹಿಳೆಯು ಬೆಂಕಿ ಹಚ್ಚಿರುವ ಬೈಕ್ ಎಲೆಕ್ಟ್ರಾನಿಕ್ ಇಂಧನ ಇಂಜೆಕ್ಷನ್ ಸಿಸ್ಟಮ್ ಬದಲಿಗೆ ಕಾರ್ಬ್ಯುರೇಟರ್ ಲಾಕ್ ಮಾಡಲಾಗಿರುತ್ತದೆ. ಈ ಮೋಟಾರ್ಸೈಕಲ್ನ ಇಂಧನವನ್ನು ಪೆಟ್ರೋಲ್ ಹೊರತೆಗೆಯುವುದು ಸುಲಭವಾಗಿದೆ. ವೀಡಿಯೋದಲ್ಲಿರುವ ಮಹಿಳೆ ಕೂಡ ಅದೇ ಪೈಪ್ ತೆಗೆದು ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದಂತಿದೆ.

ಕಾರ್ಬ್ಯುರೇಟರ್ನಿಂದ ಹೊರಬರುವ ಫೀಡರ್ ಪೈಪ್ ಅನ್ನು ತೆಗೆದುಹಾಕುವ ಮೂಲಕ ಪೆಟ್ರೋಲ್ ನಾಬ್ನಿಂದ ಸುಲಭವಾಗಿ ಪೆಟ್ರೋಲ್ ಅನ್ನು ಹೊರತೆಗೆಯಬಹುದಾಗಿದೆ. ಇನ್ನು ದೆಹಲಿಯಲ್ಲಿ ನಡೆದಿರುವ ಈ ಘಟನೆ ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಹಲವು ಘಟನೆಗಳು ದೆಹಲಿಯಲ್ಲಿ ವರದಿಯಾಗಿವೆ. ಇತ್ತೀಚೆಗಷ್ಟೇ, ಮಲ್ಟಿ ಲೆವೆಲ್ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಮಾರುತಿ ಸುಜುಕಿ ಎರ್ಟಿಗಾ ಕಾರಿಗೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ 23 ವರ್ಷದ ಯುವಕನನ್ನು ದೆಹಲಿ ಪೊಲೀಸರು ಹಿಡಿದಿದ್ದಾರೆ ಅನ್ನೊದನ್ನ ಗಮನಿಸಬಹುದಾಗಿದೆ.
ಎಲೆಕ್ಟ್ರಾನಿಕ್ ವೆಹಿಕಲ್ಗಳಲ್ಲಿ ಬೆಂಕಿ ಹೊತ್ತುಕೊಳ್ಳಲು ಕಾರಣ ಏನು?
ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಮುಖ್ಯ ಕಾರಣವೆಂದರೆ, ಈಗಿರುವ ಎಲೆಕ್ಟ್ರಿಕ್ ವಾಹನಗಳು ಭಾರತೀಯ ಪರಿಸರಕ್ಕೆ ಸೂಕ್ತವಾಗಿ ನಿರ್ಮಾಣವಾಗುತ್ತಿಲ್ಲ ಎಂಬುದು ಐಐಟಿಯ ಸಂಶೋಧಕರ ಅಭಿಪ್ರಾಯ. ದೇಶದ ಬಹುತೇಕ ಎಲೆಕ್ಟ್ರಿಕ್ ವಾಹನ ಕಂಪನಿಗಳು ಇತರ ದೇಶಗಳಿಂದ ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಬಳಸುವ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತವೆ.
ಈ ಸಾಧನಗಳನ್ನು ಭಾರತೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ತಾಪಮಾನವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸುತ್ತಿಲ್ಲ, ಆದ್ದರಿಂದ ಅವು ಬೇಗನೆ ಹಾನಿಗೊಳಗಾಗುತ್ತಿವೆ. ಎಲೆಕ್ಟ್ರಿಕ್ ಸ್ಕೂಟರ್ಗಳ ಪವರ್ಟ್ರೈನ್ಗಳಲ್ಲಿ ಕಳಪೆ ವೈರಿಂಗ್ ಮತ್ತು ಬ್ಯಾಟರಿ ತಂತ್ರಜ್ಞಾನವು ಬೆಂಕಿ ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಎಲೆಕ್ಟ್ರಿಕ್ ವಾಹನದ ಬ್ಯಾಟರಿಯನ್ನು ಚಾರ್ಜ್ ಮಾಡುವಾಗ, ಅದರ ಉಷ್ಣತೆಯು ಹೆಚ್ಚಾಗುತ್ತದೆ. ಬ್ಯಾಟರಿಯನ್ನು ಚಾರ್ಜ್ ಮಾಡಿದ ನಂತರ ವಾಹನವನ್ನು ಚಾಲನೆ ಮಾಡುವುದರಿಂದ ಬ್ಯಾಟರಿಯು ತಣ್ಣಗಾಗಲು ಸಮಯವನ್ನು ನೀಡುವುದಿಲ್ಲ, ಇದರಿಂದಾಗಿ ಬ್ಯಾಟರಿಯು ಹೆಚ್ಚು ಬಿಸಿಯಾಗುತ್ತದೆ ಮತ್ತು ಬೆಂಕಿಯ ಅಪಾಯವನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ, ಸ್ವಾಪ್ ಗ್ರಿಡ್ ನಿಮಗೆ ಸಂಪೂರ್ಣ ಚಾರ್ಜ್ ಮಾಡಿದ ಬ್ಯಾಟರಿಯನ್ನು ನೀಡುತ್ತದೆ, ಅದು ಸಂಪೂರ್ಣವಾಗಿ ಚಾರ್ಜ್ ಆದ ನಂತರ ಸ್ವಲ್ಪ ಸಮಯದವರೆಗೆ ಗ್ರಿಡ್ನಲ್ಲಿದ್ದ ನಂತರ ತಂಪಾಗುತ್ತದೆ.


Click it and Unblock the Notifications








