ಕಾರ್ಗಿಲ್ ಯುದ್ಧದಲ್ಲಿ ಮಡಿದ ಸ್ನೇಹಿತರಿಗಾಗಿ ಸೇನೆಯ 3,620 ಕಿ.ಮೀ ರೈಡ್ ಯಶಸ್ವಿ
24 ವರ್ಷಗಳ ಹಿಂದೆ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸುವ ಗುರಿಯನ್ನು ಹೊತ್ತು ಆರಂಭವಾಗಿದ್ದ ಕಾರ್ಗಿಲ್ ವಿಜಯ್ ದಿವಸ್ ರೈಡ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಭಾರತೀಯ ಸಶಸ್ತ್ರ ಪಡೆಗಳ ಅನುಭವಿಗಳು, ಅಧಿಕಾರಿಗಳು ಮತ್ತು ಸೈನಿಕರನ್ನು ಒಳಗೊಂಡ 24 ಸವಾರರ ಬೆಂಗಾವಲು ಪಡೆ ರೈಡ್ನಲ್ಲಿ ಭಾಗವಹಿಸಿತ್ತು.
ಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ ಸಹಭಾಗಿತ್ವದಲ್ಲಿ ಭಾರತೀಯ ಸಶಸ್ತ್ರ ಪಡೆ ಕಳೆದ 2 ಜುಲೈ 2023 ರಂದು ನಾಗಾಲ್ಯಾಂಡ್ನ ಕೊಹಿಮಾದಿಂದ ರೈಡ್ ಅನ್ನು ಆರಂಭಿಸಿತ್ತು. ರಾಷ್ಟ್ರವನ್ನು ರಕ್ಷಿಸುವ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ನಮ್ಮ ಹೆಮ್ಮೆ ಧೀರರ ಆತ್ಮಕ್ಕೆ ಗೌರವ ಸಲ್ಲಿಸುವುದು ರೈಡ್ನ ಪ್ರಮುಖ ಉದ್ದೇಶವಾಗಿದೆ.

ನಾಗಾ ರೆಜಿಮೆಂಟ್ ರೈಡ್: ಈ ವರ್ಷ ಕಾರ್ಗಿಲ್ ವಿಜಯ್ ದಿವಸ್ ರೈಡ್ ಅನ್ನು ಭಾರತೀಯ ಸೇನೆಯ ನಾಗಾ ರೆಜಿಮೆಂಟ್ ಕೈಗೊಂಡಿತ್ತು. ನಾಗಾಲ್ಯಾಂಡ್ನ ಕೊಹಿಮಾದಿಂದ, ಭಾರತೀಯ ಸಶಸ್ತ್ರ ಪಡೆಗಳ ಅನುಭವಿಗಳು, ಅಧಿಕಾರಿಗಳು ಮತ್ತು ಸೈನಿಕರನ್ನು ಒಳಗೊಂಡ 24 ಸವಾರರ ಬೆಂಗಾವಲು ಪಡೆ ರೈಡ್ ಉದ್ದಕ್ಕೂ ಅನುಕರಣೀಯ ಏಕತೆ ಮತ್ತು ಸೌಹಾರ್ದತೆಯನ್ನು ಪ್ರದರ್ಶಿಸಿತು.
ಥೀಮ್ನ ಸಾಂಕೇತಿಕ ಪ್ರಾತಿನಿಧ್ಯವಾಗಿ ಮತ್ತು ನಮ್ಮ ಮಡಿದ ವೀರರಿಗೆ ಶ್ರದ್ಧಾಂಜಲಿಯಾಗಿ, ಸವಾರರು ತಮ್ಮೊಂದಿಗೆ ನಾಗಾಗಳ ಭೂಮಿಯಿಂದ ಪವಿತ್ರ ಮಣ್ಣನ್ನು ತೆಗೆದುಕೊಂಡು 3,620 ಕಿ.ಮೀ. ಗಳ ಪ್ರಯಾಣವನ್ನು ಕೈಗೊಂಡಿದ್ದರು. ಸವಾಲಿನ ಭೂಪ್ರದೇಶಗಳು, ಪ್ರಮುಖ ಮಿಲಿಟರಿ ಸಂಸ್ಥೆಗಳು ಮತ್ತು ಗೌರವಾನ್ವಿತ ಯುದ್ಧ ಸ್ಮಾರಕಗಳ ಮೂಲಕ ಪ್ರಯಾಣಿಸಿದ್ದರು.

ಕಾರ್ಗಿಲ್ನ ದ್ರಾಸ್ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಸವಾರಿ ಮುಕ್ತಾಯಗೊಂಡಿತು, ಅಲ್ಲಿ ನಾಗಾ ರೆಜಿಮೆಂಟ್ನ ಸವಾರರು ಪವಿತ್ರ ಮಣ್ಣನ್ನು GOC 8 ವಿಭಾಗ, ಮೇಜರ್ ಜನರಲ್ ಸಚಿನ್ ಮಲಿಕ್ ಅವರಿಗೆ ಪವಿತ್ರ ಮಣ್ಣನ್ನು ಹಸ್ತಾಂತರಿಸಿದರು. ದೇಶಕ್ಕಾಗಿ ವೀರಾವೇಶದಿಂದ ಹೋರಾಡಿ ಮಡಿದ ವೀರಯೋಧರಿಗೆ ಸವಾರರು ತಮ್ಮ ಗೌರವವನ್ನು ಸಲ್ಲಿಸಿದರು.
ರೈಡ್ನ ಭಾಗವಾಗಿ, ಸವಾರರು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ದಿಮಾಪುರ್, ಗುವಾಹಟಿ, ಸಿಲಿಗುರಿ, ದಾನಪುರ, ವಾರಣಾಸಿ, ಲಕ್ನೋ, ದೆಹಲಿ NCR, ಚಂಡೀಗಢ, ಡೆಹ್ರಾಡೂನ್, ದ್ರಾಸ್ ಸೇರಿದಂತೆ ದೇಶದ ವಿವಿಧ ಪ್ರಮುಖ ನಗರಗಳ ಮೂಲಕ ಪ್ರಯಾಣಿಸಿದ್ದರು. ಗುವಾಹಟಿ ಮತ್ತು ಚಂಡೀಗಢದಲ್ಲಿ, ಜಾವಾ ಯೆಜ್ಡಿ ಡೀಲರ್ಶಿಪ್ಗಳಲ್ಲಿ ಸವಾರರನ್ನು ಅಭಿನಂದಿಸಲಾಯಿತು.

ಜಾವಾ ಯೆಜ್ಡಿ ಕೊಡುಗೆ: ಜಾವಾ ಯೆಜ್ಡಿ ಮೋಟಾರ್ಸೈಕಲ್ಸ್ ತನ್ನ ಮೊದಲ ಬ್ಯಾಚ್ ಉತ್ಪಾದನಾ ಮೋಟಾರ್ಸೈಕಲ್ಗಳಿಂದ 13 ಮೋಟಾರ್ಸೈಕಲ್ಗಳನ್ನು ಹರಾಜು ಮಾಡುವ ಮೂಲಕ ರೂ. 1.49 ಕೋಟಿ ಮೊತ್ತವನ್ನು ಸಂಗ್ರಹಿಸಿ, ಹರಾಜಿನಿಂದ ಬಂದ ಹಣವನ್ನು ಸಶಸ್ತ್ರ ಪಡೆಗಳ ಧ್ವಜ ದಿನದ ನಿಧಿಗೆ ಕೊಡುಗೆಯಾಗಿ ನೀಡಿದೆ.
ವೀರ್ ನಾರಿಸ್ (ಯುದ್ಧ ವೀರರ ವಿಧವೆಯರು) ತಮ್ಮ ಮಕ್ಕಳೊಂದಿಗೆ ವಾಸಿಸುವ ಲೇಹ್ನ ವಾರ್ ಹೀರೋ ಕಾಲೋನಿಯಲ್ಲಿ ಸಮುದಾಯ ಭವನದ ಕಟ್ಟಡಕ್ಕೆ ಕೊಡುಗೆ ನೀಡಲಾಗಿದೆ. ಈಶಾನ್ಯ ಭಾರತದಾದ್ಯಂತ ತಮ್ಮ 'ಸೆವೆನ್ ಸಿಸ್ಟರ್ಸ್ ರೈಡ್' ಗಾಗಿ ಮೋಟಾರ್ ಸೈಕಲ್ಗಳು, ಸೇವಾ ಬೆಂಬಲಗಳೊಂದಿಗೆ ಭಾರತೀಯ ನೌಕಾಪಡೆಯನ್ನು ಬೆಂಬಲಿಸುವುದು ಹಾಗೂ ಈ ಪ್ರದೇಶದ ಯುವಕರಲ್ಲಿ ಅದ್ಭುತವಾದ ವೃತ್ತಿಜೀವನದ ಆಯ್ಕೆಯಾಗಿ ನೌಕಾಪಡೆಯನ್ನು ಹೈಲೈಟ್ ಮಾಡುವ ಉದ್ದೇಶ ಹೊಂದಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಕ್ಲಾಸಿಕ್ ಲೆಜೆಂಡ್ಸ್ನ ಸಿಇಒ ಆಶಿಶ್ ಸಿಂಗ್ ಜೋಶಿ ಮಾತನಾಡಿ, ಕಾರ್ಗಿಲ್ ವಿಜಯ್ ದಿವಸ್ನ ಮಹತ್ವದ ಸಂದರ್ಭದಲ್ಲಿ ಭಾರತೀಯ ಸಶಸ್ತ್ರ ಪಡೆಗಳೊಂದಿಗಿನ ತನ್ನ ನಿರಂತರ ಪಾಲುದಾರಿಕೆಯನ್ನು ಕಂಪನಿಯು ಆಚರಿಸುತ್ತಿದೆ ಎಂದು ಅಪಾರ ಹೆಮ್ಮೆಯನ್ನು ವ್ಯಕ್ತಪಡಿಸಿದರು. ಮಿಲಿಟರಿ ಸೇವೆಯ ಕುಟುಂಬದ ಹಿನ್ನೆಲೆಯೊಂದಿಗೆ, ನಮ್ಮ ಸೈನಿಕರ ಶೌರ್ಯವನ್ನು ನಾನು ಪ್ರಶಂಸಿಸುತ್ತೇನೆ ಎಂದರು.
ಸವಾಲುಗಳು ಮತ್ತು ಅನಿಶ್ಚಿತತೆಗಳ ನಡುವೆ ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವದಿಂದ ಅವರ ಹಿಂದೆ ದೃಢವಾಗಿ ನಿಂತಿರುವ ಅವರ ಕುಟುಂಬಗಳು ಮಾಡಿದ ಅಚಲವಾದ ಬೆಂಬಲ, ತ್ಯಾಗಗಳಿಗೆ ಕೃತಜ್ಞತೆ ಸಲ್ಲಿಸಿದರು. ನಾವು ಸಶಸ್ತ್ರ ಪಡೆಗಳೊಂದಿಗೆ ನಿಕಟ ಸಮನ್ವಯದಲ್ಲಿ ಹಲವಾರು ಕಾರಣಗಳಿಗೆ ನಮ್ಮ ಬೆಂಬಲವನ್ನು ಸತತವಾಗಿ ವಿಸ್ತರಿಸಿದ್ದೇವೆ, ಜನಸಾಮಾನ್ಯರಲ್ಲಿ ನಿರ್ಣಾಯಕ ಜಾಗೃತಿಯನ್ನು ಯಶಸ್ವಿಯಾಗಿ ಬೆಳೆಸಿದ್ದೇವೆ ಎಂದರು.


Click it and Unblock the Notifications