Just In
- 11 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 12 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 13 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 13 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- News Karnataka LS Election 2024 LIVE: ಇಂದು ಮೊದಲ ಹಂತದ ಮತದಾನಕ್ಕೆ ಸಿದ್ಧವಾದ ರಾಜ್ಯದ 14 ಕ್ಷೇತ್ರಗಳು
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಂಡೋನೇಷ್ಯಾದಲ್ಲಿ 3 ದಿನಗಳ ಟ್ರಾಫಿಕ್ ಸಂಕಟಕ್ಕೆ 12 ಮರಣ
ಮುಸ್ಲಿಂ ಧರ್ಮದ ಪವಿತ್ರ ಹಬ್ಬ ರಂಜಾನ್ ಪ್ರಯುಕ್ತ ಇಂಡೋನೇಷ್ಯಾದಲ್ಲಿ ಮೂರು ದಿನಗಳ ಪರ್ಯಂತ (2016 ಜುಲೈ 03ರಿಂದ 05) ಉಂಟಾಗಿರುವ ನಿರಂತರ ಟ್ರಾಫಿಕ್ ಜಾಮ್ ನಿಂದಾಗಿ ಕನಿಷ್ಠ 12 ಮಂದಿ ಮೃತಪಟ್ಟಿರುವ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.
ರಂಜಾನ್
ಹಬ್ಬದ
ಪ್ರಯುಕ್ತ
ಸಾವಿರಾರು
ಮಂದಿ
ತಮ್ಮ
ತಮ್ಮ
ಊರುಗಳಿಗೆ
ಹೊರಡುವ
ತವಕದಲ್ಲಿದ್ದರು.
ಇದರ
ಬೆನ್ನಲ್ಲೇ
ಬ್ರೆಕ್ಸಿಟ್
ನಲ್ಲಿ
ಉಂಟಾಗಿರುವ
ಭಾರಿ
ವಾಹನ
ದಟ್ಟಣೆಗೆ
ಅನೇಕ
ಬಡ
ಜೀವಗಳು
ಬಲಿಯಾಗಿವೆ.
ಇಂಡೋನೇಷ್ಯಾದ ಪ್ರಮುಖ ಮಾರ್ಗವಾಗಿರುವ ಬ್ರೆಕ್ಸಿಟ್ ನಲ್ಲಿ ಪದೇ ಪದೇ ಟ್ರಾಫಿಕ್ ಜಾಮ್ ಸೃಷ್ಟಿಯಾಗುತ್ತಿರುವ ಪ್ರಸಂಗ ಸಾಮಾನ್ಯವಾಗಿಬಿಟ್ಟಿದೆ.
ಈ ಬಾರಿ ಸರಿ ಸುಮಾರು 21 ಕೀ.ಮೀ. ಗಳಷ್ಟು ದೂರ ಮೂರು ದಿನಗಳಷ್ಟು ಕಾಲ ನಿರಂತರ ವಾಹನ ದಟ್ಟಣೆ ಸೃಷ್ಟಿಯಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಟ್ರಾಫಿಕ್ ಜಾಮ್ ನಿಂದಾಗಿ 12 ಮಂದಿ ಜೀವ ತೆತ್ತಿದ್ದಾರೆ. ಇದಕ್ಕಿರುವ ಕಾರಣವನ್ನು ಪರಿಶೀಲಿಸಿದಾಗ ಅತಿಯಾದ ದಣಿವಿನಿಂದಾಗಿ ಉಂಟಾಗಿರುವ ಆರೋಗ್ಯ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ವಯಸ್ಸಾದವರು ಸೇರಿದ್ದಾರೆ.
ಇಂಡೋನೇಷ್ಯಾ ಸಾರಿಗೆ ಸಚಿವಾಲಯದ ವರದಿಗಳ ಪ್ರಕಾರ ಪ್ರಸಕ್ತ ಸಾಲಿನಲ್ಲಿ 10,000ದಷ್ಟು ವಾಹನಗಳು ಟ್ರಾಫಿಕ್ ಜಂಜಾಟಕ್ಕೆ ಸಿಕ್ಕಿ ಹಾಕಿಕೊಂಡಿದ್ದವು.
ಒಟ್ಟಾರೆಯಾಗಿ ಹಬ್ಬದ ಸಂಭ್ರಮಾಚರಣೆಯ ದಿನಗಳಲ್ಲಿ ನಡೆದಿರುವ ವಿವಿಧ ಅಪಘಾತ ಪ್ರಕರಣಗಳಲ್ಲಾಗಿ 400ರಷ್ಟು ವಾಹನ ಸಂಚಾರಿಗಳು ಮೃತಪಟ್ಟಿದ್ದಾರೆ.
ಬ್ರೆಬೆಸ್, ಜಾವಾ ದ್ವೀಪದ ಪ್ರಮುಖ ನಗರವಾಗಿದ್ದು, ವರ್ಷಂಪ್ರತಿ ಲಕ್ಷಾಂತರ ಮಂದಿ ಈದ್ ಉಲ್ ಫಿತ್ರ್ ಹಬ್ಬವನ್ನು ಆಚರಿಸುವ ಸಲುವಾಗಿ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಲು ಇದೇ ಹಾದಿಯನ್ನು ಆಶ್ರಯಿಸಿಕೊಂಡಿರುತ್ತಾರೆ.
ಒಟ್ಟಿನಲ್ಲಿ ಇಂಡೋನೇಷ್ಯಾ ವಾಹನ ದಟ್ಟಣೆ ರದ್ಧಾಂತವು ಅಧಿಕೃತರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದ್ದು, ಮುಂದೆಯಾದರೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.