ಸಿಂಗೂರು ಭೂವಿವಾದ: ಟಾಟಾ ಸುಪ್ರಿಂ ಕೋರ್ಟ್ ಮೊರೆ

ಭೂಮಿ ವಿತರಣೆ ಮಾಡಿದ ಕುರಿತು ಯಾವುದೇ ಅಧಿಕೃತ ಪ್ರಕಟನೆ ಹೊರಬೀಳದ ಹಿನ್ನಲೆಯಲ್ಲಿ ತಡೆ ಕೋರುವುದು ಸಾಧ್ಯವಿಲ್ಲವೆಂದು ಹೈಕೋರ್ಟ್ ನಿನ್ನೆ ಹೇಳಿತ್ತು. ಇದನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ ಮೋರೆ ಹೋದ ಟಾಟಾ ಮೋಟರ್ಸ್ ಸರಕಾರದ ನಿರ್ಧಾರಕ್ಕೆ ತಡೆಕೋರುವಂತೆ ಮನವಿ ಮಾಡಿದೆ.
ಈ ಹಿಂದೆ ಬೇರೆ ರಾಜ್ಯಗಳು ನೀಡಿದ ಅಹ್ವಾನವನ್ನು ತಿರಸ್ಕರಿಸಿ ಕಂಪನಿಯು ಬಂಗಾಳದ ಸಿಂಗೂರಿನಲ್ಲಿ ಘಟಕ ಸ್ಥಾಪನೆಗೆ ನಿರ್ಧರಿಸಿತ್ತು. ಆದರೆ ಈಗ ಅಲ್ಲಿನ ಸರಕಾರವು ಈ 600 ಎಕರೆ ಭೂಮಿಯನ್ನು ಮತ್ತೆ ರೈತರಿಗೆ ಮರಳಿಸುವ ಮಸೂದೆ ಅಂಗೀಕರಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ತಡೆ ಕೋರಿ ಟಾಟಾ ಮೋಟರ್ಸ್ ಹೈಕೋರ್ಟ್ ಮೊರೆ ಹೋಗಿತ್ತು. ಇದೀಗ ಸುಪ್ರಿಂ ಕೋರ್ಟ್ ಮೆಟ್ಟಲೇರಿದೆ.


Click it and Unblock the Notifications








