ಎಐಎಡಿಎಂಕೆ ಜಯಲಲಿತಾ ಕಣ್ಣು ಹ್ಯುಂಡೈ ಮ್ಯಾಲೆ

ಹ್ಯುಂಡೈ ಘಟಕದಲ್ಲಿ ಈಗಾಗಲೇ ಎರಡು ಕಾರ್ಮಿಕ ಸಂಘಟನೆಗಳಿವೆ. ಇಲ್ಲಿ ಈಗಾಗಲೇ ನೌಕರರ ಪ್ರತಿಭಟನೆ ಆರಂಭವಾಗುವ ಸೂಚನೆಯೂ ದೊರಕಿದೆ. ಇನ್ನೊಂದು ಹೊಸ ಸಂಘಟನೆ ಆಗಮಿಸಿದರೆ ಹ್ಯುಂಡೈ ಕಂಪನಿಗೆ ಇನ್ನಷ್ಟು ಸಮಸ್ಯೆ ಕಾಡುವ ನಿರೀಕ್ಷೆಯಿದೆ.
ಜಯಲಲಿತಾ ನೇತೃತ್ವದ ಎಐಎಡಿಎಂಕೆಯ ಸಂಘಟನೆ ಅಣ್ಣಾ ತೊಲಿಲಾರ್ ಸಂಘಮ್ ಪೆರವಾಯಿ(ಎಟಿಎಸ್ಪಿ) ಹ್ಯುಂಡೈ ಪ್ರವೇಶಿಸಲು ನಿರ್ಧರಿಸಿದೆ. ಹ್ಯುಂಡೈನಲ್ಲಿ ಶೀಘ್ರದಲ್ಲಿ ಹೊಸ ಕಾರ್ಮಿಕ ಸಂಘಟನೆ ಆರಂಭಿಸುವುದಾಗಿ ಎಟಿಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದೆ.
"ನಾವು ಕೆಲವು ದಿನಗಳ ಹಿಂದೆ ಹ್ಯುಂಡೈ ಫ್ಯಾಕ್ಟರಿ ಹೊರಗಡೆ ನಮ್ಮ ಧ್ವಜವನ್ನು ಹಾಕಿದ್ದೇವೆ. ಅಲ್ಲಿನ ಕೆಲಸಗಾರರು ಅಲ್ಲಿನ ಎರಡು ಕಾರ್ಮಿಕ ಸಂಘಟನೆಗಳಿಂದ ತೃಪ್ತರಾಗದಿದ್ದರೆ ನೂತನ ಸಂಘಟನೆ ಸೇರಬಹುದು. ನಾವು ಕೆಲಸಗಾರರ ಹಕ್ಕುಗಳನ್ನು ರಕ್ಷಿಸಲು ಬದ್ಧರಾಗಿದ್ದೇವೆ" ಎಂದು ಎಟಿಎಸ್ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿನ್ನಸ್ವಾಮಿ ಹೇಳಿದ್ದಾರೆ.
ಹ್ಯುಂಡೈನಲ್ಲೂ ನೌಕರರ ಮುಷ್ಕರ, ಪ್ರತಿಭಟನೆ, ಹೋರಾಟ ಗರಿಗೆದರುವ ಸೂಚನೆಗಳು ದಟ್ಟವಾಗಿವೆ.


Click it and Unblock the Notifications








