Just In
- 28 min ago ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- 40 min ago TVS iQube: ಲಕ್ಷಾಂತರ ಭಾರತೀಯರ ನೆಚ್ಚಿನ ಸ್ಕೂಟರ್ನ ಡೌನ್ಪೇಮೆಂಟ್, ಇಎಂಐ, ಲೋನ್ ವಿವರ!
- 44 min ago viral video: ಬೆಂಗಳೂರಿನಲ್ಲಿ ಮಾತ್ರ ಸಾಧ್ಯ: ಹೆಣ್ಮಗು.. ಹೆಣ್ಮಗು ಓಹ್.. ಎಂದ ನೆಟ್ಟಿಗರು!
- 59 min ago ಯುಗಾದಿ ಜಾತ್ರೆ: ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಿಗೆ ಸಿಹಿಸುದ್ದಿ.. NWKRTCಯಿಂದ ವಿಶೇಷ ಬಸ್ ಸೇವೆ
Don't Miss!
- Movies 'ರಾಮಾಯಣ'ದಲ್ಲಿ 'ಯಶ್' ಗೆ 'ಸಾಕ್ಷಿ ತನ್ವರ್' ನಾಯಕಿ ; 'ಬೇಡವೇ ಬೇಡ' ಎಂದ ಅಭಿಮಾನಿಗಳು..!
- News ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ & ನೆಲಮಂಗಲ ಹೊಸ ಉಪನಗರ: ಡಾ. ಕೆ. ಸುಧಾಕರ್ ಭರವಸೆ!
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಾಟರಿಯಲ್ಲಿ ಲಂಬೊರ್ಗಿನಿ ಕಾರ್ ಗೆದ್ದ ಸೂಫಿ ಅಬ್ದುಲ್ಲಾ
ರಾಬಿನ್ ಶರ್ಮಾ ರಚಿತ "ಫೆರಾರಿ ಮಾರಿದ ಪಕೀರ" ಕೃತಿ ನೀವು ಓದಿರಬಹುದು. ಅದೇ ಹೆಡ್ ಲೈನ್ ನೆನಪಿಸುವಂತೆ ಕೇರಳದ ವ್ಯಕ್ತಿಯೊಬ್ಬ ಲಾಟರಿಯಲ್ಲಿ ಗೆದ್ದ ಲಂಬೊರ್ಗಿನಿ ಕಾರು ಮಾರಾಟ ಮಾಡಲು ಉದ್ದೇಶಿಸಿದ್ದಾನೆ. ಅದರಲ್ಲಿ ಸಿಕ್ಕ ದುಡ್ಡಿನಲ್ಲಿ ಕೊಂಚ ಸ್ವಂತಕ್ಕೆ ಮತ್ತು ಉಳಿದ ದುಡ್ಡನ್ನು ದಾನ ಧರ್ಮಕ್ಕೆ ಮೀಸಲಿಡಲು ಯೋಚಿಸಿದ್ದಾನೆ.
ಅಬುದಾಬಿಯಲ್ಲಿ ಟೊಯೊಟಾ ಡೆಲಿವರಿ ವ್ಯಾನಿನಲ್ಲಿ ಚಾಲಕನಾಗಿ ಕೆಲಸ ಮಾಡುವ ಕೇರಳದ ಸೂಫಿ ಅಬ್ದುಲ್ಲಾ ಮಾಲ್ ನಲ್ಲಿ ಆಯೋಜಿಸಿದ್ದ ಸುಮಾರು 3,786 ರುಪಾಯಿ ಮೌಲ್ಯದ ಲಕ್ಕಿ ಡ್ರಾ ಕೂಪನ್ ಖರೀದಿಸಿದ್ದಾನೆ. ಆ ಜನಪ್ರಿಯ ಲಕ್ಕಿ ಡ್ರಾ ಕೂಪನನ್ನು ಸಾವಿರಾರು ಜನರು ಖರೀದಿಸಿದ್ದರು. ಆದರೆ ಅದೃಷ್ಟ ದೇವತೆ ಒಲಿದದ್ದು ಸೂಫಿ ಅಬ್ದುಲ್ಲಾನಿಗೆ.
ಬಹುಮಾನವಾಗಿ ಈತನಿಗೆ ದೊರಕಿದ್ದು, ಸುಮಾರು 2 ಕೋಟಿ ರುಪಾಯಿ ಮೌಲ್ಯದ ಲಂಬೋರ್ಗಿನಿ ಗಲಾರ್ಡೊ ಸ್ಪೋರ್ಟ್ಸ್ ಕಾರು. ಹಳೆಯ ಸ್ಕೂಟರ್ ಬಿಟ್ಟು ಏನೂ ಸ್ವಂತ ವಾಹನ ಇಲ್ಲದ ಈತನಿಗೆ ಈ ಐಷಾರಾಮಿ ಸ್ಪೋರ್ಟ್ಸ್ ಕಾರು ಸಿಕ್ಕಿದೆ. ಆತನಿಗೆ ಈ ಕಾರಿನಲ್ಲಿ ಶೋಕಿ ಮಾಡುವ ಯಾವ ಆಸೆಯೂ ಇಲ್ವಂತೆ. ಈ ಕಾರನ್ನು ಮಾರಿ ದುಡ್ಡು ಕಿಸೆಗೆ ಹಾಕಿಕೊಳ್ಳುವ ಯೋಜನೆಯನ್ನು ಸೂಪಿ ಅಬ್ದುಲ್ಲಾ ಪ್ರಕಟಿಸಿದ್ದಾನೆ.
ಕೇರಳದ ಜನರ ಪ್ರಮುಖ ಆದಾಯದ ಮೂಲವಿರುವುದು ವಿದೇಶಗಳಲ್ಲಿ ದುಡಿಯುವ ವ್ಯಕ್ತಿಗಳು. ಸೂಫಿ ಅಬ್ದುಲ್ಲಾನದ್ದೂ ಅದೇ ಕಥೆ. ಕಾರು ಮಾರಿದ ದುಡ್ಡನ್ನು ಏನು ಮಾಡುತ್ತಿರಿ ಎಂಬ ಪ್ರಶ್ನೆಗೆ "ಊರಲ್ಲಿ ಮನೆ ಕಟ್ಟಲು ಮಾಡಿದ ಸಾಲ ತೀರಿಸುತ್ತೇನೆ" ಎಂದು ಹೇಳಿದ್ದಾನೆ.
ಸಾಲ ತೀರಿಸಿ ಉಳಿದ ದುಡ್ಡನ್ನು ಏನು ಮಾಡುವಿರಿ ಎಂಬ ಪ್ರಶ್ನೆಗೆ ಉತ್ತರವಾಗಿ ಆತನ ಇನ್ನೊಂದು ಸಮಾಜಮುಖಿ ಮುಖ ಹೊರಬಿದ್ದಿದೆ. ಉಳಿದ ಹಣದಲ್ಲಿ ಅವಶ್ಯಕತೆ ಇದ್ದ ಬಡವರಿಗೆ ಮನೆ ಕಟ್ಟಿಕೊಡುತ್ತಾನಂತೆ. ಸ್ಥಳೀಯ ಮಸೀದಿಯೊಂದಕ್ಕೆ ದೊಡ್ಡ ಮೊತ್ತದ ಹಣವನ್ನು ದಾನ ಮಾಡುವ ಉದ್ದೇಶವೂ ಇದೆಯಂತೆ.
ಸರಿ ಓದುಗರೇ, ಈಗ ನಿಮ್ಮಲ್ಲೊಂದು ಪ್ರಶ್ನೆ. ನಿಮಗೆ ಕೋಟಿ ರುಪಾಯಿ ದೊರಕಿದರೆ ಏನು ಮಾಡುವಿರಿ? ಇಲ್ಲೇ ಕಾಮೆಂಟ್ ಬಾಕ್ಸಿನಲ್ಲಿ ಪ್ರಾಮಾಣಿಕವಾಗಿ ಬರೆಯುವಿರಾ? ಪ್ಲೀಸ್.