ಗಾಯಗೊಂಡ ನೌಕರರ ಕ್ಷಮೆಕೋರಿದ ಮಾರುತಿ

ಗುರ್ ಗಾಂವ್, ಜು 27: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್(ಎಂಎಸ್ಐಎಲ್) ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶಿಂಝೊ ನಕನಿಶಿ ಕಳೆದ ವಾರ ಗುರ್ ಗಾಂವ್ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ, ಇತ್ತೀಚೆಗೆ ಮಾನೆಸರ್ ಘಟಕದಲ್ಲಿ ಗಲಭೆಯಲ್ಲಿ ಗಾಯಗೊಂಡ ಕಂಪನಿಯ ಸಿಬ್ಬಂದಿಗಳ ಕ್ಷಮೆಯಾಚಿಸಿದ್ದಾರೆ.

"ಎರಡನೇ ಮಹಾಯುದ್ಧದ ನಂತರ ನನ್ನ ಸ್ವಂತ ದೇಶ ಜಪಾನಿನಲ್ಲೇ ಹಲವು ಕಾರ್ಮಿಕ ಸಮಸ್ಯೆಗಳನ್ನು ಕಂಡಿದ್ದೇನೆ. ಆದರೆ ಕೆಲವು ವಾರಗಳ ಹಿಂದೆ ಭಾರತದಲ್ಲಿ ನಡೆದಂತಹ ಘಟನೆ ನಾನೂ ಎಲ್ಲೂ ಕಂಡಿಲ್ಲ" ಎಂದು ನಕನಿಶಿ ಹೇಳಿದ್ದಾರೆ. ಯಾಕೆ ಹೀಗಾಯ್ತು ಎನ್ನುವ ಕುರಿತು ಯಾವುದೇ ಸ್ಪಷ್ಟತೆ ಇಲ್ಲವೆಂದು ಅವರು ಹೇಳಿದ್ದಾರೆ.

ಜುಲೈ ಹದಿನೆಂಟರಂದು ಮಾನೆಸರ್ ಘಟಕದ ನೌಕರರು ಮತ್ತು ಆಡಳಿತ ಸಿಬ್ಬಂದಿ ನಡುವೆ ಗಲಭೆಯಾಗಿತ್ತು. ಈ ಗಲಭೆಯಲ್ಲಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಮ್ಯಾನೆಜರ್ ಸಜೀವ ದಹನರಾಗಿದ್ದರು. ಸುಮಾರು 93 ಜನರು ಗಾಯಗೊಂಡಿದ್ದರು. ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾನೆಸರ್ ಘಟಕಕ್ಕೆ ಬೀಗಮುದ್ರೆ ಹಾಕಿತ್ತು.

ಇಂತಹ ಸಮಸ್ಯೆ ಆರಂಭವಾದದ್ದು ಕಳೆದ ಒಂದು ವರ್ಷದಿಂದ. ನೌಕರರ ಸರಣಿ ಪ್ರತಿಭಟನೆಗೆ ಸಿಲುಕಿ ಕಂಪನಿಗೆ 70 ಕೋಟಿ ರುಪಾಯಿಗಿಂತಲೂ ಹೆಚ್ಚು ನಷ್ಟವಾಗಿತ್ತು. ಈ ಪ್ರತಿಭಟನೆ, ಗಲಭೆಯಿಂದಾಗಿ ಪ್ರಯಾಣಿಕ ಕಾರುಗಳ ಮಾರಾಟಕ್ಕೂ ಭಾರೀ ಹಿನ್ನಡೆಯಾಗಿತ್ತು.

ಆದಗ್ಯೂ, ಗಲಭೆಕೋರರ ವಿರುದ್ಧ ಯಾವುದೇ ರಾಜಿನೀತಿ ಅನುಸರಿಸುವುದಿಲ್ಲವೆಂದು ನಕನಿಶಿ ಸ್ಪಷ್ಟಪಡಿಸಿದ್ದಾರೆ. ಅಪರಾಧಿಗಳನ್ನು ಬಂಧಿಸಲೇಬೇಕು ಎಂದು ಒತ್ತಿಹೇಳಿದ್ದಾರೆ. ಮಾರುತಿ ಸುಜುಕಿ ಮಾನೆಸರ್ ಗಲಭೆಯಿಂದಾಗಿ ಸ್ವಿಫ್ಟ್ ಮತ್ತು ಡಿಜೈರ್ ಸಂಗ್ರಹ ಮುಗಿದು ಹೋಗಿದೆ. ವೇಟಿಂಗ್ ಪಿರೆಯಿಡ್ ಹೆಚ್ಚಾಗಿದೆ. ಆದರೆ ಸದ್ಯ ಕಂಪನಿಯು ಈ ಕಾರುಗಳ ಬುಕ್ಕಿಂಗ್ ಸ್ಥಗಿತಗೊಳಿಸಿಲ್ಲ.

More from DriveSpark

Article Published On: Friday, July 27, 2012, 17:30 [IST]
English summary
Shinzo Nakanishi, Managing Director and Chief Executive Officer of Maruti Suzuki India Ltd (MSIL) spent most part of the last week visiting various hospitals in Gurgaon and apologising to company officials injured in the recent scuffles. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+