ನರೇಂದ್ರ ಮೋದಿ ಜಪಾನ್ ಭೇಟಿ ರಹಸ್ಯ ಬಯಲು!

ಮುಂದಿನ ವಾರ ನರೇಂದ್ರ ಮೋದಿ ಜಪಾನ್ ಗೆ ಪ್ರಯಾಣ ಬೆಳೆಸಿ ಸುಜುಕಿ ಮುಖ್ಯಸ್ಥರನ್ನು ಭೇಟಿಯಾಗಲಿದ್ದಾರೆ ಎಂಬ ಸುದ್ದಿಯನ್ನು ಈಗಾಗಲೇ ಕನ್ನಡ ಒನ್ ಇಂಡಿಯಾ ತಾಣದಲ್ಲಿ ಓದಿದ್ದೀರಿ. ಈ ಪ್ರಯಾಣದ ಪ್ರಮುಖ ಉದ್ದೇಶ "ಹರ್ಯಾಣದಲ್ಲಿ ನೌಕರರ ಕಿರಿಕಿರಿಯಿಂದ ಸಂಕಷ್ಟದಲ್ಲಿರುವ ಮಾರುತಿಯ ಮಾನೆಸರ್ ಘಟಕವನ್ನು ಗುಜರಾತಿಗೆ ಸ್ಥಳಾಂತರಿಸುವ ಪ್ರಯತ್ನ" ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಒಂದು ಸಣ್ಣ ಪ್ಲಾಷ್ ಬ್ಯಾಕ್. ಅಂದು ಪಶ್ಚಿಮ ಬಂಗಾಳದಲ್ಲಿ ಭೂವಿವಾದಕ್ಕೆ ಸಿಲುಕಿ ಟಾಟಾ ನ್ಯಾನೊ ಘಟಕ ಸಂಕಷ್ಟಕ್ಕೆ ಒಳಗಾಗಿತ್ತು. ಆ ಸಮಯದಲ್ಲಿ ನ್ಯಾನೊ ಘಟಕವನ್ನು ಗುಜರಾತಿಗೆ ಮೋದಿ ಕರೆಸಿಕೊಂಡಿರುವುದು ಸದ್ಯ ಹಿಸ್ಟರಿ. ಅದೇ ರೀತಿ ದೇಶದ ಕಾರು ಮಾರುಕಟ್ಟೆಯ ಅಗ್ರಜ ಮಾರುತಿ ಸುಜುಕಿಯ ಘಟಕವೊಂದನ್ನು ಗುಜರಾತ್ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಮೋದಿ ಇದ್ದಾರೆ.

ಇತ್ತೀಚೆಗೆ ಮಾರುತಿ ಸುಜುಕಿ ಮಾನೆಸರ್ ಘಟಕದಲ್ಲಿ ನಡೆದ ಘಟನೆ ಎಲ್ಲರನ್ನು ದಿಗ್ಬ್ರಾಂತಿಗೆ ಒಳಪಡಿಸಿತ್ತು. ಉನ್ಮಾದ ನೌಕರರಿಂದ ಮಾನವ ಸಂಪನ್ಮೂಲ ವಿಭಾಗದ ಅವನೀಶ್ ಸಜೀವ ದಹನವಾಗಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು. ಮಾನೆಸರ್ ಘಟಕದಲ್ಲಿ ಉತ್ಪಾದನೆ ಸ್ಥಗಿತವಾಗಿತ್ತು. ಕಂಪನಿಯ ಷೇರುಗಳು ಕುಸಿದಿದ್ದವು.

2 ವರ್ಷದ ಹಿಂದೆ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಸಿಂಗೂರ್‌ನಿಂದ ಟಾಟಾ ನ್ಯಾನೊ ಘಟಕವನ್ನು ಗುಜರಾತಿಗೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಸುಜುಕಿ ಜೊತೆ ಈ ವಾರ ಮೋದಿ ಚರ್ಚೆ ನಡೆಸಲಿದ್ದಾರೆ. ಮಾರುತಿ ಮಾನೆಸರ್ ಘಟಕವು ಸ್ಥಳಾಂತರಗೊಳಿಸುವಲ್ಲಿ ಮೋದಿ ಯಶಸ್ವಿಯಾಗುತ್ತಾರೋ ಕಾದು ನೋಡಬೇಕಿದೆ.

More from DriveSpark

Article Published On: Saturday, July 21, 2012, 15:35 [IST]
English summary
Gujarat chief minister Narendra Modi who will visit Japan is most likely to invite Suzuki officials to visit Gujarat and set up their car plant in the state following the violence at the Manesar plant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+