ವೆಂಟೊ ಕಾರು ಬೆಂಕಿಗಾಹುತಿ, ಸಿಕ್ಕಿಹಾಕಿಕೊಂಡಿದ್ದ ಚಾಲಕ..

ಕೈಲಾಸ್ ಸುರೇಶ್ ಗುಪ್ತಾ(40) ಪುಣೆ ನಗರದ ವೈಶಾಲಿ ರೆಸ್ಟೂರೆಂಟ್ ಸಮೀಪ ಕಾರು ನಿಲ್ಲಿಸಿದ್ದರು. ಮುಂಜಾನೆ ಕಾರು ಸ್ಟಾರ್ಟ್ ಮಾಡಿದ ಸಂದರ್ಭದಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸೀಟ್ ಬೆಲ್ಟ್ ಧರಿಸಿದ ಗುಪ್ತಾ ಹೊರಗೆ ಬರಲು ಸಾಧ್ಯವಾಗದೇ ಒದ್ದಾಡುತ್ತಿದ್ದರು.
ತಕ್ಷಣ ಅಲ್ಲಿ ಸಾಗುತ್ತಿದ್ದ ದಾರಿಹೋಕರು ಕಾರಿನ ಕಿಟಕಿ ಹೊಡೆದು ಕೈಲಾಶ್ ಸುರೇಶರನ್ನು ಹೊರಗೆಳೆದಿದ್ದಾರೆ. ನಂತರ ಪೊಲೀಸರ ನೆರವಿನಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸುರೇಶ್ ಸಹೋದರರು ನೀಡಿದ ಮಾಹಿತಿ ಪ್ರಕಾರ ಬೆಂಕಿಗಾಹುತಿಯಾದ ವೆಂಟೊ ಕಾರು ಖರೀದಿಸಿ ಒಂದು ವರ್ಷವೂ ಆಗಿಲ್ಲವಂತೆ.
ಈ ಬೆಂಕಿಗಾಹುತಿ ಪ್ರಕರಣದ ಕುರಿತು ಫೋಕ್ಸ್ ವ್ಯಾಗನ್ ಕಂಪನಿಯಿಂದ ಯಾವುದೇ ಸ್ಪಷ್ಟಣೆ ಇನ್ನೂ ದೊರಕಿಲ್ಲ. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








