Just In
- 5 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 6 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 6 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 8 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಹಜ ಜೀವನದತ್ತ ಶುಮೇಕರ್; ಆದರೆ ರೇಸ್ ಇನ್ನು ಕನಸಿನ ಮಾತು
ಅಸಂಖ್ಯಾತ ಅಭಿಮಾನಿಗಳ ಪ್ರಾರ್ಥನೆಯನ್ನು ಕೊನೆಗೂ ದೇವರು ಆಲಿಸಿದ್ದಾರೆ. ಹೌದು, ರೇಸ್ ಟ್ರ್ಯಾಕ್ನ ಜೀವಂತ ಮಾಜಿ ದಿಗ್ಗಜ ಮೈಕಲ್ ಶುಮೇಕರ್ ಮತ್ತೆ ಸಹಜ ಜೀವನಕ್ಕೆ ಮರಳಿದ್ದಾರೆ ಎಂಬುದು ಈಗಿನ ಶುಭ ಸಮಾಚಾರ.
ಈ ಸಂಬಂಧ ಶುಮೇಕರ್ ಆಪ್ತರಲ್ಲಿ ಓರ್ವರಾಗಿರುವ ಎಫ್ಐಎ ಅಧ್ಯಕ್ಷ ಜೀನ್ ಟೊಡ್ಟ್ ಖುಷಿ ಸುದ್ದಿ ಬಿತ್ತರಿಸಿದ್ದು, "ಇನ್ನು ಕೆಲವೇ ಸಮಯಗಳಲ್ಲಿ ಶುಮೇಕರ್ ಸಹಜ ಜೀವನ ಪರಿಸ್ಥಿತಿಗೆ ಮರಳಿದ್ದಾರೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಮಾತು ಮುಂದುವರಿಸಿದ ಅವರು "ಸದ್ಯ ಶುಮೇಕರ್ ಕುಟುಂಬದೊಂದಿಗೆ ಇದ್ದು, ನಿಧಾನವಾಗಿಯಾದರೂ ಚಿಕಿತ್ಸೆಗೆ ಉತ್ತಮ ರೀತೀಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ" ಎಂದಿದ್ದಾರೆ.
ಆದರೆ ಅತ್ಯಂತ ಬೇಸರ ಸಂತಿಯೆಂದರೆ ಬಲ್ಲ ಮೂಲಗಳ ಪ್ರಕಾರ ಶುಮೇಕರ್ ಅವರಿಗೆ ಮತ್ತೆ ಹಿಂದಿನ ಹಾಗೆ ರೇಸ್ ಟ್ರ್ಯಾಕ್ಗೆ ಇಳಿಯಲು ಸಾಧ್ಯವಿಲ್ಲ ಎಂಬುದನ್ನು ವೈದ್ಯರು ತಿಳಿಸಿರುವ ಬಗ್ಗೆಯೂ ಮಾಹಿತಿಯಿದೆ. ರೇಸ್ ಟ್ರ್ಯಾಕ್ಗೆ ವಿದಾಯ ಹೇಳಿದರೂ ಶುಮೇಕರ್ ರೇಸ್ ಜೊತೆಗಿನ ನಂಟು ಬಿಟ್ಟಿರಲಿಲ್ಲ.
ಫಾರ್ಮುಲಾ ಒನ್ ಜಗತ್ತಿನ ಜೀವಂತ ದಂತಕಥೆಯಾಗಿರುವ ಶುಮೇಕರ್ ಏಳು ಬಾರಿ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಆದರೆ 2013 ಡಿಸೆಂಬರ್ನಲ್ಲಿ ಫ್ರಾನ್ಸ್ನ ಆಲ್ಫ್ಸ್ ಹಿಮಪರ್ವತದಲ್ಲಿ ಸಾಹಸ ಕ್ರೀಡೆ ಸ್ಕೀಯಿಂಗ್ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಜಾರಿ ಬಿದಿದ್ದರು. ಪರಿಣಾಮ ಹಿಮ ಕಲ್ಲಿಗೆ ತಲೆ ಬಡಿದಿದ್ದರಿಂದ ಗಂಭೀರ ಪೆಟ್ಟಾಗಿ ಕೋಮಾ ಸ್ಥಿತಿಗೆ ತೆರಳಿದ್ದರು. ತದಾ ಬಳಿಕ ನಡೆದ ಮ್ಯಾರಥನ್ ಚಿಕಿತ್ಸೆ ಹಾಗೂ ಅಭಿಮಾನಿಗಳ ಪ್ರಾರ್ಥನೆಯಿಂದಾಗಿ ಪ್ರಜ್ಞಾ ಸ್ಥಿತಿಗೆ ಮರಳುವಲ್ಲಿ ಯಶಸ್ವಿಯಾಗಿದ್ದರು.