ಹೆಚ್ಚಿದ ಬಿಸಿಲ ಧಗೆ- ಸುಟ್ಟು ಭಸ್ಮವಾದವು 15 ಕಾರುಗಳು..!!
ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚುತ್ತಿದ್ದು, ಬಿಸಿಲ ಝಳಕ್ಕೆ ವಾಹನಗಳಲ್ಲೂ ಬೆಂಕಿ ಹೊತ್ತಿಕೊಳ್ಳುತ್ತಿರುವ ಘಟನೆಗಳು ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸುತ್ತಿದೆ.
ಮಾನವನ ದುರಾಸೆಗಳಿಂದಾಗಿ ಪರಿಸರ ಪ್ರಮಾಣ ದಿನದಿಂದ ದಿನಕ್ಕೆ ಕುಗ್ಗುತ್ತಿದ್ದು, ಜಾಗತಿಕ ತಾಪಮಾನದ ಪ್ರಮಾಣ ಹೆಚ್ಚುತ್ತಲೇ ಇದೆ. ಇದೇ ಕಾರಣಕ್ಕೆ ಬಿಸಿಲ ಝಳದಿಂದಾಗಿ ವಾಹನಗಳಲ್ಲೂ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಮುಂಬೈನಲ್ಲಿ 15 ಕಾರುಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ಇದು ಹೇಳಿ ಕೇಳಿ ಬೇಸಿಗೆ ಕಾಲ. ಅದಲ್ಲದೇ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಅತಿಹೆಚ್ಚು ತಾಪಮಾನ ದಾಖಲಾಗುವ ಸಮಯ. ಹೀಗಾಗಿ ವಾಹನಗಳಲ್ಲಿರುವ ಇಂಧನದ ಮೇಲೆ ಪರಿಣಾಮ ಬೀರುವ ಬಿಸಿಲ ಝಳವು ಬೆಂಕಿ ಅನಾಹುತಕ್ಕೂ ಕಾರಣವಾಗುತ್ತಿದೆ.

ಒಂದು ವೇಳೆ ಸುಡುವ ಬಿಸಿಲಿನಲ್ಲಿ ನೀವು ನಿಮ್ಮ ವಾಹನಕ್ಕೆ ಫುಲ್ ಟ್ಯಾಂಕ್ ಮಾಡಿಸುವ ಮುನ್ನ ಒಮ್ಮೆ ಯೋಚನೆ ಮಾಡಲೇಬೇಕು. ಹಾಗೇನಾದ್ರೂ ಫುಲ್ ಟ್ಯಾಂಕ್ ಮಾಡಿಸಿದ್ದೇ ಆದಲ್ಲಿ ಇಂತಹ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ.

ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲೇ ಇಂತಹ ಅನಾಹುತಗಳು ಹೆಚ್ಚು ಸಂಭವಿಸುವ ಬಗ್ಗೆ ವರದಿಯಾಗುತ್ತಿದ್ದು, ಇದಕ್ಕೆ ವೈಜ್ಞಾನಿಕ ಕಾರಣಗಳನ್ನು ತಿಳಿದಾಗ ಜಾಗತಿಕ ತಾಪಮಾನದಿಂದಲೇ ಹಿಗೇಲ್ಲಾ ನಡೆಯುತ್ತಿರುವುದು ದೃಡವಾಗಿದೆ.

ಮುಂಬೈನಲ್ಲೂ ಇಂತದ್ದೇ ಘಟನೆ ಒಂದು ನಡೆದಿದ್ದು, ಬಾಂದ್ರಾದ ವಿದ್ಯಾವಿಹಾರ ಸೊಸೈಟಿ ಆವರಣದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಪಾರ್ಕಿಂಗ್ ಸ್ಥಳದಲ್ಲಿದ್ದ ಸುಮಾರು 15ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿವೆ.

ಘಟನೆ ಕುರಿತು ತನಿಖೆ ನಡೆಸಿದಾಗ ತಿಳಿದು ಬಂದಿದ್ದು ಬೇರೆ ಏನು ಅಲ್ಲಾ. ಅದು ಅತಿಯಾದ ಬಿಸಿಲ ಝಳದಿಂದಾಗಿ ಡೀಸೆಲ್ ಟ್ಯಾಂಕರ್ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಜೊತೆಗೆ ಸುಡುಬಿಸಿಲಿನ ತಾಪಕ್ಕೆ ಅಕ್ಕಪಕ್ಕದಲ್ಲಿದ್ದ ಕಾರುಗಳಿಗೂ ಬೆಂಕಿಯ ಕೆನ್ನಾಲಿಗೆ ಹೊತ್ತಿಕೊಂಡಿತ್ತು.

ಇನ್ನು ಘಟನೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸುಟ್ಟು ಕರಕಲಾಗಿವೆ. ಜೊತೆಗೆ 15ಕ್ಕೂ ಹೆಚ್ಚು ಕಾರುಗಳಿಗೆ ಅಲ್ಪ ಸ್ವಲ್ಪ ಪ್ರಮಾಣದ ಹಾನಿ ಉಂಟಾಗಿದ್ದು, ಇದೆಲ್ಲವು ಜಾಗತಿಕ ತಾಪಮಾನದ ಎಫೆಕ್ಟ್ ಎಂದರೇ ನಾವು ನಂಬಲೇಬೇಕು.

ಇದೇ ಕಾರಣಕ್ಕೆ ನೀವು ನಿಮ್ಮ ವಾಹನಗಳಿಗೆ ಬಿಸಿಲಿನ ಅವಧಿಯಲ್ಲಿ ಖಂಡತವಾಗಿಯೂ ಫುಲ್ ಟ್ಯಾಂಕ್ ಮಾಡಿಸಬೇಡಿ. ಅವಶ್ಯಕತೆ ಇದ್ದಷ್ಟು ಮಾತ್ರ ಡೀಸೆಲ್, ಪೆಟ್ರೋಲ್ ತುಂಬಿಸಿ ನಿಮ್ಮ ವಾಹನವನ್ನು ಇಂತಹ ಅನಾಹುತಗಳಿಂದ ರಕ್ಷಣೆ ಮಾಡಿ.

ಇನ್ನೊಂದು ಪ್ರಮುಖ ವಿಚಾರವೇನೆಂದರೇ ಅತಿಯಾದ ಬಿಸಿಲಿನಲ್ಲಿ ಪುಲ್ಟ್ಯಾಂಕ್ ಆಗಿರುವ ವಾಹನಗಳು ಸ್ಫೋಟಗೊಳ್ಳುವ ಸಾಧ್ಯತೆಗಳಿವೆ. ಇದರಿಂದ ನಿಮ್ಮ ವಾಹನಗಳನ್ನು ಆದಷ್ಟು ನೆರಳು ಇರೋ ಜಾಗದಲ್ಲೇ ಪಾರ್ಕ್ ಮಾಡಿ.

ಮೈಲೇಜ್ ಮೇಲೂ ಪರಿಣಾಮ
ಬೇಸಿಗೆ ಅವಧಿಯಲ್ಲಿ ನಿಮ್ಮ ವಾಹನಗಳು ಖಂಡಿತವಾಗಿ ನೀವು ಅಂದಕೊಂಡಷ್ಟು ಮೈಲೇಜ್ ನೀಡಲಾರವು. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಹಗಲಿನ ವೇಳೆ ಬಿಸಿಲ ಝಳಕ್ಕೆ ವಾಹನದಲ್ಲಿರುವ ಇಂಧನ ಆವಿಯಾಗುತ್ತೆ ಹೀಗಾಗಿ ಮೈಲೇಜ್ ಕಡಿಮೆಯಾಗುವುದು ಸಾಮಾನ್ಯ.

ವಾಹನಗಳ ರಕ್ಷಣೆ ಹೇಗೆ?
ಬೃಹತ್ ನಗರಗಳಲ್ಲಿ ಇದೀಗ ಎಲ್ಲಿ ಹೋದ್ರು ಪಾರ್ಕಿಂಗ್ ಸಮಸ್ಯೆ ಇದ್ದೇ ಇರುತ್ತೆ. ಹೀಗಾಗಿ ಸೂಕ್ತ ಜಾಗದಲ್ಲಿ ಪಾರ್ಕಿಂಗ್ ಮಾಡಲು ಸಾಧ್ಯವಾಗದೇ ಇದ್ದರೂ ಇರುವ ಜಾಗದಲ್ಲೇ ನಿಮ್ಮ ವಾಹನಗಳಗೆ ರಕ್ಷಣಾ ಹೊದಿಕೆಗಳನ್ನು ತಪ್ಪದೇ ಹಾಕಿ. ಇಲ್ಲವಾದಲೇ ಅನಾಹುತ ತಪ್ಪಿದ್ದಲ್ಲ.

ಈ ಎಲ್ಲಾ ಕಾರಣಗಳಿಂದಾಗಿ ನಿಮ್ಮ ವಾಹನದ ಬಗ್ಗೆ ನೀವು ಎಚ್ಚರ ವಹಿಸುವುದು ಒಳಿತು. ಇಲ್ಲವಾದಲ್ಲಿ ನಿಮ್ಮ ನೆಚ್ಚಿನ ವಾಹನದಲ್ಲೂ ಇಂತಹ ಅನಾಹುತ ನಡೆದರು ಅಚ್ಚರಿಯಿಲ್ಲ.

ರಾಜ್ಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟಾಟಾ ವಿನೂತನ ಟಿಗೋರ್ ಕಾರಿನ ಚಿತ್ರಗಳಿಗಾಗಿ ಕೆಳಗಿನ ಫೋಟೋ ಗ್ಯಾಲರಿ ಕ್ಲಿಕ್ ಮಾಡಿ.


Click it and Unblock the Notifications








